ಆ್ಯಪ್ನಗರ

ಯುವಕ ಆತ್ಮಹತ್ಯೆ : ದೂರು ದಾಖಲು

ತಾಲೂಕಿನ ನೇಗಿನಹಾಳ ಗ್ರಾಮದದಲ್ಲಿ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಫಕ್ಕೀರಪ್ಪಾ ಕುಲಗೋಡ (24) ಮೃತಪಟ್ಟವ...

Vijaya Karnataka 20 Aug 2018, 5:00 am
ಬೈಲಹೊಂಗಲ: ತಾಲೂಕಿನ ನೇಗಿನಹಾಳ ಗ್ರಾಮದದಲ್ಲಿ ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Vijaya Karnataka Web young man commits suicide complaint lodged
ಯುವಕ ಆತ್ಮಹತ್ಯೆ : ದೂರು ದಾಖಲು


ಫಕ್ಕೀರಪ್ಪಾ ಕುಲಗೋಡ (24) ಮೃತಪಟ್ಟವ. ನಾಗಪ್ಪಾ ಮಲ್ಲಪ್ಪಾ ತಳವಾರ, ಮಂಜುನಾಥ ನಾಗಪ್ಪಾ ತಳವಾರ ಸೇರಿದಂತೆ ಒಟ್ಟು 8 ಜನರ ಕಿರುಕುಳದಿಂದ ತಮ್ಮ ಮಗ ಫಕ್ಕೀರಪ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಂದೆ ಯಲ್ಲಪ್ಪಾ ಕುಲಗೋಡ ಬೈಲಹೊಂಗಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಸ್‌ಐ ಎಂ.ಎಸ್‌.ಹೂಗಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಾರೆ.

ಕೊಲೆ ಯತ್ನ: ಆರೋಪಿ ಬಂಧನ:
ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಸಂಬಂಧಿಕರನ್ನೇ ಕೊಲೆ ಮಾಡಲು ಯತ್ನಿಸಿದ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೂರಯ್ಯಾ ಶಾಬುದ್ದೀನ್‌ ಕುದುನವರ (40), ಮಾಸಾಬಿ ಶಾಬುದ್ದೀನ್‌ ಕುದುನವರ (70) ಹಲ್ಲೆಗೊಳಗಾದವರು. ಇವರನ್ನು ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಸೇನ್‌ಸಾಬ್‌ ಹಾಜಿಸಾಬ್‌ ಕುದುನವರ (34) ಬಂಧಿತ ಆರೋಪಿ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ