ಆ್ಯಪ್ನಗರ

ಜಾತ್ರೆಯ ನಂತರ ಬಿದ್ದ ಕಸ ಸ್ವಚ್ಛಗೊಳಿಸಿದ ಯುವಕರು

ಚಿಕ್ಕೋಡಿ: ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವ ಜತೆಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವ ಮೂಲಕ ಆರೋಗ್ಯವಂತ ಸಮಾಜ ...

Vijaya Karnataka 25 May 2019, 5:00 am
ಚಿಕ್ಕೋಡಿ : ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡುವ ಜತೆಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬಿಜೆಪಿಯ ಕಾನೂನು ಮತ್ತು ಸಂಸದೀಯ ಪ್ರಕೋಷ್ಟದ ಜಿಲ್ಲಾ ಸಂಚಾಲಕ ದೇವರಾಜ ಬಸ್ತವಾಡೆ ಹೇಳಿದರು.
Vijaya Karnataka Web BEL-24CKD2


ಅವರು ತಾಲೂಕಿನ ಬೆಳಕೂಡ ಗ್ರಾಮದಲ್ಲಿ ನಾಲ್ಕು ದಿನಗಳ ಕಾಲ ಸಂಭ್ರಮದಿಂದ ನಡೆದ ಲಕ್ಷ್ಮೀದೇವಿ ಮತ್ತು ಹನುಮಾನ ಜಾತ್ರೆಯ ನಂತರ ಗ್ರಾಮದ ಯುವಕರು ಸ್ವಚ್ಛ ಭಾರತ ಅಭಿಯಾನ ನಿಮಿತ್ತ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ವೇಳೆ ಮಲ್ಲಪ್ಪ ಅರಭಾಂವಿ, ಈಶ್ವರ ದೊಡಮನಿ, ವಿರುಪಾಕ್ಷಿ ಶಿವಪೂಜೆ, ಸಂತೋಷ ನವಲಿಹಾಳ, ಅನೀಲಕುಮಾರ ದಲಾಲ, ಸುನೀಲ ಮಾಳಿ, ಸಂಜು ಮುಗಳಿ, ಸಂಗಮೇಶ ಸಂಕಣ್ಣವರ, ಪುಂಡಲೀಕ ಕಾಮಗೌಡ, ಈರಪ್ಪ ಸೊಲ್ಲಾಪೂರೆ, ಓಂಕಾರ ಬಸ್ತವಾಡೆ, ಸಂತೋಷ ಕಂಬಾರ, ಅಕ್ಷ ಯ ಹಿರೇಮಠ, ಸುರೇಶ ಶೀರಗಾಂವಿ, ಮಹೇಶ ನವಲಿಹಾಳ ಹಾಗೂ ಬಿಜೆಪಿ ಕಾರ್ಯಕರ್ತರು ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ