ಆ್ಯಪ್ನಗರ

ಅದಿರು ಲಾರಿ ಅಬ್ಬರ, ಟ್ರಾಫಿಕ್‌ಗೆ ತತ್ತರ

ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ತೋರಣಗಲ್ಲು ರಸ್ತೆಯ ಮುರಾರಿಪುರ ಬಳಿ ಎಂಎಂಎಲ್ ಗಣಿಗೆ ತೆರಳುವ 200 ಕ್ಕೂ ಹೆಚ್ಚು ಲಾರಿಗಳು ಏಕಾಏಕಿಯಾಗಿ ನುಗ್ಗಿದ ಪರಿಣಾಮ ಬುಧವಾರ ಗಂಟೆಗೂ ಹೆಚ್ಚುಕಾಲ ಟ್ರಾಫಿಕ್ ಜಾಮ್ ತಲೆದೋರಿತು.

ವಿಕ ಸುದ್ದಿಲೋಕ 30 Apr 2016, 5:06 am
ಸಂಡೂರು; ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ತೋರಣಗಲ್ಲು ರಸ್ತೆಯ ಮುರಾರಿಪುರ ಬಳಿ ಎಂಎಂಎಲ್ ಗಣಿಗೆ ತೆರಳುವ 200 ಕ್ಕೂ ಹೆಚ್ಚು ಲಾರಿಗಳು ಏಕಾಏಕಿಯಾಗಿ ನುಗ್ಗಿದ ಪರಿಣಾಮ ಬುಧವಾರ ಗಂಟೆಗೂ ಹೆಚ್ಚುಕಾಲ ಟ್ರಾಫಿಕ್ ಜಾಮ್ ತಲೆದೋರಿತು.
Vijaya Karnataka Web
ಅದಿರು ಲಾರಿ ಅಬ್ಬರ, ಟ್ರಾಫಿಕ್‌ಗೆ ತತ್ತರ


ಕುರೇಕುಪ್ಪ ಪುರಸಭೆ ಚುನಾವಣೆಯ ಮತ ಎಣಿಕೆಗೆ ತೋರಣಗಲ್ಲುಗೆ ತೆರಳುವ ಮತ್ತು ವಾಪಸ್ ಆಗುವ ಸಿಬ್ಬಂದಿ, ಪೊಲೀಸರಿಗೂ ಟ್ರಾಫಿಕ್ ಜಾಮ್‌ನ ಬಿಸಿ ತಟ್ಟಿತು.

ಸರಕಾರಿ ಬಸ್, ಖಾಸಗಿ ವಾಹನಗಳು, ಬೈಕ್ ಸವಾರರು ಟ್ರಾಫಿಕ್‌ನಲ್ಲಿ ಸಿಕ್ಕಿ ಕಿರಿಕಿರಿ ಅನುಭವಿಸಿದರು. ಬಿಸಿಲ ಹೊಡೆತ, ಧೂಳಿನ ಸಿಂಚನದ ಕಾರಣ ಪ್ರಯಾಣಿಕರು ಹೈರಾಣಾದರು. ಕೊನೆಗೆ 4-5 ಜನ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಡ್ಡಾದಿಡ್ಡಿ ನುಗ್ಗಿ ಟ್ರಾಫಿಕ್ ಜಾಮ್‌ಗೆ ಕಾರಣರಾದ ಲಾರಿ ಚಾಲಕರಿಗೆ ಲಾಠಿಯ ರುಚಿ ತೋರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಲಾರಿಗಳ ಎರ‌್ರಾಬಿರ‌್ರಿ ಓಡಾಟದಿಂದಾಗಿ ಆಗಾಗ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದ್ದು, ಸುಗಮ ಸಂಚಾರಕ್ಕೆ ಅಗತ್ಯ ಕ್ರಮಗಳೇ ಇಲ್ಲದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವೆನಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ