ಕೃಷ್ಣ ಎನ್. ಲಮಾಣಿ, ಹೊಸಪೇಟೆ
ಐತಿಹಾಸಿಕ ಸ್ಮಾರಕಗಳ ಪ್ರದೇಶದಲ್ಲಿ ಕಟ್ಟಡಗಳನ್ನು ನಿರ್ಮಿಸಬಾರದು ಎಂದು ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರ ಎಚ್ಚರಿಸಿದರೂ ಖಾಸಗಿ ವ್ಯಕ್ತಿಗಳು ಕಟ್ಟಡವನ್ನು ನಿರ್ಮಿಸಿದ್ದಾರೆ. 9 ತಿಂಗಳ ಹಿಂದೆ ಕೆಡವಲು ಸೂಚಿಸಿದ್ದ ಸ್ಥಳದಲ್ಲಿ ಕಟ್ಟಡ ತಲೆ ಎತ್ತಿದೆ.
ಹಂಪಿಯ ಹೇಮಕೂಟ ಪ್ರದೇಶದಲ್ಲಿ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ಹಾಗೂ ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರ ಸ್ಪಷ್ಟವಾಗಿ ಹೇಳಿವೆ. ಜತೆಗೆ ಈ ಪ್ರದೇಶ ಕೋರ್ಝೋನ್ ಪ್ರದೇಶ. ಈ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಆದರೂ, ಖಾಸಗಿ ವ್ಯಕ್ತಿಗಳು ಸದ್ದಿಲ್ಲದೇ ಕಟ್ಟಡ ಕಟ್ಟುತ್ತಿದ್ದಾರೆ. ಇದನ್ನು ಗಮನಿಸಿದ ಹಂಪಿ ಪ್ರಾಧಿಕಾರ, 2016ರ ಮಾರ್ಚ್ನಲ್ಲಿ ಕಟ್ಟಡಗಳನ್ನು ಕೆಡವಲು ಸೂಚಿಸಿತ್ತು. ತೆರವುಗೊಳಿಸಲು ನೋಟಿಸ್ ಜಾರಿಗೊಳಿಸಿತ್ತು. ಇದಕ್ಕೆ ಕ್ಯಾರೆ ಎನ್ನದ ಖಾಸಗಿ ವ್ಯಕ್ತಿಗಳು ಕಟ್ಟಡ ನಿರ್ಮಾಣ ಕೆಲಸ ಮುಂದುವರಿಸಿದ್ದಾರೆ.
ದಂಡ, ಶಿಕ್ಷೆಗೆ ಅವಕಾಶ : ಹಂಪಿಯ ಸ್ಮಾರಕ ಗುಚ್ಛವನ್ನು ಯುನೆಸ್ಕೊ 1986 ರಲ್ಲಿ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಪ್ರಾಚೀನ ಸ್ಮಾರಕ ಮತ್ತು ಪುರಾತತ್ವ ಪ್ರದೇಶ -2010 ಕಾಯಿದೆ ಪ್ರಕಾರ ಕೋರ್ಝೋನ್ ವ್ಯಾಪ್ತಿಯ ಸ್ಮಾರಕಗಳ 100 ಮೀಟರ್ ಬಳಿಯಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಸ್ಮಾರಕಗಳಿಗೆ ಧಕ್ಕೆಯನ್ನುಂಟು ಮಾಡುವಂತಿಲ್ಲ. ಈ ಕಾಯಿದೆ ಪ್ರಕಾರ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಗೂ ಶಿಕ್ಷೆ ವಿಧಿಸಬಹುದು. ಆದರೂ, ಖಾಸಗಿ ವ್ಯಕ್ತಿಗಳು ಸ್ಮಾರಕಗಳ ಬಳಿಯೇ ಕಟ್ಟಡ ನಿರ್ಮಿಸುತ್ತಿದ್ದಾರೆ. ಇದು ಹಂಪಿ ಪ್ರದೇಶದಲ್ಲಿ ಮೇಲಿಂದ ಮೇಲೆ ಘಟಿಸುತ್ತಿದೆ.
ಪಾಲನೆಯಾಗದ ಆದೇಶ: ರಾಜ್ಯ ಹೈಕೋರ್ಟ್ ಹಂಪಿ ಪ್ರದೇಶದಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು 2016ರ ಜನವರಿ 22ರಂದು ಆದೇಶಿಸಿದೆ. ಹೀಗಿದ್ದರೂ ಹಂಪಿ ಪ್ರದೇಶದಲ್ಲಿ ಕ್ರಾಂಕಿಟ್ ಕಟ್ಟಡಗಳು ತಲೆ ಎತ್ತುತ್ತಿವೆ. ಹಂಪಿಯ ಹೇಮಕೂಟ ಪ್ರದೇಶದಲ್ಲಿ ಸದ್ದಿಲ್ಲದೇ ನಿರ್ಮಿಸಲಾಗುತ್ತಿದ್ದ ಕಟ್ಟಡ ತೆರವಿಗೆ ಪ್ರಾಧಿಕಾರ ಮುಂದಾಗಿತ್ತು. 2016ರ ಮಾರ್ಚ್ 22 ರಂದು ಹತ್ತು ದಿನದೊಳಗೆ ಕಟ್ಟಡವನ್ನು ತೆರವುಗೊಳಿಸಲು ಹೇಳಿದ್ದರು. ಅದಾಗಿ ಹಲವು ತಿಂಗಳು ಗತಿಸಿದರೂ ಯಾವುದೇ ಬೆಳವಣಿಗೆಯಿಲ್ಲ. ವ್ಯತಿರಿಕ್ತ ಎನ್ನುವಂತೆಯೇ ರಾಜಾರೋಷವಾಗಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಡಿ.23 ರಂದು ನೀಡಿದ್ದ ನೋಟಿಸ್ನಲ್ಲಿ ಕೆಡವಿ, ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದರೂ ಪ್ರಯೋಜನವಾಗಿಲ್ಲ.
......
ಹಂಪಿಯ ಹೇಮಕೂಟ ಪ್ರದೇಶದಲ್ಲಿ ತಲೆ ಎತ್ತಿರುವ ಅನಧಿಕೃತ ಕಟ್ಟಡದ ಸಂಬಂಧ ಡಿ.23ರಂದು ಸಂಬಂಧಿಸಿದವರಿಗೆ ನೋಟಿಸ್ ನೀಡಲಾಗಿದೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಪ್ರಶಾಂತ್ ಕುಮಾರ್ ಮಿಶ್ರಾ, ಪ್ರಭಾರಿ ಆಯುಕ್ತ, ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರ, ಹೊಸಪೇಟೆ
ಐತಿಹಾಸಿಕ ಸ್ಮಾರಕಗಳ ಪ್ರದೇಶದಲ್ಲಿ ಕಟ್ಟಡಗಳನ್ನು ನಿರ್ಮಿಸಬಾರದು ಎಂದು ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರ ಎಚ್ಚರಿಸಿದರೂ ಖಾಸಗಿ ವ್ಯಕ್ತಿಗಳು ಕಟ್ಟಡವನ್ನು ನಿರ್ಮಿಸಿದ್ದಾರೆ. 9 ತಿಂಗಳ ಹಿಂದೆ ಕೆಡವಲು ಸೂಚಿಸಿದ್ದ ಸ್ಥಳದಲ್ಲಿ ಕಟ್ಟಡ ತಲೆ ಎತ್ತಿದೆ.
ಹಂಪಿಯ ಹೇಮಕೂಟ ಪ್ರದೇಶದಲ್ಲಿ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ಹಾಗೂ ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರ ಸ್ಪಷ್ಟವಾಗಿ ಹೇಳಿವೆ. ಜತೆಗೆ ಈ ಪ್ರದೇಶ ಕೋರ್ಝೋನ್ ಪ್ರದೇಶ. ಈ ಸ್ಥಳಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಆದರೂ, ಖಾಸಗಿ ವ್ಯಕ್ತಿಗಳು ಸದ್ದಿಲ್ಲದೇ ಕಟ್ಟಡ ಕಟ್ಟುತ್ತಿದ್ದಾರೆ. ಇದನ್ನು ಗಮನಿಸಿದ ಹಂಪಿ ಪ್ರಾಧಿಕಾರ, 2016ರ ಮಾರ್ಚ್ನಲ್ಲಿ ಕಟ್ಟಡಗಳನ್ನು ಕೆಡವಲು ಸೂಚಿಸಿತ್ತು. ತೆರವುಗೊಳಿಸಲು ನೋಟಿಸ್ ಜಾರಿಗೊಳಿಸಿತ್ತು. ಇದಕ್ಕೆ ಕ್ಯಾರೆ ಎನ್ನದ ಖಾಸಗಿ ವ್ಯಕ್ತಿಗಳು ಕಟ್ಟಡ ನಿರ್ಮಾಣ ಕೆಲಸ ಮುಂದುವರಿಸಿದ್ದಾರೆ.
ದಂಡ, ಶಿಕ್ಷೆಗೆ ಅವಕಾಶ : ಹಂಪಿಯ ಸ್ಮಾರಕ ಗುಚ್ಛವನ್ನು ಯುನೆಸ್ಕೊ 1986 ರಲ್ಲಿ ವಿಶ್ವಪರಂಪರೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಪ್ರಾಚೀನ ಸ್ಮಾರಕ ಮತ್ತು ಪುರಾತತ್ವ ಪ್ರದೇಶ -2010 ಕಾಯಿದೆ ಪ್ರಕಾರ ಕೋರ್ಝೋನ್ ವ್ಯಾಪ್ತಿಯ ಸ್ಮಾರಕಗಳ 100 ಮೀಟರ್ ಬಳಿಯಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ. ಸ್ಮಾರಕಗಳಿಗೆ ಧಕ್ಕೆಯನ್ನುಂಟು ಮಾಡುವಂತಿಲ್ಲ. ಈ ಕಾಯಿದೆ ಪ್ರಕಾರ ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಗೂ ಶಿಕ್ಷೆ ವಿಧಿಸಬಹುದು. ಆದರೂ, ಖಾಸಗಿ ವ್ಯಕ್ತಿಗಳು ಸ್ಮಾರಕಗಳ ಬಳಿಯೇ ಕಟ್ಟಡ ನಿರ್ಮಿಸುತ್ತಿದ್ದಾರೆ. ಇದು ಹಂಪಿ ಪ್ರದೇಶದಲ್ಲಿ ಮೇಲಿಂದ ಮೇಲೆ ಘಟಿಸುತ್ತಿದೆ.
ಪಾಲನೆಯಾಗದ ಆದೇಶ: ರಾಜ್ಯ ಹೈಕೋರ್ಟ್ ಹಂಪಿ ಪ್ರದೇಶದಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು 2016ರ ಜನವರಿ 22ರಂದು ಆದೇಶಿಸಿದೆ. ಹೀಗಿದ್ದರೂ ಹಂಪಿ ಪ್ರದೇಶದಲ್ಲಿ ಕ್ರಾಂಕಿಟ್ ಕಟ್ಟಡಗಳು ತಲೆ ಎತ್ತುತ್ತಿವೆ. ಹಂಪಿಯ ಹೇಮಕೂಟ ಪ್ರದೇಶದಲ್ಲಿ ಸದ್ದಿಲ್ಲದೇ ನಿರ್ಮಿಸಲಾಗುತ್ತಿದ್ದ ಕಟ್ಟಡ ತೆರವಿಗೆ ಪ್ರಾಧಿಕಾರ ಮುಂದಾಗಿತ್ತು. 2016ರ ಮಾರ್ಚ್ 22 ರಂದು ಹತ್ತು ದಿನದೊಳಗೆ ಕಟ್ಟಡವನ್ನು ತೆರವುಗೊಳಿಸಲು ಹೇಳಿದ್ದರು. ಅದಾಗಿ ಹಲವು ತಿಂಗಳು ಗತಿಸಿದರೂ ಯಾವುದೇ ಬೆಳವಣಿಗೆಯಿಲ್ಲ. ವ್ಯತಿರಿಕ್ತ ಎನ್ನುವಂತೆಯೇ ರಾಜಾರೋಷವಾಗಿ ಕಟ್ಟಡಗಳನ್ನು ಕಟ್ಟಲಾಗುತ್ತಿದೆ. ಡಿ.23 ರಂದು ನೀಡಿದ್ದ ನೋಟಿಸ್ನಲ್ಲಿ ಕೆಡವಿ, ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದರೂ ಪ್ರಯೋಜನವಾಗಿಲ್ಲ.
......
ಹಂಪಿಯ ಹೇಮಕೂಟ ಪ್ರದೇಶದಲ್ಲಿ ತಲೆ ಎತ್ತಿರುವ ಅನಧಿಕೃತ ಕಟ್ಟಡದ ಸಂಬಂಧ ಡಿ.23ರಂದು ಸಂಬಂಧಿಸಿದವರಿಗೆ ನೋಟಿಸ್ ನೀಡಲಾಗಿದೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಪ್ರಶಾಂತ್ ಕುಮಾರ್ ಮಿಶ್ರಾ, ಪ್ರಭಾರಿ ಆಯುಕ್ತ, ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರ, ಹೊಸಪೇಟೆ