ಆ್ಯಪ್ನಗರ

ಪರಿಸರ ಸಂರಕ್ಷಣೆಗೆ ಸಲಹೆ

ಅರಣ್ಯ ಸಂಪತ್ತು ರಕ್ಷಿಸಬೇಕು. ಮನೆ ಹಾಗೂ ಸುತ್ತಮುತ್ತಲೂ ಸಸಿ ನೆಟ್ಟು ಪೋಷಿಸಬೇಕು. ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಇದೆ ಮದ್ದು ಎಂದು ಪಟ್ಟಣದ ದೇಗುಲ ಸಮಿತಿ ಅಧ್ಯಕ್ಷ ಬಿ.ಮಂಜುನಾಥ ಹೇಳಿದರು.

ವಿಕ ಸುದ್ದಿಲೋಕ 5 Apr 2016, 7:33 am
ಕಂಪ್ಲಿ; ಅರಣ್ಯ ಸಂಪತ್ತು ರಕ್ಷಿಸಬೇಕು. ಮನೆ ಹಾಗೂ ಸುತ್ತಮುತ್ತಲೂ ಸಸಿ ನೆಟ್ಟು ಪೋಷಿಸಬೇಕು. ಜಾಗತಿಕ ತಾಪಮಾನ ನಿಯಂತ್ರಣಕ್ಕೆ
Vijaya Karnataka Web
ಪರಿಸರ ಸಂರಕ್ಷಣೆಗೆ ಸಲಹೆ


ಇದೆ ಮದ್ದು ಎಂದು ಪಟ್ಟಣದ ದೇಗುಲ ಸಮಿತಿ ಅಧ್ಯಕ್ಷ ಬಿ.ಮಂಜುನಾಥ ಹೇಳಿದರು.

ಸಮೀಪದ ರಾಮಸಾಗರದಲ್ಲಿ, ಚೇತನ ನಗರ ಮತ್ತು ಗ್ರಾಮೀಣ ಅಭಿವದ್ದಿ ಸಂಸ್ಥೆಯಿಂದ, ಬಂಡೆ ಆಂಜನೇಯ ಸ್ವಾಮಿ ದೇಗುಲದ ಪರಿಸರದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಪರಿಸರ ರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ತಾಳಿದ್ದೇ ಆದರೆ ಮುಂದೊಂದು ದಿನ ಪಾಠ ಕಲಿಯಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಸಂಸ್ಥೆ ಅಧ್ಯಕ್ಷ ಕೆ.ಧರ್ಮರಾಜ್ ಮಾತನಾಡಿದರು. ಕರ್ನಾಟಕ ಜನಶಕ್ತಿ ಅಧ್ಯಕ್ಷ ಹಾದಿಮನಿ ಕಾಳಿಂಗವರ್ಧನ, ಸಂಸ್ಥೆ ಉಪಾಧ್ಯಕ್ಷ ಜಂತಕಲ್ ಪಂಪಾಪತಿ, ಪ್ರಮುಖರಾದ ಎನ್.ಚಂದ್ರಕುಮಾರ್, ಈಡಿಗರ ಜಗದೀಶ, ನಾಯಕರ ಆನಂದ್, ಶಿವಪ್ಪ, ಬಿ.ಸೋಮಶೇಖರ, ಕೆ.ರವಿ, ಹೊನ್ನೂರಸ್ವಾಮಿ, ಬಿ.ಚಂದು, ಕೆ.ಮಂಜುನಾಥ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ