ಆ್ಯಪ್ನಗರ

ಕಾರು-ಲಾರಿ ಡಿಕ್ಕಿ: ಮೂವರ ಸಾವು

ತಾಲೂಕಿನ ಶಿವಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50 (13)ರಲ್ಲಿ ಶುಕ್ರವಾರ, ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಮತಪಟ್ಟಿದ್ದಾರೆ.

ವಿಕ ಸುದ್ದಿಲೋಕ 9 Jul 2016, 7:49 am
ಕೂಡ್ಲಿಗಿ (ಬಳ್ಳಾರಿ); ತಾಲೂಕಿನ ಶಿವಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50 (13)ರಲ್ಲಿ ಶುಕ್ರವಾರ, ಕಾರು ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಮತಪಟ್ಟಿದ್ದಾರೆ.
Vijaya Karnataka Web
ಕಾರು-ಲಾರಿ ಡಿಕ್ಕಿ: ಮೂವರ ಸಾವು


ಬೆಂಗಳೂರಿನ ಮಹ್ಮದ್ ಶಫೀವುಲ್ಲಾ (38), ಅಬ್ದುಲ್ ಆಸೀಫ್ (37) ಹಾಗೂ ವಾಸೀಂ (34) ಮತರು. ಘಟನೆಯಲ್ಲಿ ಇರ್ಫಾನ್ (35) ಗಂಭೀರ ಗಾಯಗೊಂಡಿದ್ದು, ಬಳ್ಳಾರಿ ವಿಮ್ಸ್‌ಗೆ ದಾಖಲಿಸಲಾಗಿದೆ. ದನಗಳ ವ್ಯಾಪಾರಕ್ಕೆಂದು ಈ ನಾಲ್ವರು, ಕೊಪ್ಪಳ ತಾಲೂಕಿನ ಗಿಣಿಗೇರಾ ಸಂತೆಗೆ ಕಾರಿನಲ್ಲಿ ತೆರಳುತ್ತಿದ್ದರು. ಹೊಸಪೇಟೆಯಿಂದ ಚಿತ್ರದುರ್ಗದ ಕಡೆಗೆ ಹೋಗುತ್ತಿದ್ದ ಲಾರಿ, ಈ ನಾಲ್ವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಕೂಡ್ಲಿಗಿ ಪಿಎಸ್‌ಐ ಹಾಗೂ ಸಿಬ್ಬಂದಿ ಭೇಟಿನೀಡಿದರು.

ಕಾರಿನಲ್ಲಿದ್ದ 5ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ‘‘ಪರಿಶೀಲನೆ ನಂತರ ಮತರ ವಾರಸುದಾರರಿಗೆ ಈ ಹಣ ಒಪ್ಪಿಸಲಾಗುವುದು’’ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ