ಹೊಸಪೇಟೆ: ಹಂಪಿ ಪ್ರದೇಶದಲ್ಲಿ ಚಿರತೆಗಳು ಮತ್ತೆ ಕಾಣಿಸಿಕೊಳ್ಳುತ್ತಿದ್ದು, ಪ್ರವಾಸಿಗರಲ್ಲಿ ಅಸುರಕ್ಷೆ ಭೀತಿ ಮೂಡಿದೆ.
ಇಲ್ಲಿನ ಅಕ್ಕ-ತಂಗಿಯರ ಗುಡ್ಡ, ಮಾತಂಗ ಪರ್ವತ, ಕಡ್ಡಿರಾಂಪುರ ಮಾರ್ಗದ ಕುಸ್ತಿ ಅಖಾಡ ಬಳಿ ಆಗಾಗ್ಗೆ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. 2014ರಲ್ಲಿ ಹಂಪಿ ಉತ್ಸವ ಸಂದರ್ಭದಲ್ಲೇ ಚಿರತೆವೊಂದು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ 2016ರ ನವೆಂಬರ್ನಲ್ಲಿ ನಡೆದ ಹಂಪಿ ಉತ್ಸವ ವೇಳೆ ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ರಹಸ್ಯ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರದೇಶದಲ್ಲಿ ನಿತ್ಯ ಆರೇಳು ಚಿರತೆಗಳು ಓಡಾಡುತ್ತಿವೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಪ್ರವಾಸಿಗರ ನೆಚ್ಚಿನ ತಾಣ: ಹಂಪಿಗೆ ವಾರ್ಷಿಕ 1ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಹಾಗೂ 25ಲಕ್ಷಕ್ಕೂ ಹೆಚ್ಚು ದೇಶೀ ಪ್ರವಾಸಿಗರು ಭೇಟಿನೀಡುತ್ತಾರೆ. ಸ್ಮಾರಕಗಳ ಬಳಿಯೇ ಚಿರತೆಗಳು ಓಡಾಡಿದ್ದರೂ ಇದುವರೆಗೆ ಮನುಷ್ಯರ ಜತೆ ಅವು ಸಂಘರ್ಷಕ್ಕೆ ಇಳಿದಿಲ್ಲ ಎಂಬುದಷ್ಟೇ ಸಮಾಧಾನಕರ ಸಂಗತಿಯಾಗಿದೆ. ಇಲ್ಲಿನ ಚಿರತೆಗಳನ್ನು ಸೆರೆಹಿಡಿದು ಬೇರೆಡೆ ಸಾಗಿಸಲು ಕ್ರಮಕೈಗೊಳ್ಳಬೇಕು ಎಂದು ಪ್ರವಾಸಿಗರು ಆಗ್ರಹಿಸಿದ್ದಾರೆ.
................
ಹಂಪಿ ಪ್ರದೇಶದಲ್ಲಿ ನಿತ್ಯ ಆರೇಳು ಚಿರತೆಗಳು ಓಡಾಡುತ್ತವೆ. ಚಿರತೆಗಳು ಹಾಗೂ ಮಾನವರ ನಡುವೆ ಇದುವರೆಗೆ ಸಂಘರ್ಷ ನಡೆದಿಲ್ಲ. ಶೀಘ್ರವೇ ಕಾರ್ಯಾಚರಣೆ ನಡೆಸಿ ಚಿರತೆಗಳನ್ನು ಸೆರೆಹಿಡಿದು ಬೇರೆಡೆ ಸಾಗಿಸಲಾಗುವುದು.
-ನಾಗರಾಜ್, ಆರ್ಎಫ್ಒ, ಹೊಸಪೇಟೆ
ಇಲ್ಲಿನ ಅಕ್ಕ-ತಂಗಿಯರ ಗುಡ್ಡ, ಮಾತಂಗ ಪರ್ವತ, ಕಡ್ಡಿರಾಂಪುರ ಮಾರ್ಗದ ಕುಸ್ತಿ ಅಖಾಡ ಬಳಿ ಆಗಾಗ್ಗೆ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. 2014ರಲ್ಲಿ ಹಂಪಿ ಉತ್ಸವ ಸಂದರ್ಭದಲ್ಲೇ ಚಿರತೆವೊಂದು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ 2016ರ ನವೆಂಬರ್ನಲ್ಲಿ ನಡೆದ ಹಂಪಿ ಉತ್ಸವ ವೇಳೆ ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ರಹಸ್ಯ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರದೇಶದಲ್ಲಿ ನಿತ್ಯ ಆರೇಳು ಚಿರತೆಗಳು ಓಡಾಡುತ್ತಿವೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
ಪ್ರವಾಸಿಗರ ನೆಚ್ಚಿನ ತಾಣ: ಹಂಪಿಗೆ ವಾರ್ಷಿಕ 1ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಹಾಗೂ 25ಲಕ್ಷಕ್ಕೂ ಹೆಚ್ಚು ದೇಶೀ ಪ್ರವಾಸಿಗರು ಭೇಟಿನೀಡುತ್ತಾರೆ. ಸ್ಮಾರಕಗಳ ಬಳಿಯೇ ಚಿರತೆಗಳು ಓಡಾಡಿದ್ದರೂ ಇದುವರೆಗೆ ಮನುಷ್ಯರ ಜತೆ ಅವು ಸಂಘರ್ಷಕ್ಕೆ ಇಳಿದಿಲ್ಲ ಎಂಬುದಷ್ಟೇ ಸಮಾಧಾನಕರ ಸಂಗತಿಯಾಗಿದೆ. ಇಲ್ಲಿನ ಚಿರತೆಗಳನ್ನು ಸೆರೆಹಿಡಿದು ಬೇರೆಡೆ ಸಾಗಿಸಲು ಕ್ರಮಕೈಗೊಳ್ಳಬೇಕು ಎಂದು ಪ್ರವಾಸಿಗರು ಆಗ್ರಹಿಸಿದ್ದಾರೆ.
................
ಹಂಪಿ ಪ್ರದೇಶದಲ್ಲಿ ನಿತ್ಯ ಆರೇಳು ಚಿರತೆಗಳು ಓಡಾಡುತ್ತವೆ. ಚಿರತೆಗಳು ಹಾಗೂ ಮಾನವರ ನಡುವೆ ಇದುವರೆಗೆ ಸಂಘರ್ಷ ನಡೆದಿಲ್ಲ. ಶೀಘ್ರವೇ ಕಾರ್ಯಾಚರಣೆ ನಡೆಸಿ ಚಿರತೆಗಳನ್ನು ಸೆರೆಹಿಡಿದು ಬೇರೆಡೆ ಸಾಗಿಸಲಾಗುವುದು.
-ನಾಗರಾಜ್, ಆರ್ಎಫ್ಒ, ಹೊಸಪೇಟೆ