ಆ್ಯಪ್ನಗರ

ಗಮನ ಸೆಳೆದ ಗುಳೆಲಕ್ಕಮ್ಮನ ಜಾತ್ರೆ

ತಾಲೂಕಿನ ಹೊಸ್ಕೇರಿ ಗ್ರಾಮದಲ್ಲಿ ಗುಳೇ ಲಕ್ಕವ್ವನ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಾನುವಾರುಗಳೊಂದಿಗೆ ಬೆಳಗಿನಿಂದಲೇ ಗ್ರಾಮ ತೊರೆದು ಹೊರವಲಯದಲ್ಲಿ ಸಂಜೆವರೆಗೂ ಶುಕ್ರವಾರ ವಾಸವಾಗಿದ್ದರು.

ವಿಕ ಸುದ್ದಿಲೋಕ 21 Jan 2017, 6:37 am
ಹಗರಿಬೊಮ್ಮನಹಳ್ಳಿ: ತಾಲೂಕಿನ ಹೊಸ್ಕೇರಿ ಗ್ರಾಮದಲ್ಲಿ ಗುಳೇ ಲಕ್ಕವ್ವನ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಾನುವಾರುಗಳೊಂದಿಗೆ ಬೆಳಗಿನಿಂದಲೇ ಗ್ರಾಮ ತೊರೆದು ಹೊರವಲಯದಲ್ಲಿ ಸಂಜೆವರೆಗೂ ಶುಕ್ರವಾರ ವಾಸವಾಗಿದ್ದರು.
Vijaya Karnataka Web
ಗಮನ ಸೆಳೆದ ಗುಳೆಲಕ್ಕಮ್ಮನ ಜಾತ್ರೆ


ಹೊರವಲಯದ ಹೊಲವೊಂದರಲ್ಲಿ ಗುಳೆಲಕ್ಕಮ್ಮ ಮೂರ್ತಿ ಸ್ಥಾಪಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಆರಂಭದಲ್ಲಿ ಗಂಗೆಪೂಜೆ ಸಲ್ಲಿಸಲಾಯಿತು. ಬಳಿಕ ನಾನಾ ವಾದ್ಯಗೋಷ್ಠಿಗಳೊಂದಿಗೆ ಹೊರವಲಯದ ದೇಗುಲದವರೆಗೂ ಮೆರವಣಿಗೆ ನಡೆಸಲಾಯಿತು. ಗ್ರಾಮದ ಸಾವಿರಾರು ಮಹಿಳೆಯರು ಬುತ್ತಿಗಂಟು ಹೊತ್ತು ತೆರಳುತ್ತಿದ್ದ ಮತ್ತು ಜಾನುವಾರುಗಳೊಂದಿಗೆ ಕಷಿಕರು ಸಾಗುತ್ತಿದ್ದದ್ದು ಗುಳೇ ಹೊರಟ ದಶ್ಯ ಕಟ್ಟಿಕೊಡುವಂತಿತ್ತು.

ಜಾತ್ರೆ ವಿಶೇಷತೆ ಕುರಿತು ಗ್ರಾಮದ ಪ್ರಧಾನ ಅರ್ಚಕ ವೀರಣ್ಣ ಮಾತನಾಡಿ, ಪ್ರತಿ 3 ವರ್ಷಗಳಿಗೊಮ್ಮೆ ಗುಳೆಲಕ್ಕಮ್ಮ ಜಾತ್ರೆ ಆಚರಿಸಲಾಗುತ್ತಿದೆ. ಜನಜಾನುವಾರುಗಳಿಗೆ ದೇವಿಯ ಅನುಗ್ರಹ ದೊರೆಯಲಿ ಎಂಬುದು ಜಾತ್ರೆಯ ಮೂಲ ಉದ್ದೇಶ, ಅಲ್ಲದೆ ಹೊರವಲಯದಲ್ಲಿ ಒಂದೇ ಕುಟುಂಬದವಂತೆ ಅಲ್ಲಲ್ಲಿ ಸಾಮೂಹಿಕವಾಗಿ ನೆಲೆಸುವುದು ಗ್ರಾಮ ಸಾಮರಸ್ಯಕ್ಕೂ ಸಹಕಾರಿಯಾಗುತ್ತದೆ. ಆಚರಣೆ ಅನ್ವಯ ಗ್ರಾಮದ ಹೊರವಲಯದಲ್ಲಿ ನೆಲೆಸಿ ಬಳಿಕ ಅಗಸಿ ಬಾಗಿಲಿನಲ್ಲಿ ಹಾಕಿದ ಕೆಂಡದಿಂದ ಪ್ರತಿ ಮನೆಯಲ್ಲೂ ದೀಪ ಬೆಳಗಿಸಲಾಗುತ್ತದೆ ಎಂದರು. ಗ್ರಾ.ಪಂ.ಸದಸ್ಯರಾದ ಮೇಟಿ ಕೊಟ್ರಪ್ಪ, ಮರಿಯಪ್ಪ, ಲಲಿತಮ್ಮ ವೀರೇಶ್‌ಸ್ವಾಮಿ, ದುರುಗಪ್ಪ, ಮುಖಂಡ ಗುರುಬಸಪ್ಪ, ಉಮಾಪತಿ ಊದುಗಡ್ಡಿ, ತ್ರಿಮೂರ್ತಿ, ಯು.ವಿನಯ್, ಚಾರೆಪ್ಪ, ಡಾ.ವೆಂಕಟೇಶ್, ಬಡಿಗೇರ ದೊಡ್ಡವೀರಪ್ಪ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ