ಆ್ಯಪ್ನಗರ

ವ್ಹೀಲ್‌ಚೇರ್‌ನಲ್ಲಿ ಪತ್ನಿಗೆ ಸ್ಮಾರಕ ತೋರಿಸುತ್ತಿರುವ ಪತಿ

‘ತುಂಗಭದ್ರಾ ನದಿ ತೀರದಲ್ಲಿ’ ಎಂಬ ಬಂಗಾಳಿ ಕೃತಿಯಿಂದ ಪ್ರೇರಣೆಗೊಂಡು ಹಂಪಿ ಪ್ರವಾಸಕ್ಕೆ ಆಗಮಿಸಿರುವ ಪಶ್ಚಿಮ ಬಂಗಾಳದ ಪ್ರವಾಸಿ ಸೀನಗುಪ್ತಾ ಪೌಲ್ ಅವರು, ಶುಕ್ರವಾರ ಗಾಯಗೊಂಡರೂ ಸ್ಮಾರಕಗಳ ವೀಕ್ಷಣೆ ಮುಂದುವರಿಸಿದರು.

ವಿಕ ಸುದ್ದಿಲೋಕ 4 Jun 2016, 7:46 am
ಹೊಸಪೇಟೆ; ‘ತುಂಗಭದ್ರಾ ನದಿ ತೀರದಲ್ಲಿ’ ಎಂಬ ಬಂಗಾಳಿ ಕೃತಿಯಿಂದ ಪ್ರೇರಣೆಗೊಂಡು ಹಂಪಿ ಪ್ರವಾಸಕ್ಕೆ ಆಗಮಿಸಿರುವ ಪಶ್ಚಿಮ ಬಂಗಾಳದ ಪ್ರವಾಸಿ ಸೀನಗುಪ್ತಾ ಪೌಲ್ ಅವರು, ಶುಕ್ರವಾರ ಗಾಯಗೊಂಡರೂ ಸ್ಮಾರಕಗಳ ವೀಕ್ಷಣೆ ಮುಂದುವರಿಸಿದರು.
Vijaya Karnataka Web
ವ್ಹೀಲ್‌ಚೇರ್‌ನಲ್ಲಿ ಪತ್ನಿಗೆ ಸ್ಮಾರಕ ತೋರಿಸುತ್ತಿರುವ ಪತಿ


ಸೀನಗುಪ್ತಾ ಪೌಲ್ ಹಾಗೂ ಅವರ ಪತಿ ಬಿಸ್ವಜಿತ್ ಅವರು, ಹಂಪಿ ಪ್ರವಾಸಕ್ಕೆ ಆಗಮಿಸಿದ್ದಾರೆ. ಜೈನ ದೇಗುಲ ಸಮೂಹದ ಬಳಿ, ಗುರುವಾರ ಸೂರ್ಯಾಸ್ತ ನೋಡುವ ಸಂದರ್ಭದಲ್ಲಿ ಸೀನಗುಪ್ತಾ ಪೌಲ್ ಅವರು, ಆಯತಪ್ಪಿ ಬಿದ್ದ ಪರಿಣಾಮ ಕಾಲಿಗೆ ಪೆಟ್ಟಾಗಿದೆ. ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದ ಅವರು, ಮತ್ತೆ ವೀಲ್‌ಚೇರ್ ಸಹಾಯದಿಂದ ಹಂಪಿಯ ಸ್ಮಾರಕಗಳ ವೀಕ್ಷಣೆ ಮುಂದುವರಿಸಿದರು. ಪತಿ ಬಿಸ್ವಜಿತ್ ಅವರು ವ್ಹೀಲ್‌ಚೇರ್ ದೂಡುವ ಮೂಲಕ ಗಾಯಾಳು ಪತ್ನಿಗೆ ನೆರವಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ