ಬೆಳಗಾವಿ: ಕುಂದಾಪುರದ ಮಹಾಗಣಪತಿ ಪ್ರವಾಸಿ ಯಕ್ಷ ಗಾನ ಮಂಡಳಿ ಮತ್ತು ಕ್ಯಾದಗಿಯ ಆದಿತ್ಯ ಟ್ರಸ್ಟ್ ಸಹಯೋಗದಲ್ಲಿ ಇದೇ ಭಾನುವಾರ (ಆ.5) ಬೆಳಗಾವಿಯ ಚಿಂದೋಡಿ ಲೀಲಾ ರಂಗಮಂದಿರದಲ್ಲಿ ಯಕ್ಷ ಗಾನ ನಡೆಯಲಿದೆ. ಅಂದು ಸಂಜೆ 5.30ರಿಂದ ನಡೆಯುವ ಯಕ್ಷ ಗಾನದಲ್ಲಿ ಕೋಡಿ ವಿಶ್ವನಾಥ ಗಾಣಿಗ, ಪ್ರಸನ್ನ ಶೆಟ್ಟಿಗಾರ, ಜನಾರ್ಧನ ಗುಡಿಗಾರ, ಚಂದ್ರಹಾಸ ಗೌಡ, ವಿಶ್ವನಾಥ ಪೂಜಾರಿ, ಪ್ರಜ್ವಲ ಶೆಟ್ಟಿ, ಉಳ್ಳೂರು ನಾರಾಯಣ, ಪ್ರಶಾಂತ ಆಚಾರಿ, ಕೇಶವ ಆಚಾರಿ ಮುಮ್ಮೇಳದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ. ರಮೇಶ ಭಂಡಾರಿ, ಕ್ಯಾದಗಿ ಮಹಾಬಲೇಶ್ವರ ಭಟ್ ಮತ್ತು ಉಳ್ಳೂರು ಶಂಕರ ಹಾಸ್ಯಗಾರರಾಗಿ ಪಾತ್ರ ನಿರ್ವಹಿಸುವರು. ಸ್ತ್ರೀ ವೇಷದಲ್ಲಿ ಮಾಧವ ನಾಗೂರು, ಹಕ್ಲಾಡಿ ರವೀಂದ್ರ ಶೆಟ್ಟಿ ಮತ್ತು ಪ್ರದೀಪ ಶೆಟ್ಟಿ ಕುಣಿಯಲ್ಲಿದ್ದಾರೆ. ಭಾಗವತರಾಗಿ ರಾಘವೇಂದ್ರ ಮಯ್ಯಮತ್ತು ಸದಾಶಿವ ಅಮಿನ್, ಮೃದಂಗ ವಾದಕರಾಗಿ ರಮೇಶ ಭಂಡಾರಿ, ಚಂಡೆ ವಾದಕರಾಗಿ ರಾಕೇಶ ಮಲ್ಯ ಭಾಗವಹಿಸುವರು.
ಭಾನುವಾರ ಬೆಳಗಾವಿಯಲ್ಲಿ ಯಕ್ಷ ಗಾನ
ಬೆಳಗಾವಿ: ಕುಂದಾಪುರದ ಮಹಾಗಣಪತಿ ಪ್ರವಾಸಿ ಯಕ್ಷ ಗಾನ ಮಂಡಳಿ ಮತ್ತು ಕ್ಯಾದಗಿಯ ಆದಿತ್ಯ ಟ್ರಸ್ಟ್ ಸಹಯೋಗದಲ್ಲಿ ಇದೇ ಭಾನುವಾರ (ಆ...
Vijaya Karnataka 3 Aug 2018, 5:00 am