ಆ್ಯಪ್ನಗರ

ಯಡಿಯೂರಪ್ಪ ಪ್ರಮಾಣವಚನ; ಸಂಭ್ರಮಾಚರಣೆ

ಬೆಳಗಾವಿ: ಬಿಎಸ್‌. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ...

Vijaya Karnataka 27 Jul 2019, 5:00 am
ಬೆಳಗಾವಿ : ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ಕಡೆ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸಂಜೆ ವಿಜಯೋತ್ಸವ ಆಚರಿಸಿದರು.
Vijaya Karnataka Web BEL-26CKD9


ಚಿಕ್ಕೋಡಿಯಲ್ಲಿ ಯುವ ಧುರೀಣ ಬಸವಪ್ರಸಾದ ಜೊಲ್ಲೆ ನೇತೃತ್ವದಲ್ಲಿ ಸಂಸದರ ಕಾರಾರ‍ಯಲಯ ಹಾಗೂ ಬಸವ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ''ಯಡಿಯೂರಪ್ಪನವರು ಕರುನಾಡಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಸಂಕಲ್ಪದೊಂದಿಗೆ ಸುವರ್ಣ ಕರ್ನಾಟಕ ನಿರ್ಮಾಣಕ್ಕೆ ಮುನ್ನುಡಿ ಬರೆಯುವಂತಾಗಲಿ'', ಎಂದು ಅವರು ಆಶಿಸಿದರು.

ನಾಗೇಶ ಕಿವಡ, ಸಂಜಯ ಅರಗಿ, ಸತೀಶ ನೂಲಿ, ದುಂಡಪ್ಪಾ ಡೋಣವಾಡೆ, ಮಹೇಶ ನೂಲಿ, ರಾಜು ಡೋಂಗರೆ, ಸತೀಶ ಅಪ್ಪಾಜಿಗೋಳ, ಸಂತೋಶ ಟವಳೆ, ಅದಮ್‌ ಗಣೇಶವಾಡಿ, ಬಾಬು ಮಿರ್ಜೆ, ಸೋಮು ಗಾವನಾಳೆ, ನಾಗರಾಜ ಮೇದಾರ, ರವಿ ಅಶ್ವತಪುರ, ರವಿ ಸಾವಜಿ, ಅಮೀತ ಮಗದುಮ್ಮ, ಸಂತೋಷ ಸೊಲ್ಲಾಪೂರೆ, ಹಾಲಪ್ಪಾ ಮಾದಪ್ಪಗೋಳ, ವಿಕ್ರಾಂತ ಮಾನೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ತೆಲಸಂಗ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಾಪಂ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ''ಬಡ ಜನರು ಕನಸು ನನಸಾಗಿದೆ. ಜನರಲ್ಲಿ ಮತ್ತೆ ರಾಜ್ಯದ ಅಭಿವೃದ್ಧಿಯ ಕನಸು ಚಿಗುರೊಡೆದಿದೆ'', ಎಂದರು.

ರಾಯಬಾಗದ ಅಭಾಜಿ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಮಂಡಲ ಅಧ್ಯಕ್ಷ ಸದಾನಂದ ಹಳಿಂಗಳಿ, ಇನ್ನು ಮುಂದೆ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹೇಶ ಕರಮಡಿ, ರಾಜು ಮೈಶಾಳೆ, ಸುರೇಶ ಮಾಳಿ, ಚಿದಾನಂದ ಹಳಿಂಗಳಿ, ನಾರಾಯಣ ಮೇತ್ರಿ, ಮಜೀದ ಡಾಂಗೆ, ಏಕನಾಥ ಮಾಚಕನೂರ, ಉದಯ ರೆಡ್ಡಿ, ಬಸವರಾಜ ಡೊಣವಾಡೆ, ಶ್ರೀನಾಥ ಜಾಧವ, ಶಿವಗೌಡ ನಾಯಿಕ, ಉಮೇಶ ಮೇತ್ರಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ