ಶಶಿಧರ ಮೇಟಿ, ಬಳ್ಳಾರಿ
ತಾಲೂಕಿನ ಚಾಗನೂರು-ಸಿರಿವಾರ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಿಷಯಕ್ಕೆ ಮರುಜೀವ ಬಂದಿದೆ. 2009ರಲ್ಲಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರೇ ಯೋಜನೆ ಸಾಕಾರಕ್ಕೆ ಈಗ ಉತ್ಸುಕರಾಗಿರುವುದು ಅಚ್ಚರಿಮೂಡಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಿ.ಜನಾರ್ದನ ರೆಡ್ಡಿ ಅವರ ಒತ್ತಾಸೆಯಂತೆ ಅಂದಿನ ಬಿಜೆಪಿ ಸರಕಾರ, ಈ ವಿಮಾನ ನಿಲ್ದಾಣದ ಭೂಸ್ವಾಧೀನಕ್ಕೆ 2009, ಮೇ 23ರಂದು ನೋಟಿಫಿಕೇಷನ್ ಹೊರಡಿಸಿತು. ನೋಟಿಫಿಕೇಷನ್ ವಿರುದ್ಧ ರೈತರು ಬೀದಿಗಿಳಿದು ಹೋರಾಟ ನಡೆಸಿದರು. ಇದಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ಸೂಚಿಸಿತು.
ರದ್ದಾದ ಸಿದ್ದು ಭೇಟಿ: ಫಲವತ್ತಾದ ಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಿರೋಧಿಸಿ ನಡೆದ ರೈತರ ಹೋರಾಟ ಬೆಂಬಲಿಸಲು ಆಗ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು, ಚಾಗನೂರು ಭೇಟಿಗೆ ದಿನ ನಿಗದಿಯಾಗಿತ್ತು. ಅದೇ ಸಂದರ್ಭದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿಯವರು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದರಿಂದ ಸಿದ್ದರಾಮಯ್ಯ ಅವರ ಪ್ರವಾಸ ರದ್ದಾಯಿತು. ಅವರ ಭೇಟಿಯ ನಿರೀಕ್ಷೆಯಲ್ಲಿದ್ದ ಗ್ರಾಮಸ್ಥರು ಜೋಳ ಹಾಗೂ ಸಜ್ಜೆ ರೊಟ್ಟಿ ಸಿದ್ಧಪಡಿಸಿದ್ದರು.
ಮರು ಚುನಾವಣೆ ವೇಳೆ ವಾಗ್ದಾಳಿ: ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ 2011ರಲ್ಲಿ ನಡೆದ ಮರು ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯನವರು, ಚಾಗನೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾದ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಎಲ್ಲ ಸಂಗತಿಗಳು ಹೋರಾಟಗರರ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಅಂದು ರೈತರ ಪರ ನಿಂತವರು, ಈಗ ರೈತವಿರೋಧಿ ನಿಲುವು ತಾಳಿರುವುದಕ್ಕೆ ಬೇಸರವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಒಕ್ಕಲೆಬ್ಬಿಸದಂತೆ ಕೋರ್ಟ್ ಆದೇಶ: ವಿಮಾನ ನಿಲ್ದಾಣಕ್ಕೆ ಅಗತ್ಯವಾದ 900ಎಕರೆಯಲ್ಲಿ 700 ಎಕರೆ ಸ್ವಾಧೀನ ಸಾಧ್ಯವಾಯಿತು. 200ಎಕರೆ ಜಮೀನಿನ ರೈತರು ವಿಮಾನ ನಿಲ್ದಾಣಕ್ಕೆ ಭೂಮಿ ನೀಡದೇ ಉಗ್ರ ಹೋರಾಟಕ್ಕೆ ಮುಂದಾದರು. 2012, ಜ.4ರಂದು ಸರಕಾರದ ನೋಟಿಫಿಕೇಷನ್ಗೆ ಕೋರ್ಟ್ನಿಂದ ತಡೆಯಾಜ್ಞೆ ತಂದರು. ಪಟ್ಟುಬಿಡದ ಸರಕಾರ ಭೂಸ್ವಾಧೀನಕ್ಕೆ ಮುಂದಾದಾಗ, ಕೆಲವು ರೈತರು ಜಮೀನು ಬಿಟ್ಟುಕೊಟ್ಟರು. ಆದರೆ, 80 ಎಕರೆ ಜಮೀನಿನ 26 ರೈತರು ಸರಕಾರದ ಬಲವಂತದ ಭೂಸ್ವಾಧೀನ ವಿರೋಧಿಸಿದರು. ಡಿ.2,2015ರಂದು ಧಾರವಾಡ ಹೈಕೋರ್ಟ್ ಮೊರೆಹೋದರು. ರೈತರನ್ನು ಒಕ್ಕಲೆಬ್ಬಿಸಬಾರದೆಂದು ಕೋರ್ಟ್ ಆದೇಶ ನೀಡಿತು. ವಿಮಾನ ನಿಲ್ದಾಣ ನಿರ್ಮಾಣದ ಸರಕಾರದ ಯತ್ನಕ್ಕೆ ಆಗ ಹಿನ್ನಡೆ ಉಂಟಾಗಿತ್ತು.
ರೈತರ ಮನವೊಲಿಕೆಗೆ ಸೂಚನೆ: ವಿಮಾನ ನಿಲ್ದಾಣ ನಿರ್ಮಾಣ ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದ ಪರಿಣಾಮ, ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಿತು. ನಂತರ ಈ ಭೂಮಿ, ಇಲಾಖೆಯಿಂದ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರವಾಯಿತು. ಮೂಲಭೂತ ಸೌಯರ್ಕಗಳ ಇಲಾಖೆ, ಬಳ್ಳಾರಿ ಡಿಸಿ ರಾಮ್ ಪ್ರಸಾತ್ ಮನೋಹರ್ ಅವರಿಗೆ ಇತ್ತೀಚೆಗೆ ಪತ್ರ ಬರೆದಿದೆ. ಜಮೀನು ಬಿಟ್ಟು ಕೊಡದ ರೈತರ ಮನವೊಲಿಸಿ, ತುರ್ತು ಕ್ರಮಕೈಗೊಂಡು ವರದಿ ನೀಡುವಂತೆ ಸೂಚಿಸಿದೆ.
ಜಮೀನು ನೀಡಲು ಮುಂದಾದ ರೈತರು: ರೈತರ ಮನವೊಲಿಸಲೆಂದೇ ಇದೇ ಡಿಸೆಂಬರ್ 9ರಂದು ಜಿಲ್ಲಾಡಳಿತದ ನೇತೃತ್ವದಲ್ಲಿ ರೈತರ ಸಭೆ ಜರುಗಿತು. ಡಿಸಿ ಮನವೊಲಿಗೆೆ ಮಣಿದ ಕೆಲವು ರೈತರು, ಎರಡನೇ ಬಾರಿ ನ್ಯಾಯಾಲಯದ ಮೆಟ್ಟಿಲು ಹತ್ತದೆ, ಕಾದುನೋಡುವ ತಂತ್ರ ಅನುಸರಿಸಲು ನಿರ್ಧರಿಸಿದ್ದಾರೆ. ಆದರೆ, ನ್ಯಾಯಾಲಯದಿಂದ ತಡೆಯಾಜ್ಞೆ ತಂದ 80ಎಕರೆಯ 26 ರೈತರು ನ್ಯಾಯಾಲಯದ ಹೊರಗೆ ಸಮಸ್ಯೆ ಪರಿಹಾರಕ್ಕೆ ಮುಂದಾದರೆ, ಸರಕಾರ ಯಾವ ಸೌಲಭ್ಯಗಳನ್ನು ನೀಡುತ್ತದೆ? ಇದಕ್ಕೆ ಸಮರ್ಪಕ ಉತ್ತರ ಸಿಕ್ಕರೆ, ಭೂಮಿ ಬಿಟ್ಟುಕೊಡುವ ಬಗ್ಗೆ ಆಲೋಚಿಸುತ್ತೇವೆ ಎಂದು ಸಭೆಯಲ್ಲಿ ಹಾಜರಿದ್ದ ರೈತರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
.................
ಚಾಗನೂರು-ಸಿರಿವಾರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಲವು ರೈತರು ಜಮೀನು ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತ ವರದಿಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಸ್ವಾಧೀನಪಡಿಸಿಕೊಳ್ಳಲಿರುವ ಜಮೀನಿಗೆ ಬಡ್ಡಿ ಸಮೇತ ಹಣ ಪಾವತಿಸುವಂತೆ ಕೆಐಎಡಿಬಿಗೆ ಪ್ರಸ್ತಾವನೆ ಕಳುಹಿಸಲಾಗಿದೆ.
-ಡಾ.ರಾಮ್ ಪ್ರಸಾತ್ ಮನೋಹರ್, ಡಿಸಿ, ಬಳ್ಳಾರಿ
..................
ಕರ್ನಾಟಕ ಕಮಾಂಡ್ ಏರಿಯಾ ಡೆವಲಪ್ಮೆಂಟ್ ಆ್ಯಕ್ಟ್ ಅಡಿ ನಮ್ಮ ಜಮೀನು, ಅಭಿವೃದ್ಧಿ ಹೊಂದಿರುವ ಪ್ರದೇಶವಾಗಿದೆ. ಇದನ್ನು ಸ್ವಾಧೀನ ಪಡಿಸಿಕೊಳ್ಳಲು ಬರುವುದಿಲ್ಲ. ನ್ಯಾಯಾಲಯದ ಹೊರಗೆ ಸಮಸ್ಯೆ ಬಗೆಹರಿಸಿಕೊಂಡರೆ ನಮಗೆ ನೀಡುವ ಸೌಲಭ್ಯಗಳ ಬಗ್ಗೆ ತಿಳಿಸಬೇಕು. ನಂತರ ನಿರ್ಧಾರಕೈಗೊಳ್ಳುತ್ತೇವೆ ಎಂದು ಹೇಳಿದ್ದೇವೆ.
-ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ವಿಮಾನ ನಿಲ್ದಾಣ ವಿರೋಧಿ ಹೋರಾಟಗಾರರು
ತಾಲೂಕಿನ ಚಾಗನೂರು-ಸಿರಿವಾರ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಿಷಯಕ್ಕೆ ಮರುಜೀವ ಬಂದಿದೆ. 2009ರಲ್ಲಿ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ ಅವರೇ ಯೋಜನೆ ಸಾಕಾರಕ್ಕೆ ಈಗ ಉತ್ಸುಕರಾಗಿರುವುದು ಅಚ್ಚರಿಮೂಡಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಿ.ಜನಾರ್ದನ ರೆಡ್ಡಿ ಅವರ ಒತ್ತಾಸೆಯಂತೆ ಅಂದಿನ ಬಿಜೆಪಿ ಸರಕಾರ, ಈ ವಿಮಾನ ನಿಲ್ದಾಣದ ಭೂಸ್ವಾಧೀನಕ್ಕೆ 2009, ಮೇ 23ರಂದು ನೋಟಿಫಿಕೇಷನ್ ಹೊರಡಿಸಿತು. ನೋಟಿಫಿಕೇಷನ್ ವಿರುದ್ಧ ರೈತರು ಬೀದಿಗಿಳಿದು ಹೋರಾಟ ನಡೆಸಿದರು. ಇದಕ್ಕೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ಸೂಚಿಸಿತು.
ರದ್ದಾದ ಸಿದ್ದು ಭೇಟಿ: ಫಲವತ್ತಾದ ಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ವಿರೋಧಿಸಿ ನಡೆದ ರೈತರ ಹೋರಾಟ ಬೆಂಬಲಿಸಲು ಆಗ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು, ಚಾಗನೂರು ಭೇಟಿಗೆ ದಿನ ನಿಗದಿಯಾಗಿತ್ತು. ಅದೇ ಸಂದರ್ಭದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿಯವರು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದರಿಂದ ಸಿದ್ದರಾಮಯ್ಯ ಅವರ ಪ್ರವಾಸ ರದ್ದಾಯಿತು. ಅವರ ಭೇಟಿಯ ನಿರೀಕ್ಷೆಯಲ್ಲಿದ್ದ ಗ್ರಾಮಸ್ಥರು ಜೋಳ ಹಾಗೂ ಸಜ್ಜೆ ರೊಟ್ಟಿ ಸಿದ್ಧಪಡಿಸಿದ್ದರು.
ಮರು ಚುನಾವಣೆ ವೇಳೆ ವಾಗ್ದಾಳಿ: ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ 2011ರಲ್ಲಿ ನಡೆದ ಮರು ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯನವರು, ಚಾಗನೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾದ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಎಲ್ಲ ಸಂಗತಿಗಳು ಹೋರಾಟಗರರ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಅಂದು ರೈತರ ಪರ ನಿಂತವರು, ಈಗ ರೈತವಿರೋಧಿ ನಿಲುವು ತಾಳಿರುವುದಕ್ಕೆ ಬೇಸರವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಒಕ್ಕಲೆಬ್ಬಿಸದಂತೆ ಕೋರ್ಟ್ ಆದೇಶ: ವಿಮಾನ ನಿಲ್ದಾಣಕ್ಕೆ ಅಗತ್ಯವಾದ 900ಎಕರೆಯಲ್ಲಿ 700 ಎಕರೆ ಸ್ವಾಧೀನ ಸಾಧ್ಯವಾಯಿತು. 200ಎಕರೆ ಜಮೀನಿನ ರೈತರು ವಿಮಾನ ನಿಲ್ದಾಣಕ್ಕೆ ಭೂಮಿ ನೀಡದೇ ಉಗ್ರ ಹೋರಾಟಕ್ಕೆ ಮುಂದಾದರು. 2012, ಜ.4ರಂದು ಸರಕಾರದ ನೋಟಿಫಿಕೇಷನ್ಗೆ ಕೋರ್ಟ್ನಿಂದ ತಡೆಯಾಜ್ಞೆ ತಂದರು. ಪಟ್ಟುಬಿಡದ ಸರಕಾರ ಭೂಸ್ವಾಧೀನಕ್ಕೆ ಮುಂದಾದಾಗ, ಕೆಲವು ರೈತರು ಜಮೀನು ಬಿಟ್ಟುಕೊಟ್ಟರು. ಆದರೆ, 80 ಎಕರೆ ಜಮೀನಿನ 26 ರೈತರು ಸರಕಾರದ ಬಲವಂತದ ಭೂಸ್ವಾಧೀನ ವಿರೋಧಿಸಿದರು. ಡಿ.2,2015ರಂದು ಧಾರವಾಡ ಹೈಕೋರ್ಟ್ ಮೊರೆಹೋದರು. ರೈತರನ್ನು ಒಕ್ಕಲೆಬ್ಬಿಸಬಾರದೆಂದು ಕೋರ್ಟ್ ಆದೇಶ ನೀಡಿತು. ವಿಮಾನ ನಿಲ್ದಾಣ ನಿರ್ಮಾಣದ ಸರಕಾರದ ಯತ್ನಕ್ಕೆ ಆಗ ಹಿನ್ನಡೆ ಉಂಟಾಗಿತ್ತು.
ರೈತರ ಮನವೊಲಿಕೆಗೆ ಸೂಚನೆ: ವಿಮಾನ ನಿಲ್ದಾಣ ನಿರ್ಮಾಣ ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದ ಪರಿಣಾಮ, ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಿತು. ನಂತರ ಈ ಭೂಮಿ, ಇಲಾಖೆಯಿಂದ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರವಾಯಿತು. ಮೂಲಭೂತ ಸೌಯರ್ಕಗಳ ಇಲಾಖೆ, ಬಳ್ಳಾರಿ ಡಿಸಿ ರಾಮ್ ಪ್ರಸಾತ್ ಮನೋಹರ್ ಅವರಿಗೆ ಇತ್ತೀಚೆಗೆ ಪತ್ರ ಬರೆದಿದೆ. ಜಮೀನು ಬಿಟ್ಟು ಕೊಡದ ರೈತರ ಮನವೊಲಿಸಿ, ತುರ್ತು ಕ್ರಮಕೈಗೊಂಡು ವರದಿ ನೀಡುವಂತೆ ಸೂಚಿಸಿದೆ.
ಜಮೀನು ನೀಡಲು ಮುಂದಾದ ರೈತರು: ರೈತರ ಮನವೊಲಿಸಲೆಂದೇ ಇದೇ ಡಿಸೆಂಬರ್ 9ರಂದು ಜಿಲ್ಲಾಡಳಿತದ ನೇತೃತ್ವದಲ್ಲಿ ರೈತರ ಸಭೆ ಜರುಗಿತು. ಡಿಸಿ ಮನವೊಲಿಗೆೆ ಮಣಿದ ಕೆಲವು ರೈತರು, ಎರಡನೇ ಬಾರಿ ನ್ಯಾಯಾಲಯದ ಮೆಟ್ಟಿಲು ಹತ್ತದೆ, ಕಾದುನೋಡುವ ತಂತ್ರ ಅನುಸರಿಸಲು ನಿರ್ಧರಿಸಿದ್ದಾರೆ. ಆದರೆ, ನ್ಯಾಯಾಲಯದಿಂದ ತಡೆಯಾಜ್ಞೆ ತಂದ 80ಎಕರೆಯ 26 ರೈತರು ನ್ಯಾಯಾಲಯದ ಹೊರಗೆ ಸಮಸ್ಯೆ ಪರಿಹಾರಕ್ಕೆ ಮುಂದಾದರೆ, ಸರಕಾರ ಯಾವ ಸೌಲಭ್ಯಗಳನ್ನು ನೀಡುತ್ತದೆ? ಇದಕ್ಕೆ ಸಮರ್ಪಕ ಉತ್ತರ ಸಿಕ್ಕರೆ, ಭೂಮಿ ಬಿಟ್ಟುಕೊಡುವ ಬಗ್ಗೆ ಆಲೋಚಿಸುತ್ತೇವೆ ಎಂದು ಸಭೆಯಲ್ಲಿ ಹಾಜರಿದ್ದ ರೈತರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
.................
ಚಾಗನೂರು-ಸಿರಿವಾರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಲವು ರೈತರು ಜಮೀನು ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಈ ಕುರಿತ ವರದಿಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಸ್ವಾಧೀನಪಡಿಸಿಕೊಳ್ಳಲಿರುವ ಜಮೀನಿಗೆ ಬಡ್ಡಿ ಸಮೇತ ಹಣ ಪಾವತಿಸುವಂತೆ ಕೆಐಎಡಿಬಿಗೆ ಪ್ರಸ್ತಾವನೆ ಕಳುಹಿಸಲಾಗಿದೆ.
-ಡಾ.ರಾಮ್ ಪ್ರಸಾತ್ ಮನೋಹರ್, ಡಿಸಿ, ಬಳ್ಳಾರಿ
..................
ಕರ್ನಾಟಕ ಕಮಾಂಡ್ ಏರಿಯಾ ಡೆವಲಪ್ಮೆಂಟ್ ಆ್ಯಕ್ಟ್ ಅಡಿ ನಮ್ಮ ಜಮೀನು, ಅಭಿವೃದ್ಧಿ ಹೊಂದಿರುವ ಪ್ರದೇಶವಾಗಿದೆ. ಇದನ್ನು ಸ್ವಾಧೀನ ಪಡಿಸಿಕೊಳ್ಳಲು ಬರುವುದಿಲ್ಲ. ನ್ಯಾಯಾಲಯದ ಹೊರಗೆ ಸಮಸ್ಯೆ ಬಗೆಹರಿಸಿಕೊಂಡರೆ ನಮಗೆ ನೀಡುವ ಸೌಲಭ್ಯಗಳ ಬಗ್ಗೆ ತಿಳಿಸಬೇಕು. ನಂತರ ನಿರ್ಧಾರಕೈಗೊಳ್ಳುತ್ತೇವೆ ಎಂದು ಹೇಳಿದ್ದೇವೆ.
-ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ವಿಮಾನ ನಿಲ್ದಾಣ ವಿರೋಧಿ ಹೋರಾಟಗಾರರು