ಆ್ಯಪ್ನಗರ

ಸಾಲಬಾಧೆ: ರೈತ ಆತ್ಮಹತ್ಯೆ

ತಾಲೂಕಿನ ಬೀರಬ್ಬಿಯಲ್ಲಿ ಸಾಲಬಾಧೆ ತಾಳದ ಶಿವಪ್ಪ ಹೆಬ್ಬಾಳ(60), ವಿಷ ಕುಡಿದು ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಕ ಸುದ್ದಿಲೋಕ 15 Mar 2016, 7:41 am
ಹೂವಿನಹಡಗಲಿ (ಬಳ್ಳಾರಿ); ತಾಲೂಕಿನ ಬೀರಬ್ಬಿಯಲ್ಲಿ ಸಾಲಬಾಧೆ ತಾಳದ ಶಿವಪ್ಪ ಹೆಬ್ಬಾಳ(60), ವಿಷ ಕುಡಿದು ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web
ಸಾಲಬಾಧೆ: ರೈತ ಆತ್ಮಹತ್ಯೆ


ಕೃಷಿ ಚಟುವಟಿಕೆಗಾಗಿ ಹರಿಹರದ ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ 3.40ಲಕ್ಷ ರೂ. ಹಾಗೂ ಖಾಸಗಿ ಲೇವಾದೇವಿದಾರರ ಬಳಿ 1.60 ಲಕ್ಷ ರೂ. ಸೇರಿ ಒಟ್ಟು 5ಲಕ್ಷ ರೂ. ಸಾಲ ಮಾಡಿದ್ದರು. ಈ ರೈತನ ಹೆಸರಲ್ಲಿ 9ಎಕರೆ ಜಮೀನಿದೆ. ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಮುಂಗಾರು, ಹಿಂಗಾರು ಎರಡೂ ಬೆಳೆ ಕೈಕೊಟ್ಟಿದ್ದರಿಂದ ಸಾಲದ ಶೂಲಕ್ಕೆ ಸಿಲುಕಿದ್ದರು. ವಿಷ ಕುಡಿದು ತೀವ್ರ ಅಸ್ವಸ್ಥನಾದ ರೈತನನ್ನು ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸಲಿಲ್ಲ. ಈ ರೈತನಿಗೆ ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರಿದ್ದಾರೆ. ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ