ಶಶಿಧರ ಮೇಟಿ, ಬಳ್ಳಾರಿ
ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಎಂಜಿನಿಯರ್ ಪದವಿ ಪಡೆದ ಇಲ್ಲಿನ ಹರೀಶ್ಕುಮಾರ್ (32), ತಾಲೂಕಿನ ಕೊರ್ಲಗುಂದಿ ಗ್ರಾಮದಲ್ಲಿ ಪಾಲಿಹೌಸ್ ನೆರವಿನೊಂದಿಗೆ ಸಮೃದ್ಧ ಬೆಳೆ ಪಡೆದು ಗಮನಸೆಳೆದಿದ್ದಾರೆ.
ಅವರು, ಪ್ರಾದೇಶಿಕ ಸಾರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಪಂಪಾಪತಿ ಅವರ ಪುತ್ರರಾಗಿದ್ದಾರೆ. ನಗರದ ರಾವ್ ಬಹದ್ದೂರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ಅವರು, ಸ್ವಾವಲಂಬಿ ಬದುಕಿಗೆ ಮನಸೋತು ಕಳೆದೊಂದು ವರ್ಷದಿಂದ ಕೃಷಿಯನ್ನೇ ನೆಚ್ಚಿದ್ದಾರೆ. ಇದಕ್ಕೂ ಮುಂಚೆ ಅವರು ಹೊಸಪೇಟೆಯಲ್ಲಿ ಫ್ರಾಂಚೈಸಿ ಆರಂಭಿಸಿದ್ದರು. ಅದನ್ನು ಮುಂದುವರಿಸಲು ಮನಸ್ಸಾಗದೇ ಹಾಗೂ ಸ್ವಾವಲಂಬಿ ಬದುಕಿನ ಕನಸಿನಲ್ಲಿ ಕೃಷಿಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪುತ್ರನ ಅಪರೂಪದ ಒತ್ತಾಸೆಗೆ ತಂದೆ, ತಾಯಿ ಪ್ರೋತ್ಸಾಹಿಸುತ್ತಿದ್ದಾರೆ.
5 ಎಕರೆಯಲ್ಲಿ ಕೃಷಿ ಪ್ರಯೋಗ: ತಾಯಿ ಹೆಸರಿನಲ್ಲಿ ಇರುವ ಐದು ಎಕರೆ ಜಮೀನನ್ನು ಈ ಮುಂಚೆ ಬೇರೊಬ್ಬರಿಗೆ ಗುತ್ತಿಗೆ ನೀಡಲಾಗಿತ್ತು. ಈಗ ಅದರಲ್ಲೇ ಹರೀಶ್ಕುಮಾರ್ ಅವರು ತಮ್ಮ ಕೃಷಿ ಪ್ರಯೋಗ ಕೈಗೊಂಡಿದ್ದಾರೆ. ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸುವ ಮೂಲಕ ಮಳೆ ನೀರು ಸಂಗ್ರಹಕ್ಕೂ ಕ್ರಮಕೈಗೊಂಡಿದ್ದಾರೆ. ಬೋರ್ವೆಲ್ನಿಂದಲೂ ಸಾಕಷ್ಟು ನೀರು ದೊರೆಯುತ್ತಿದೆ. ನಾಲ್ಕು ಎಕರೆಯಲ್ಲಿ ಹತ್ತಿ, ಮೆಣಸಿನಕಾಯಿ, ಜೋಳ ಬೆಳೆದಿದ್ದಾರೆ. ಒಂದು ಎಕರೆಯಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಪಾಲಿಹೌಸ್ ನಿರ್ಮಿಸಿದ್ದಾರೆ. ಅಲ್ಲಿ ಬೆಳೆದ ಡೊಣ್ಣೆ ಮೆಣಸಿನಕಾಯಿ ಸಮೃದ್ಧ ಫಸಲು ನೀಡಿದೆ. ಹಸಿರು, ಕೆಂಪು ಹಾಗೂ ಹಳದಿ ಬಣ್ಣದ ಮೆಣಸಿನಕಾಯಿ ಬೆಳೆ ಪಾಲಿಹೌಸ್ನಲ್ಲಿ ನಳನಳಿಸುತ್ತಿದೆ. ಕೆಂಪು ಹಾಗೂ ಹಳದಿ ಬಣ್ಣದ ಮೆಣಸಿನಕಾಯಿಯನ್ನು ಹೈದರಾಬಾದ್ನಲ್ಲಿ (ಕೆ.ಜಿ.ಗೆ 35-40 ರೂ.)ಮಾರಾಟಮಾಡುತ್ತಾರೆ. ಈಗಾಗಲೇ 25 ರಿಂದ 30 ಟನ್ ಡೊಣ್ಣೆ ಮೆಣಸಿನಕಾಯಿ ಬೆಳೆದು ಕೃಷಿ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.
...............
ಎಂಜಿನಿಯರಿಂಗ್ ಪದವಿ ಮಾಡಿದರೂ, ಮೊದಲಿನಿಂದಲೂ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಒಂದು ಎಕರೆಯಲ್ಲಿ ಪಾಲಿ ಹೌಸ್ ಅಳವಡಿಸಿ, ಡೊಣ್ಣೆ ಮೆಣಸಿನಕಾಯಿ ಬೆಳೆದಿರುವೆ. ಕೃಷಿಯೂ ಲಾಭದಾಯಕ ಕ್ಷೇತ್ರವಾಗಿದೆ.
-ಹರೀಶ್ ಕುಮಾರ್, ಎಂಜಿನಿಯರಿಂಗ್ ಪದವೀಧರ ರೈತ
...............
ನಮ್ಮ ಮಗ ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರಿಂದ ನಿರೀಕ್ಷೆಯಂತೆ ಬೆಳೆ ಬಂದಿದೆ. ಸಮೃದ್ಧ ಬೆಳೆ ಕಂಡು ಸಂತೋಷವಾಗಿದೆ.
-ಪಂಪಾಪತಿ, ಹರೀಶ್ಕುಮಾರ್ ತಂದೆ
ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಎಂಜಿನಿಯರ್ ಪದವಿ ಪಡೆದ ಇಲ್ಲಿನ ಹರೀಶ್ಕುಮಾರ್ (32), ತಾಲೂಕಿನ ಕೊರ್ಲಗುಂದಿ ಗ್ರಾಮದಲ್ಲಿ ಪಾಲಿಹೌಸ್ ನೆರವಿನೊಂದಿಗೆ ಸಮೃದ್ಧ ಬೆಳೆ ಪಡೆದು ಗಮನಸೆಳೆದಿದ್ದಾರೆ.
ಅವರು, ಪ್ರಾದೇಶಿಕ ಸಾರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಪಂಪಾಪತಿ ಅವರ ಪುತ್ರರಾಗಿದ್ದಾರೆ. ನಗರದ ರಾವ್ ಬಹದ್ದೂರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ಅವರು, ಸ್ವಾವಲಂಬಿ ಬದುಕಿಗೆ ಮನಸೋತು ಕಳೆದೊಂದು ವರ್ಷದಿಂದ ಕೃಷಿಯನ್ನೇ ನೆಚ್ಚಿದ್ದಾರೆ. ಇದಕ್ಕೂ ಮುಂಚೆ ಅವರು ಹೊಸಪೇಟೆಯಲ್ಲಿ ಫ್ರಾಂಚೈಸಿ ಆರಂಭಿಸಿದ್ದರು. ಅದನ್ನು ಮುಂದುವರಿಸಲು ಮನಸ್ಸಾಗದೇ ಹಾಗೂ ಸ್ವಾವಲಂಬಿ ಬದುಕಿನ ಕನಸಿನಲ್ಲಿ ಕೃಷಿಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪುತ್ರನ ಅಪರೂಪದ ಒತ್ತಾಸೆಗೆ ತಂದೆ, ತಾಯಿ ಪ್ರೋತ್ಸಾಹಿಸುತ್ತಿದ್ದಾರೆ.
5 ಎಕರೆಯಲ್ಲಿ ಕೃಷಿ ಪ್ರಯೋಗ: ತಾಯಿ ಹೆಸರಿನಲ್ಲಿ ಇರುವ ಐದು ಎಕರೆ ಜಮೀನನ್ನು ಈ ಮುಂಚೆ ಬೇರೊಬ್ಬರಿಗೆ ಗುತ್ತಿಗೆ ನೀಡಲಾಗಿತ್ತು. ಈಗ ಅದರಲ್ಲೇ ಹರೀಶ್ಕುಮಾರ್ ಅವರು ತಮ್ಮ ಕೃಷಿ ಪ್ರಯೋಗ ಕೈಗೊಂಡಿದ್ದಾರೆ. ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸುವ ಮೂಲಕ ಮಳೆ ನೀರು ಸಂಗ್ರಹಕ್ಕೂ ಕ್ರಮಕೈಗೊಂಡಿದ್ದಾರೆ. ಬೋರ್ವೆಲ್ನಿಂದಲೂ ಸಾಕಷ್ಟು ನೀರು ದೊರೆಯುತ್ತಿದೆ. ನಾಲ್ಕು ಎಕರೆಯಲ್ಲಿ ಹತ್ತಿ, ಮೆಣಸಿನಕಾಯಿ, ಜೋಳ ಬೆಳೆದಿದ್ದಾರೆ. ಒಂದು ಎಕರೆಯಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಪಾಲಿಹೌಸ್ ನಿರ್ಮಿಸಿದ್ದಾರೆ. ಅಲ್ಲಿ ಬೆಳೆದ ಡೊಣ್ಣೆ ಮೆಣಸಿನಕಾಯಿ ಸಮೃದ್ಧ ಫಸಲು ನೀಡಿದೆ. ಹಸಿರು, ಕೆಂಪು ಹಾಗೂ ಹಳದಿ ಬಣ್ಣದ ಮೆಣಸಿನಕಾಯಿ ಬೆಳೆ ಪಾಲಿಹೌಸ್ನಲ್ಲಿ ನಳನಳಿಸುತ್ತಿದೆ. ಕೆಂಪು ಹಾಗೂ ಹಳದಿ ಬಣ್ಣದ ಮೆಣಸಿನಕಾಯಿಯನ್ನು ಹೈದರಾಬಾದ್ನಲ್ಲಿ (ಕೆ.ಜಿ.ಗೆ 35-40 ರೂ.)ಮಾರಾಟಮಾಡುತ್ತಾರೆ. ಈಗಾಗಲೇ 25 ರಿಂದ 30 ಟನ್ ಡೊಣ್ಣೆ ಮೆಣಸಿನಕಾಯಿ ಬೆಳೆದು ಕೃಷಿ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.
...............
ಎಂಜಿನಿಯರಿಂಗ್ ಪದವಿ ಮಾಡಿದರೂ, ಮೊದಲಿನಿಂದಲೂ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಒಂದು ಎಕರೆಯಲ್ಲಿ ಪಾಲಿ ಹೌಸ್ ಅಳವಡಿಸಿ, ಡೊಣ್ಣೆ ಮೆಣಸಿನಕಾಯಿ ಬೆಳೆದಿರುವೆ. ಕೃಷಿಯೂ ಲಾಭದಾಯಕ ಕ್ಷೇತ್ರವಾಗಿದೆ.
-ಹರೀಶ್ ಕುಮಾರ್, ಎಂಜಿನಿಯರಿಂಗ್ ಪದವೀಧರ ರೈತ
...............
ನಮ್ಮ ಮಗ ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರಿಂದ ನಿರೀಕ್ಷೆಯಂತೆ ಬೆಳೆ ಬಂದಿದೆ. ಸಮೃದ್ಧ ಬೆಳೆ ಕಂಡು ಸಂತೋಷವಾಗಿದೆ.
-ಪಂಪಾಪತಿ, ಹರೀಶ್ಕುಮಾರ್ ತಂದೆ