ಯುವ ರೈತ ಆತ್ಮಹತ್ಯೆ
ಗ್ರಾಮದ ನಿವಾಸಿ, ಯುವ ರೈತ ಮಹಾಂತೇಶ ಅಪ್ಪಣ್ಣ ಮೆಣಶಿನಕಾಯಿ (27) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ...
Vijaya Karnataka 13 Nov 2019, 5:00 am
ನೇಸರಗಿ: ಗ್ರಾಮದ ನಿವಾಸಿ, ಯುವ ರೈತ ಮಹಾಂತೇಶ ಅಪ್ಪಣ್ಣ ಮೆಣಶಿನಕಾಯಿ (27) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸಿ ತೀವ್ರ ಅಸ್ವಸ್ಥರಾದ ಅವರನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಹಾಂತೇಶ ಹಾಗೂ ಅವರ ತಂದೆ ಅಪ್ಪಣ್ಣ 90 ಸಾವಿರ ರೂ. ಸಾಲ ಪಡೆದಿದ್ದರು. ಆದರೆ, ಮಳೆಯಿಂದ ಬೆಳೆ ಹಾನಿಯಾಗಿತ್ತು. ಇದರಿಂದ ಮಹಾಂತೇಶ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿತಿಳಿಸಲಾಗಿದೆ. ನೇಸರಗಿ ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿದೆ.