ಆ್ಯಪ್ನಗರ

ಬೇಡಕಿಹಾಳದಲ್ಲಿಜನಮನ ಸೆಳೆದ ಕುಸ್ತಿ ಪಂದ್ಯ

ಬೋರಗಾಂವ: ಬೇಡಕಿಹಾಳದಲ್ಲಿದಸರಾ ಮಹೋತ್ಸವ ಪ್ರಯುಕ್ತ ಸಿದ್ದೇಶ್ವರ ಮೈದಾನದಲ್ಲಿ ...

Vijaya Karnataka 11 Oct 2019, 5:00 am
ಬೋರಗಾಂವ: ಬೇಡಕಿಹಾಳದಲ್ಲಿದಸರಾ ಮಹೋತ್ಸವ ಪ್ರಯುಕ್ತ ಸಿದ್ದೇಶ್ವರ ಮೈದಾನದಲ್ಲಿನಡೆದ ಕುಸ್ತಿಪಂದ್ಯ ಜನಮನ ಸೆಳೆಯಿತು.
Vijaya Karnataka Web 10ICH2_53


ಸುಮಾರು 30ಸಾವಿರ ಪ್ರೇಕ್ಷಕರ ಮಧ್ಯೆ ನಡೆದ ಕುಸ್ತಿ ಪಂದ್ಯದಲ್ಲಿಮಹಾರಾಷ್ಟ್ರ ಕೇಸರಿ ಮಲ್ಲಬಾಲಾರಫಿಕ್‌ ಶೇಖ್‌ ತಮ್ಮ ಎದುರಾಳಿ ಜಾರ್ಜಿಯಾ ವರ್ಲ್ಡ್ ಚಾಂಪಿಯನ್‌ ಡೆವಿಡ್‌ ಅವರನ್ನು ಕೇವಲ ಐದು ನಿಮಿಷದಲ್ಲಿಘಿಘಿಸ್ಸಾ ಡಾವ್‌ ಬಳಸಿ ಚಿತ್‌ ಮಾಡಿ ವಿಜಯಿಯಾದರು.

ದ್ವಿತೀಯ ಕ್ರಮಾಂಕದ ಕುಸ್ತಿಯಲ್ಲಿವೀರದೇವ ಕೇಸರಿ ಮಲ್ಲಸಂತೋಷ ದೋರವಡೆ ತಮ್ಮ ಪ್ರತಿಸ್ಪರ್ಧಿ ಇರಾನ್‌ನ ವರ್ಲ್ಡ್ ಚಾಂಪಿಯನ್‌ ಅಭೋಲ್‌ ಫಜಲ್‌ ಅವರಿಗೆ ಘುಟನಾ ಡಾವ್‌ ಬಳಸಿ ಚಿತ್‌ ಮಾಡಿದರು. ಕೊಲ್ಲಾಪುರದ ಉದ್ಯಮಿ ಪ್ರಶಾಂತ ಪಾಟೀಲ ದ್ವಿತೀಯ ಕ್ರಮಾಂಕದ ಕುಸ್ತಿಗೆ ಚಾಲನೆ ನೀಡಿದರು.

ತೃತೀಯ ಕ್ರಮಾಂಕದ ಕುಸ್ತಿಯಲ್ಲಿಡಬಲ್‌ ಕರ್ನಾಟಕ ಕೇಸರಿಮಲ್ಲಕಾರ್ತಿಕ ಕಾಟೆ ಹಾಗೂ ದಿಲ್ಲಿಯ ಮಲ್ಲಜಿತೇಂದ್ರ ಅವರ ನಡುವೆ ಅತ್ಯಂತ ಬಿರುಸಿನ ಸೆಣಸಾಟ ನಡೆಯಿತು. ಸುಮಾರು 40 ನಿಮಿಷಗಳ ನಂತರ ಕುಸ್ತಿಯನ್ನು ಸಮನಾಗಿ ಬಿಡಿಸಲಾಯಿತು.

ಶುಭಂ ಸಿದನಾಳೆ ಹಾಗೂ ದೇವೇಂದ್ರ ಅವರ ನಡುವೆ ನಾಲ್ಕನೇ ಕ್ರಮಾಂಕದ ಕುಸ್ತಿ 40ನಿಮಿಷಗಳ ಕಾಲ ನಡೆದ ನಂತರ ಸಮನಾಗಿ ಬಿಡಿಸಲಾಯಿತು.

ಐದನೇ ಕ್ರಮಾಂಕದ ಕುಸ್ತಿಯಲ್ಲಿನವನಾಥ ಇಂಗಳೆ ಅವರು ರೋಹಿತ್‌ ಬಹಾದ್ದೂರಗಡ ಅವರಿಗೆ ಏಳು ನಿಮಿಷದಲ್ಲಿಝೋಳಿ ಡಾವ್‌ ಬಳಸಿ ಆಕಾಶ ತೋರಿದರು.

ಆರನೇ ಕ್ರಮಾಂಕದ ಕುಸ್ತಿ ಇಂದ್ರಜಿತ್‌ ಮಗದುಮ್ಮ ಹಾಗೂ ಕಿರಣ ಭದ್ರಾವತಿ ನಡುವೆ ನಡೆಯಿತು. ಚಿಕ್ಕೋಡಿ ಸಿಪಿಐ ಬಸವರಾಜ ಮುಕರ್ತಿಹಾಳ ಕುಸ್ತಿಗೆ ಚಾಲನೆ ನೀಡಿದರು. ಆದರೆ ಸುಮಾರು ಅರ್ಧಗಂಟೆಯ ಸೆಣಸಾಟದ ನಂತರ ಸಮನಾಗಿ ಬಿಡಿಸಲಾಯಿತು. ಏಳನೇ ಕ್ರಮಾಂಕದ ಕುಸ್ತಿಯಲ್ಲಿಸಮೀರ್‌ ಶೇಖ್‌ ಅವರು ರೋಹಿತ್‌ ಕಂಗ್ರಾಳಿಯವರಿಗೆ ಸಮೀರ್‌ ಮಚ್ಚಿಲೋಟಾ ಡಾವ್‌ ಬಳಸಿ 15ನಿಮಿಷದಲ್ಲಿಸೋಲಿಸಿದರು.

ಕೊಲ್ಲಾಪುರದ ಉದ್ಯಮಿ ಪ್ರಶಾಂತ ಪಾಟೀಲ, ಡಿವೈಎಸ್‌ಪಿ ಮಿಥುನಕುಮಾರ, ಅಖಿಲ ಭಾರತೀಯ ಕುಸ್ತಿ ಸಂಘಟನೆ ಅಧ್ಯಕ್ಷ ಅರುಣ ಧುಭೆ, ಡಾ. ವಿಲಾಸ ಜೋಷಿ ಸಂಭಾಜಿ ಪಾಟೀಲ ಉಪಸ್ಥಿತಿಯಲ್ಲಿಪ್ರದ್ಯುಮ್ನ ಹಾಗೂ ಪ್ರಶಾಂತ ಪಾಟೀಲ ಮೈದಾನ ಉದ್ಘಾಟಿಸಿದರು.

ಓಂಕಾರ ಚೌಗಲೆ,ಸಿದ್ದಾರ್ಥ ಮುರಕುಂಬಿ,ಸಾಗರ ಸನದಿ,ಸುಶಾಂತ ವಾಘಮೋಡೆ, ಆದೇಶ ಪಾಟೀಲ, ಇಮಾಮ ಹರಿಯಾಣಾ,ಪವನ ಪಾಟೋಳೆ ಸೇರಿದಂತೆ 120ಕ್ಕೂ ಅಧಿಕ ಮಲ್ಲರ ಸೆಣಸಾಟ ನಡೆಯಿತು. ಶಂಕರರಾವ ಬಂಡಗರ, ಸಾಗರ ಮಗದುಮ್ಮ ಅಗನು ಲವಟೆ,ಕಲ್ಲುಕಾರಲೆ, ಪ್ರಕಾಶ ಪೂಜಾರಿ, ಬಬನ್‌ ಚೌಗಲೆ, ಸಂಭಾಜಿ ಪಾಟೀಲ, ಗುರವ ವಸ್ತಾದ,ಬಾಳು ಸುತಾರ, ತಾನಾಜಿ ಬಂಡಗರ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಶಿರಗುಪ್ಪಿಯ ಬಾಲ ಯೋಗಪಟು ಶ್ರೀವರ್ಧನ ಪೂಜಾರಿ ಅವರಿಂದ ಯೋಗಾಸನ ನಡೆಯಿತು. ಪಂದ್ಯದಲ್ಲಿಬಜರಂಗ ಅಬ್ದಾಗಿರಿ ಹಾಗೂ ಸಂಗಡಿಗರ ಹಲಗಿವಾದನ ಪ್ರೇಕ್ಷಕರನ್ನು ಹುರಿದುಂಬಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ