ಕಂಪ್ಲಿ: ಜನರು ಹಣ ಮತ್ತು ಸುಖದ ಬೆನ್ನಟ್ಟಿ ಸಾಗುತ್ತಿರುವುದು ದುರಂತದ ಸಂಗತಿಯಾಗಿದೆ ಎಂದು ವೀರಶೈವ ಸಮಾಜದ ಮುಖಂಡ ಬೂದಗುಂಪಿ ವೀರಭದ್ರಪ್ಪ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ಚಪ್ಪರದಲ್ಲಿಯ ಶೇಷಮ್ಮ ಮಠದ ಆವರಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹೋಬಳಿ ಘಟಕದಿಂದ ಆಯೋಜಿಸಿದ್ದ 79ನೇ ಮಹಾಮನೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಸಂಚಾಲಕ ಪಿ.ಸೋಮಪ್ಪ ಮಾತನಾಡಿ, ತಾಳ್ಮೆ ಮತ್ತು ಚಿಂತನೆಗಳು ಉತ್ತಮ ಜೀವನವನ್ನು ರೂಪಿಸಬಲ್ಲವು ಎಂದರು. ಮಠದ ಶೇಷಮ್ಮ ಅಧ್ಯಕ್ಷ ತೆ ವಹಿಸಿದ್ದರು. ಬಯಲಾಟ ಕಲಾವಿದ ಜಡೆ ದೊಡ್ಡ ಬಸಪ್ಪ, ಶಸಾಪ ಹೋಬಳಿ ಘಟಕ ಅಧ್ಯಕ್ಷ ಜಿ.ಪ್ರಕಾಶ್, ಬಸವ ಆಶ್ರಮದ ಪಾಮಯ್ಯ ಶರಣರು, ಪ್ರಮುಖರಾದ ಎ.ಹುಲುಗಪ್ಪ, ಬಂಗಿ ದೊಡ್ಡ ಮಂಜುನಾಥ, ಅಂಬಿಗರ ಮಂಜುನಾಥ, ವಾಲ್ಮೀಕಿ ಈರಣ್ಣ, ವಾಲ್ಮೀಕಿ ವೀರೇಶ್, ಬಿಂಗಿ ವೆಂಕೋಬಣ್ಣ, ಜಿ.ಶಿವಪ್ಪ, ವಾಲ್ಮೀಕಿ ದುರ್ಗಪ್ಪ, ಭುವನರಾಯಪ್ಪ, ಸಿ.ವೆಂಕಟೇಶ್, ಹೊನ್ನೂರಮ್ಮ, ವಿ.ಮಲ್ಲಯ್ಯ, ಎಸ್.ವೆಂಕಟೇಶ್, ಎ.ಯಲ್ಲಪ್ಪ ಇದ್ದರು.