ಆ್ಯಪ್ನಗರ

ಪಡಿತರ ಕಾರ್ಡ್, ಕ್ರಮಕ್ಕೆ ಒತ್ತಾಯಿಸಿ ಮನವಿ

ಪಡಿತರ ಕಾರ್ಡ್ ಹಂಚಿಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ವಿರೋಧ ಸಂಸ್ಥೆಯ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಎಂ.ಸುನಿತಾ ಅವರಿಗೆ ಮನವಿ ಸಲ್ಲಿಸಿದರು.

ವಿಕ ಸುದ್ದಿಲೋಕ 30 Mar 2016, 7:14 am
ಸಿರುಗುಪ್ಪ; ಪಡಿತರ ಕಾರ್ಡ್ ಹಂಚಿಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ವಿರೋಧ ಸಂಸ್ಥೆಯ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಎಂ.ಸುನಿತಾ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web
ಪಡಿತರ ಕಾರ್ಡ್, ಕ್ರಮಕ್ಕೆ ಒತ್ತಾಯಿಸಿ ಮನವಿ


ಸಂಸ್ಥೆಯ ತಾಲೂಕ ಅಧ್ಯಕ್ಷ ಮೆಹಾಬೂಬು ಮಾತನಾಡಿ, ಸರಕಾರಿ ಯೋಜನೆಯ ಲಾಭ ಪಡೆಯಲು ಪಡಿತರ ಕಾರ್ಡ್ ಅವಶ್ಯ. ಕಾರ್ಡ್‌ಗಾಗಿ ನಿತ್ಯವೂ ಸರದಿ ನಿಲ್ಲಬೇಕಿದೆ. ಬಡ ಅರ್ಹ ಫಲಾನುಭವಿಗಳಿಗೆ ಪಡಿತರ ಕಾರ್ಡ್ ವಿತರಣೆಗೆ ಪ್ರತ್ಯೇಕವಾಗಿ ಸಿಬ್ಬಂದಿ ನಿಯೋಜಿಸಬೇಕು. ಕಾರ್ಡ್ ವಿತರಣೆ ವೇಳೆಯಲ್ಲಿ ಉಂಟಾಗುವ ವಿದ್ಯುತ್ ಸಮಸ್ಯೆಯನ್ನು ತಪ್ಪಿಸಲು ಮುಂದಾಗಬೇಕು. ಬೆಳಗ್ಗೆಯಿಂದ ಸರದಿ ನಿಂತವರೂ ಸಂಜೆಯವೇಳೆಗೆ ಬರಿಗೈಲೇ ಮನೆ ದಾರಿ ಹಿಡಿಯಬೇಕಾದ ಸಮಸ್ಯೆಯನ್ನು ತಪ್ಪಿಸಬೇಕು. ಎಲ್ಲ ಅರ್ಹರಿಗೂ ಪಡಿತರ ಕಾರ್ಡ ಸಿಗಬೇಕು ಎಂದರು. ಸಂಸ್ಥೆಯ ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ಎನ್.ಮೈನುದ್ದೀನ್, ನೂರುಸಾಬ್, ರಾಘವೇಂದ್ರ, ಯು.ವೆಂಕೋಬ ಸೇರಿದಂತೆ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ