ಆ್ಯಪ್ನಗರ

ಯೋಗ ಜಗತ್ತಿಗೆ ಭಾರತ ನೀಡಿದ ಶ್ರೇಷ್ಠ ಕೊಡುಗೆ

ಅಥಣಿ: ಋುಷಿ ಮುನಿಗಳ ನಾಡಾದ ಭಾರತದಲ್ಲಿ ಯೋಗ ಪ್ರಾಚೀನ ಕಾಲದಿಂದಲೂ ತನ್ನ ಮಹತ್ವ ಉಳಿಸಿಕೊಂಡು ಬಂದಿದ್ದು, ಇಂದು ಈಡೀ ಜಗತ್ತೇ ಭಾರತದತ್ತ ಹೊರಳಿ ನೋಡುವಂತೆ ...

Vijaya Karnataka 2 Dec 2018, 5:00 am
ಅಥಣಿ : ಋುಷಿ ಮುನಿಗಳ ನಾಡಾದ ಭಾರತದಲ್ಲಿ ಯೋಗ ಪ್ರಾಚೀನ ಕಾಲದಿಂದಲೂ ತನ್ನ ಮಹತ್ವ ಉಳಿಸಿಕೊಂಡು ಬಂದಿದ್ದು, ಇಂದು ಈಡೀ ಜಗತ್ತೇ ಭಾರತದತ್ತ ಹೊರಳಿ ನೋಡುವಂತೆ ಮಾಡಿದೆ ಎಂದು ಜೆಇ ಶಿಕ್ಷ ಣ ಸಂಸ್ಥೆಯ ಕಾರ್ಯಾಧ್ಯಕ್ಷ ಅರವಿಂದರಾವ ದೇಶಪಾಂಡೆ ಹೇಳಿದರು.
Vijaya Karnataka Web BEL-01 ATHANI-01


ಇಲ್ಲಿಯ ಭೋಜರಾಜ ಕ್ರೀಡಾಂಗಣದಲ್ಲಿ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿಯವರು ನಡೆಸಿಕೊಡುತ್ತಿರುವ ಯೋಗ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಯೋಗ ಭಾರತ ಜಗತ್ತಿಗೆ ನೀಡಿದ ಶ್ರೇಷ್ಠ ಕೊಡುಗೆಯಾಗಿದ್ದು ಯೋಗ ಶಿಕ್ಷ ಕರನ್ನು ತರಬೇತಿಗೊಳಿಸಿ ಹೊರದೇಶಗಳಿಗೆ ನೀಡುವ ಮಹತ್ವದ ಜವಾಬ್ದಾರಿ ಭಾರತದ ಮೇಲಿದೆ ಎಂದರು.

ಶ್ರೀ ವಚನಾನಂದ ಸ್ವಾಮೀಜಿ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಈ ಸಮಯದಲ್ಲಿ ಪತಂಜಲಿ ಯೋಗ ಪೀಠದ ಕೃಷಿ ರಾಜ್ಯ ಪ್ರಭಾರಿ ಸಂಜಯ ಕುಸ್ತಿಗಾರ, ಯೋಗ ಶಿಕ್ಷ ಕರಾದ ಎಂ ಎ ಪಾಟೀಲ, ಶಿವಪುತ್ರ ಯಾದವಾಡ, ಅರ್ಜುನ ದೇವರು, ಸದಾಶಿವ ಚಿಕ್ಕಟ್ಟಿ, ಅಶೋಕ ಜಗದೇವ, ಶಿವಾನಂದ ಮಾಲಗಾಂವಿ ಉಪಸ್ಥಿತರಿದ್ದರು.

ಯೋಗ ಗುರು ಎಸ್‌.ಕೆ. ಹೊಳೆಪ್ಪನವರ ಸ್ವಾಗತಿಸಿದರು. ಡಾ. ಆರ್‌.ಎಸ್‌. ದೊಡ್ಡನಿಂಪ್ಪಗೋಳ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ