ಆ್ಯಪ್ನಗರ

ಪಿಂಚಣಿ ಫೈಟ್

ನಿಶ್ಚಿತ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿರುವ ಕೇಂದ್ರ ಸರಕಾರದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ವಿಕ ಸುದ್ದಿಲೋಕ 26 Feb 2016, 6:43 am
ಬಳ್ಳಾರಿ; ನಿಶ್ಚಿತ ಪಿಂಚಣಿ ಯೋಜನೆಯನ್ನು ರದ್ದು ಪಡಿಸಿರುವ ಕೇಂದ್ರ ಸರಕಾರದ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
Vijaya Karnataka Web
ಪಿಂಚಣಿ ಫೈಟ್


ನಾನಾ ಬೇಡಿಕೆ ಈಡೇರಿಸಲು ಒತ್ತಾಯಿಸಿ ಡಿಸಿ ಕಚೇರಿಗೆ ಆಗಮಿಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ರವಾನಿಸಿದರು. ನೌಕರರ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ರೂಪಿಸಿದ ನಿಶ್ಚಿತ ಪಿಂಚಣಿ ಯೋಜನೆಯನ್ನು ಕೇಂದ್ರ ಸರಕಾರ ಏ.1, 2014 ರಿಂದ ರದ್ದುಪಡಿಸಿರುವುದು ಸರಿಯಲ್ಲ. ಏ.1, 2006ರ ನಂತರ ಸರಕಾರಿ ಸೇವೆಗೆ ನೇಮಕವಾದವರಿಗೆ ರಾಜ್ಯ ಸರಕಾರ ನಿಶ್ಚಿತ ಪಿಂಚಣಿ ರದ್ದು ಮಾಡಿದ್ದು, ಸರಿಯಲ್ಲ. ಯಶವಂತ ಸಿನ್ಹಾ ನೇತೃತ್ವದ ಪಾರ್ಲಿಮೆಂಟರಿ ಸ್ಟ್ಯಾಂಡಿಂಗ್ ಕಮಿಟಿ, ಎನ್‌ಪಿಎಸ್ ನೌಕರರ ವಂತಿಗೆ ಹಣಕ್ಕೆ ಕನಿಷ್ಠ ಭದ್ರತೆ ಹಾಗೂ ಸರಕಾರ ನಿಗದಿ ಮಾಡುವ ಕನಿಷ್ಠ ಬಡ್ಡಿ ದರದೊಂದಿಗೆ ಪಿಂಚಣಿ ಹಣ ಹಿಂತಿರುಗಿಸುವ ಕುರಿತು ಶಿಫಾರಸು ಮಾಡಿತ್ತು. ಪಿಎಫ್‌ಆರ್‌ಡಿಎ ಕಾಯಿದೆಯಲ್ಲಿ ಈ ಶಿಫಾರಸು ಅಳವಡಿಸಿಲ್ಲ. ಪಿಎಫ್‌ಆರ್‌ಡಿಎ ಕಾಯಿದೆಯ ಕಲಂ20(2)(ಜಿ) ಮಾರುಕಟ್ಟೆ ಆಧರಿತ ಫಲ ಹೊರತಾಗಿ ಯಾವುದೇ ಇತರ ನೇರ ಅಥವಾ ಪರೋಕ್ಷ ಭರವಸೆಯನ್ನು ನೀಡಿಲ್ಲ. ಕಾಯಿದೆಯ ಅನ್ವಯ ನೌಕರರ ವಂತಿಗೆ ಹಣಕ್ಕೆ ಯಾವುದೇ ಕನಿಷ್ಠ ಭದ್ರತೆಯನ್ನು ನೀಡಿಲ್ಲ. ಇದು ನೌಕರರ ಸಂಧ್ಯಾ ಕಾಲದ ಜೀವನವನ್ನು ಅಭದ್ರತೆಗೆ ತಳ್ಳಲು ಕಾರಣವಾಗಿದೆ ಎಂದು ದೂರಿದರು. ಎನ್‌ಪಿಎಸ್ ಯೋಜನೆಯಡಿಯಲ್ಲಿ ಸಂಗ್ರಹವಾಗಿರುವ ನಮ್ಮ ಹಣಕ್ಕೆ ಭದ್ರತೆ ನೀಡುವ ಜವಾಬ್ದಾರಿಯನ್ನು ಸರಕಾರ ಹೊರಬೇಕು. ಎನ್‌ಪಿಎಸ್ ಯೋಜನೆ ರದ್ದುಪಡಿಸಿ ಈ ಹಿಂದಿನಂತೆ ಸರಕಾರವೂ ನಿಶ್ಚಿತ ಪೆನ್ಷನ್ ನೀತಿಯನ್ನು ಜಾರಿಗೆ ತರಬೇಕು. ನೌಕರರ ಪೆನ್ಷನ್ ಸರಕಾರದ ಖಜಾ

ನೆಯಿಂದಲೇ ನೀಡಬೇಕು, ಈಗಾಗಲೇ ಅಕಾಲಿಕ ಮರಣ ಹೊಂದಿರುವ ಎನ್‌ಪಿಎಸ್ ನೌಕರರ ಅವಲಂಬಿತರಿಗೆ ನಿಗದಿತ ಪೆನ್ಷನ್ ಖಾತರಿಪಡಿಸಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ನಗರದ ಗಡಗಿ ಚನ್ನಪ್ಪ ವೃತ್ತದಿಂದ ಜಿಲ್ಲಾ ಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ಜಿ.ವೈ.ತಿಪ್ಪಾರೆಡ್ಡಿ, ಎ.ಎಸ್.ಬೂಮೇಶ್ವರ್ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ