ಆ್ಯಪ್ನಗರ

ಕ್ರೀಡಾಕೂಟ ವೇಳೆ ಹೃದಯಾಘಾತ: ಪೇದೆ ಸಾವು

ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ಜಿಲ್ಲಾ ಪೊಲೀಸ್ ಕ್ರೀಡಾಕೂಟ ವೇಳೆ ಹೃದಯಾಘಾತ ಅನುಭವಿಸಿದ ಹಗರಿಬೊಮ್ಮನಹಳ್ಳಿ ಠಾಣೆಯ ಪೇದೆ ಕೊಟ್ರೇಶ್ ಮೃತಪಟ್ಟಿದ್ದಾರೆ.

ವಿಕ ಸುದ್ದಿಲೋಕ 21 Dec 2016, 8:07 am
ಬಳ್ಳಾರಿ: ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ಜಿಲ್ಲಾ ಪೊಲೀಸ್ ಕ್ರೀಡಾಕೂಟ ವೇಳೆ ಹೃದಯಾಘಾತ ಅನುಭವಿಸಿದ ಹಗರಿಬೊಮ್ಮನಹಳ್ಳಿ ಠಾಣೆಯ ಪೇದೆ ಕೊಟ್ರೇಶ್ ಮೃತಪಟ್ಟಿದ್ದಾರೆ.
Vijaya Karnataka Web
ಕ್ರೀಡಾಕೂಟ ವೇಳೆ ಹೃದಯಾಘಾತ: ಪೇದೆ ಸಾವು


ವಾಲಿಬಾಲ್ ಆಟದಲ್ಲಿ ಪಾಲ್ಗೊಂಡಿದ್ದ ಅವರು, ಕೆಲ ಹೊತ್ತಿನ ನಂತರ ತಲೆ ಸುತ್ತುತ್ತಿದೆ ಎಂದು ವಿಶ್ರಾಂತಿ ಪಡೆಯಲು ಹೊರಬಂದರು. ವಿಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲು ಕರೆದೊಯ್ಯುವ ಮಾರ್ಗ ಮಧ್ಯೆ ಅವರು ಅಸುನೀಗಿದರು. ಕೆಲ ತಿಂಗಳ ಹಿಂದೆಯಷ್ಟೇ ಪೇದೆ ಕೊಟ್ರೇಶ್ ಅವರು ಅವಳಿ ಜವಳಿ ಮಕ್ಕಳ ತಂದೆಯಾಗಿದ್ದರು. ‘‘ಪೇದೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮೂರು ದಿನಗಳವರೆಗೆ ನಡೆಯಬೇಕಿದ್ದ ಕ್ರೀಡಾಕೂಟವನ್ನು ರದ್ದುಪಡಿಸಲಾಗಿದೆ’’ ಎಂದು ಎಸ್ಪಿ ಆರ್.ಚೇತನ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ