ಆ್ಯಪ್ನಗರ

ಯುವಕನ ಮೇಲೆ ಸ್ನೇಹಿತರಿಂದಲೇ ಹಲ್ಲೆ

ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಬಾಳೆಕುಂದ್ರಿ ಕೆಎಚ್‌...

Vijaya Karnataka 28 Aug 2018, 5:00 am
ಬೆಳಗಾವಿ: ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಬಾಳೆಕುಂದ್ರಿ ಕೆ.ಎಚ್‌. ಗ್ರಾಮದ ನಿವಾಸಿ ಅಬ್ದುಲ್‌ ನಾಜೀಮ್‌ಗೌಸ್‌ ಬಾಗೇವಾಡಿ ಗಾಯಾಳು. ಸಾಂಬ್ರಾ ಬಳಿಯ ಡಾಬಾದಲ್ಲಿ ಊಟ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಅಬ್ದುಲ್‌ ಮೇಲೆ ಆತನ ನಾಲ್ವರು ಸ್ನೇಹಿತರೇ ಹಲ್ಲೆ ನಡೆಸಿದ್ದಾರೆ. ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿರುವುದರಿಂದ ಅಬ್ದುಲ್‌ ತಲೆಗೆ ಗಂಭೀರ ಗಾಯಗಳಾಗಿವೆ. ಈ ಕುರಿತು ಅಬ್ದುಲ್‌ ತಂದೆ ಮಾರಿಹಾಳ ಪೊಲೀಸ್‌ ಠಾಣೆಯಲ್ಲಿ ಅಬ್ದುಲ್‌ ಸ್ನೇಹಿತರಾದ ಬಾಳೇಕುಂದ್ರಿ ಕೆ.ಎಚ್‌. ಗ್ರಾಮದ ಪವನ ರಾಮಚನ್ನವರ, ಅಜಯ ಕಿತ್ರೋಜಿ, ಮುರುಳಿ ಬಳ್ಳಾರಿ ಮತ್ತು ಗುಂಡು ರಾಮಚನ್ನವರ ಮೇಲೆ ದೂರು ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ