ಆ್ಯಪ್ನಗರ

ರಾರಾವಿಯಲ್ಲಿ ರೈತ ಸ್ನೇಹಿ ಜಾತ್ರೆ

ಗ್ರಾಮೀಣ ಭಾಗದಲ್ಲಿನ ಜಾತ್ರೆ, ಉತ್ಸವಗಳ ಪೈಕಿ ಕೆಲವು ಜಾತ್ರೆ ವಿಶಿಷ್ಟ ಸ್ಥಾನ ಗಳಿಸಿದ್ದು, ರಾರಾವಿಯಲ್ಲಿ ಹುತ್ತಿನ ಯಲ್ಲಮ್ಮ ಜಾತ್ರೆ ಜಾನುವಾರು ಸಂತೆಯ ಕಾರಣಕ್ಕೆ ಗಮನ ಸೆಳೆದಿದೆ.

ವಿಕ ಸುದ್ದಿಲೋಕ 29 Feb 2016, 5:46 am
ಸಿರುಗುಪ್ಪ; ಗ್ರಾಮೀಣ ಭಾಗದಲ್ಲಿನ ಜಾತ್ರೆ, ಉತ್ಸವಗಳ ಪೈಕಿ ಕೆಲವು ಜಾತ್ರೆ ವಿಶಿಷ್ಟ ಸ್ಥಾನ ಗಳಿಸಿದ್ದು, ರಾರಾವಿಯಲ್ಲಿ ಹುತ್ತಿನ ಯಲ್ಲಮ್ಮ ಜಾತ್ರೆ ಜಾನುವಾರು ಸಂತೆಯ ಕಾರಣಕ್ಕೆ ಗಮನ ಸೆಳೆದಿದೆ.
Vijaya Karnataka Web
ರಾರಾವಿಯಲ್ಲಿ ರೈತ ಸ್ನೇಹಿ ಜಾತ್ರೆ


ಫೆ.24 ರಿಂದ ಆರಂಭವಾಗಿರುವ ಈ ಜಾತ್ರೆಯಲ್ಲಿ ಜಾನುವಾರುಗಳ ಸಂತೆ ವಿಶಿಷ್ಟವಾಗಿದ್ದು, ರಾಯಲಸೀಮಾದ ಎತ್ತುಗಳು ಇಲ್ಲಿನ ಪ್ರಮುಖ ಆಕರ್ಷಣೆ. ಸುತ್ತಲಿನ ಪ್ರದೇಶಗಳ ಪೈಕಿ ದೊಡ್ಡ ಜಾತ್ರೆ ಎನ್ನುವ ಹಿರಿಮೆಗೆ ಪಾತ್ರವಾಗಿದ್ದು, ರಾಜ್ಯ ಸೇರಿದಂತೆ ಹೊರರಾಜ್ಯದಿಂದಲೂ ರೈತರು ಜಾನುವಾರು ಮಾರಾಟ, ಖರೀದಿಗೆ ಆಗಮಿಸುತ್ತಾರೆ. ಕೆಲ ಉತ್ತಮ ತಳಿಯ ಜೋಡೆತ್ತುಗಳು 1 ರಿಂದ 1.5 ಲಕ್ಷ ರೂ.ವರೆಗೆ ಮಾರಾಟವಾಗಿ ದಾಖಲೆ ನಿರ್ಮಿಸುವುದು ಇಲ್ಲಿನ ಹೆಗ್ಗಳಿಕೆ.

ಫೆಮಸ್ ತಳಿಗಳು: ತಾಲೂಕಿನ ಗಡಿಭಾಗ ಆಂಧ್ರಪ್ರದೇಶದ ಕೋಸ್ಗಿ, ಆದೋನಿ, ಎಳ್ಳಾರ್ತಿ, ಹೊಳಗುಂದಿ, ನಂದ್ಯಾಲ್, ಒಂಗೋಲು ಭಾಗದಿಂದ ಎತ್ತುಗಳನ್ನು ಮಾರಾಟ ತರಲಾಗುತ್ತಿದೆ. ಸ್ಥಳೀಯ ತಳಿಗಳು ಸೇರಿದಂತೆ ರಾಜ್ಯದ ಚಿಂತಾಮಣಿ, ಬಾಗಲಕೋಟೆ, ಯಾದಗಿರಿ ಭಾಗದಿಂದ ರಾಸುಗಳನ್ನು ತರುತ್ತಾರೆ. ಉಳುಮೆಗೆ ಸೂಕ್ತವಾದ ಒಂಗೋಲ್, ಕಿಲಾರಿ, ಸರಕು ಸಾಗಣೆಗೆ ನೆರವಾಗುವ ಕಿಲಾರಿ, ಜವಾರಿ, ಸೀಮೆ, ಹಳ್ಳಿಕಾರ್, ದೇವಣಿ, ಜರ್ಸಿ ಎತ್ತುಗಳು ಕಡಿಮೆ ಬೆಲೆಯಲ್ಲಿ ಮಾರಾಟವಾಗುವುದರಿಂದ ಮಧ್ಯಮ ವರ್ಗದ ರೈತರಿಗೆ ಈ ಜಾತ್ರೆ ವರವೆನಿಸಿದೆ.

ದುಬಾರಿ ಎತ್ತುಗಳು: ಸಂತೆಕೂಡ್ಲೂರು ಗ್ರಾಮದ ಈರಣ್ಣ ಎನ್ನುವ ರೈತನ ಕಿಲಾರಿ ತಳಿಯ ಎತ್ತುಗಳು 1 ಲಕ್ಷ 40 ಸಾವಿರ ರೂ.ಬೆಲೆಯಿದೆ. ಕುರುವಳ್ಳಿ ಗ್ರಾಮದ ರೈತ ರಾಘವೇಂದ್ರ ಎನ್ನುವ ರೈತರ ಕಿಲಾರಿ ಎತ್ತುಗಳ ಬೆಲೆ 1 ಲಕ್ಷ 80 ಸಾವಿರ ರೂ.ಬೆಲೆಯಿದೆ. ಈ ಎರಡು ಜೋಡಿ ಎತ್ತುಗಳನ್ನು ಗಮನಿಸಿದ ರೈತರು, ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ