ಶಶಿಧರ ಮೇಟಿ, ಬಳ್ಳಾರಿ
ಕೇಂದ್ರ ಗಣಿ ಸಚಿವಾಲಯ ಬಿಡುಗಡೆಗೊಳಿಸಿರುವ ಟ್ರಾನ್ಸ್ಪರೆನ್ಸಿ ಆಕ್ಷನ್ ಮಾನಿಟರಿಂಗ್ ಆ್ಯಂಡ್ ರಿಸೋರ್ಸ್ ಆಗ್ಮೆಂಟೇಷನ್(ಟಿಎಎಂಆರ್ಎ-ತಾಮ್ರ)ಆ್ಯಪ್, ಪ್ರಮುಖ ಖನಿಜಗಳ ಗಣಿಗುತ್ತಿಗೆ ಪರವಾನಗಿ ಪಡೆಯುವ ಗುತ್ತಿಗೆದಾರರ ಮೊಗದಲ್ಲಿ ನಗೆ ತಂದಿದೆ.
ಗಣಿಗಾರಿಕೆಯನ್ನು ಇ-ಹರಾಜು ಮೂಲಕ ಪಡೆದರೂ ಗಣಿಗಾರಿಕೆ ಆರಂಭಿಸಲು ಹಾಗೂ ಶಾಸನಬದ್ಧ ಪರವಾನಗಿ ಪಡೆಯಲು ಇದುವರೆಗೆ ತೀವ್ರ ವಿಳಂಬವಾಗುತ್ತಿತ್ತು. ಇದನ್ನು ಮನಗಂಡ ಕೇಂದ್ರ ಗಣಿ ಸಚಿವಾಲಯ, ಪರವಾನಗಿ ಪಡೆಯುವುದನ್ನು ಸುಗಮಗೊಳಿಸಲು ಹಾಗೂ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ವೆಬ್ ಆಧಾರಿತ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ.
ಫೆ.15ರಂದು ಬಿಡುಗಡೆ: ಪ್ರಮುಖ ಖನಿಜಗಳ ಗಣಿಗಾರಿಕೆ ನಡೆಸುವ ಮುನ್ನ ಅರಣ್ಯ, ಪರಿಸರ ಸೇರಿ ಇತರ ಇಲಾಖೆಗಳ ಪರವಾನಗಿ ಪಡೆಯುವ ಹಾದಿಯನ್ನು ಸುಗಮಗೊಳಿಸಲು ಕೇಂದ್ರ ಮಟ್ಟದಲ್ಲಿ ಅಂತರ್ ಸಚಿವಾಲಯದ ಗ್ರೂಪ್ ರಚಿಸಲಾಗಿದೆ. ಇದಕ್ಕೆ ‘ಗಣಿಗಾರಿಕೆ ಹರಾಜೋತ್ತರ ಪರವಾನಗಿ ಮತ್ತು ಅನುಮೋದನೆ ಒದಗಿಸುವ ಸಮಿತಿ’ ಎಂದು ಹೆಸರಿಸಲಾಗಿದೆ. ಈ ಸಮಿತಿ ಅಧೀನದಲ್ಲಿ ಟಿಎಎಂಆರ್ಎ (ತಾಮ್ರ) ಕಾರ್ಯನಿರ್ವಹಿಸಲಿದೆ. ಈ ಮೊಬೈಲ್ ಆ್ಯಪ್ ಅನ್ನು ಕೇಂದ್ರ ಗಣಿ ಸಚಿವಾಲಯ, ಫೆ.15ರಂದು ಬಿಡುಗಡೆಗೊಳಿಸಿದ್ದು, ನಾನಾ ರಾಜ್ಯಗಳಲ್ಲಿ ಇನ್ನೂ ಜಾರಿಯಾಗಬೇಕಿದೆ.
ಕೇಂದ್ರ, ರಾಜ್ಯ ಸಹಭಾಗಿತ್ವ: ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ನೀತಿ, ನಿಯಮಗಳನ್ನು ರೂಪಿಸಲಾಗುತ್ತದೆ. ಕೇಂದ್ರ ಸರಕಾರ, ಗಣಿಗಾರಿಕೆ ಕುರಿತ ನಿಯಮ, ಕಾಯಿದೆಗಳನ್ನು ರಚಿಸಿದರೆ, ರಿಯಾಯಿತಿ ನೀಡಿಕೆ ಹಾಗೂ ಗಣಿಗಾರಿಕೆ ನಿರ್ವಹಣೆ ರಾಜ್ಯದ ಹೊಣೆಯಾಗಿದೆ. ದೇಶದ ಖನಿಜ ಸಂಪನ್ಮೂಲಗಳನ್ನು ವ್ಯವಸ್ಥಿತ ಹಾಗೂ ವೈಜ್ಞಾನಿಕವಾಗಿ ಬಳಸಲು ಐಬಿಎಂ ಇಂತಹ ನಿಯಮ ರೂಪಿಸಿದೆ.
ಮೇಕ್ ಇನ್ ಇಂಡಿಯಾ ಪರಿಕಲ್ಪನೆ: ಗಣಿಗಾರಿಕೆ ಪರವಾನಗಿಯಲ್ಲಿ ಪಾರದರ್ಶಕತೆ ತರುವುದು, ಇ-ಹರಾಜು ಮೂಲಕ ಗಣಿಗಾರಿಕೆಗೆ ಅವಕಾಶ ನೀಡುವುದು ಸೇರಿ ಇತರ ಉದ್ದೇಶ ಆಧರಿಸಿ, ಮೈನ್ ಆ್ಯಂಡ್ ಮಿನರಲ್ಸ್ ಡೆವಲಪ್ಮೆಂಟ್ ಆ್ಯಂಡ್ ರೆಗುಲೇಷನ್ ಆ್ಯಕ್ಟ್ ಗೆ 2015ರಲ್ಲಿ ತಿದ್ದುಪಡಿ ತರಲಾಗಿದೆ. ಇ-ಹರಾಜಿನಲ್ಲಿ ಗಣಿಗಾರಿಕೆ ಪಡೆದ ಅಲ್ಪಾವಧಿಯಲ್ಲಿಯೇ ಅದಿರು ಉತ್ಪಾದನೆಗೆ ಅವಕಾಶ ಕಲ್ಪಿಸಲು ಪ್ರಧಾನಿಯವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಆಧರಿಸಿ ಹೊಸ ಆ್ಯಪ್ ರೂಪಿಸಲಾಗಿದೆ. ಏಕಗವಾಕ್ಷಿ ಮೂಲಕ ಗಣಿಗಾರಿಕೆಗೆ ಸಂಬಂಧಿಸಿದ ಹಲವು ಶಾಸನಬದ್ಧ ಪರವಾನಗಿ ಪಡೆಯಲು ಈ ಆ್ಯಪ್ ಆಶಾಕಿರಣವಾಗಲಿದೆ. ಪರವಾನಗಿ ಪಡೆಯಲು ಸಲ್ಲಿಸಿರುವ ಅರ್ಜಿ ಯಾವ ಹಂತದಲ್ಲಿದೆ? ಎಂದು ತಿಳಿಯಲು ಹಾಗೂ ಪರವಾನಗಿಗೆ ಅಡ್ಡಿಯಾದ ತೊಡಕು ನಿವಾರಣೆಗೂ ಆ್ಯಪ್ ಮಾಹಿತಿ ಒದಗಿಸಲಿದೆ.
........
ಪ್ರಮುಖ ಖನಿಜಗಳ ಗಣಿಗಾರಿಕೆಗೆ ಸಂಬಂಧಿಸಿ ಶಾಸನಬದ್ಧ ಪರವಾನಗಿ ಪಡೆಯಲು ತಡವಾಗುತ್ತಿದೆ ಎಂಬ ಆರೋಪ ದೂರಮಾಡಲು ಹಾಗೂ ಪರವಾನಗಿ ನೀಡುವ ವ್ಯವಸ್ಥೆಯನ್ನು ಒಂದೇ ಕಡೆ ಮಾನಿಟರಿಂಗ್ ಮಾಡಲು ಟಿಎಎಂಆರ್ಎ ಸಹಕಾರಿಯಾಗಲಿದೆ. ದೇಶದ ಒಟ್ಟಾರೆ ಗಣಿಗಾರಿಕೆಯ ಶಾಸನಬದ್ಧ ಪರವಾನಗಿಗೆ ಸಂಬಂಧಿಸಿದ ಮಾಹಿತಿ ಈ ವೆಬ್ನಲ್ಲಿ ಲಭ್ಯವಾಗುತ್ತದೆ. ಈಗಾಗಲೇ ಕೇಂದ್ರ ಸರಕಾರ ಈ ಆ್ಯಪ್ ಬಿಡುಗಡೆ ಮಾಡಿದ್ದು, ರಾಜ್ಯಗಳಲ್ಲಿ ಅನುಷ್ಠಾನ ಬಾಕಿಯಿದೆ.
-ಸಸಿಕಾಂತ್ ಸೆಂಥಿಲ್, ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಂಗಳೂರು
ಕೇಂದ್ರ ಗಣಿ ಸಚಿವಾಲಯ ಬಿಡುಗಡೆಗೊಳಿಸಿರುವ ಟ್ರಾನ್ಸ್ಪರೆನ್ಸಿ ಆಕ್ಷನ್ ಮಾನಿಟರಿಂಗ್ ಆ್ಯಂಡ್ ರಿಸೋರ್ಸ್ ಆಗ್ಮೆಂಟೇಷನ್(ಟಿಎಎಂಆರ್ಎ-ತಾಮ್ರ)ಆ್ಯಪ್, ಪ್ರಮುಖ ಖನಿಜಗಳ ಗಣಿಗುತ್ತಿಗೆ ಪರವಾನಗಿ ಪಡೆಯುವ ಗುತ್ತಿಗೆದಾರರ ಮೊಗದಲ್ಲಿ ನಗೆ ತಂದಿದೆ.
ಗಣಿಗಾರಿಕೆಯನ್ನು ಇ-ಹರಾಜು ಮೂಲಕ ಪಡೆದರೂ ಗಣಿಗಾರಿಕೆ ಆರಂಭಿಸಲು ಹಾಗೂ ಶಾಸನಬದ್ಧ ಪರವಾನಗಿ ಪಡೆಯಲು ಇದುವರೆಗೆ ತೀವ್ರ ವಿಳಂಬವಾಗುತ್ತಿತ್ತು. ಇದನ್ನು ಮನಗಂಡ ಕೇಂದ್ರ ಗಣಿ ಸಚಿವಾಲಯ, ಪರವಾನಗಿ ಪಡೆಯುವುದನ್ನು ಸುಗಮಗೊಳಿಸಲು ಹಾಗೂ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ವೆಬ್ ಆಧಾರಿತ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ.
ಫೆ.15ರಂದು ಬಿಡುಗಡೆ: ಪ್ರಮುಖ ಖನಿಜಗಳ ಗಣಿಗಾರಿಕೆ ನಡೆಸುವ ಮುನ್ನ ಅರಣ್ಯ, ಪರಿಸರ ಸೇರಿ ಇತರ ಇಲಾಖೆಗಳ ಪರವಾನಗಿ ಪಡೆಯುವ ಹಾದಿಯನ್ನು ಸುಗಮಗೊಳಿಸಲು ಕೇಂದ್ರ ಮಟ್ಟದಲ್ಲಿ ಅಂತರ್ ಸಚಿವಾಲಯದ ಗ್ರೂಪ್ ರಚಿಸಲಾಗಿದೆ. ಇದಕ್ಕೆ ‘ಗಣಿಗಾರಿಕೆ ಹರಾಜೋತ್ತರ ಪರವಾನಗಿ ಮತ್ತು ಅನುಮೋದನೆ ಒದಗಿಸುವ ಸಮಿತಿ’ ಎಂದು ಹೆಸರಿಸಲಾಗಿದೆ. ಈ ಸಮಿತಿ ಅಧೀನದಲ್ಲಿ ಟಿಎಎಂಆರ್ಎ (ತಾಮ್ರ) ಕಾರ್ಯನಿರ್ವಹಿಸಲಿದೆ. ಈ ಮೊಬೈಲ್ ಆ್ಯಪ್ ಅನ್ನು ಕೇಂದ್ರ ಗಣಿ ಸಚಿವಾಲಯ, ಫೆ.15ರಂದು ಬಿಡುಗಡೆಗೊಳಿಸಿದ್ದು, ನಾನಾ ರಾಜ್ಯಗಳಲ್ಲಿ ಇನ್ನೂ ಜಾರಿಯಾಗಬೇಕಿದೆ.
ಕೇಂದ್ರ, ರಾಜ್ಯ ಸಹಭಾಗಿತ್ವ: ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ನೀತಿ, ನಿಯಮಗಳನ್ನು ರೂಪಿಸಲಾಗುತ್ತದೆ. ಕೇಂದ್ರ ಸರಕಾರ, ಗಣಿಗಾರಿಕೆ ಕುರಿತ ನಿಯಮ, ಕಾಯಿದೆಗಳನ್ನು ರಚಿಸಿದರೆ, ರಿಯಾಯಿತಿ ನೀಡಿಕೆ ಹಾಗೂ ಗಣಿಗಾರಿಕೆ ನಿರ್ವಹಣೆ ರಾಜ್ಯದ ಹೊಣೆಯಾಗಿದೆ. ದೇಶದ ಖನಿಜ ಸಂಪನ್ಮೂಲಗಳನ್ನು ವ್ಯವಸ್ಥಿತ ಹಾಗೂ ವೈಜ್ಞಾನಿಕವಾಗಿ ಬಳಸಲು ಐಬಿಎಂ ಇಂತಹ ನಿಯಮ ರೂಪಿಸಿದೆ.
ಮೇಕ್ ಇನ್ ಇಂಡಿಯಾ ಪರಿಕಲ್ಪನೆ: ಗಣಿಗಾರಿಕೆ ಪರವಾನಗಿಯಲ್ಲಿ ಪಾರದರ್ಶಕತೆ ತರುವುದು, ಇ-ಹರಾಜು ಮೂಲಕ ಗಣಿಗಾರಿಕೆಗೆ ಅವಕಾಶ ನೀಡುವುದು ಸೇರಿ ಇತರ ಉದ್ದೇಶ ಆಧರಿಸಿ, ಮೈನ್ ಆ್ಯಂಡ್ ಮಿನರಲ್ಸ್ ಡೆವಲಪ್ಮೆಂಟ್ ಆ್ಯಂಡ್ ರೆಗುಲೇಷನ್ ಆ್ಯಕ್ಟ್ ಗೆ 2015ರಲ್ಲಿ ತಿದ್ದುಪಡಿ ತರಲಾಗಿದೆ. ಇ-ಹರಾಜಿನಲ್ಲಿ ಗಣಿಗಾರಿಕೆ ಪಡೆದ ಅಲ್ಪಾವಧಿಯಲ್ಲಿಯೇ ಅದಿರು ಉತ್ಪಾದನೆಗೆ ಅವಕಾಶ ಕಲ್ಪಿಸಲು ಪ್ರಧಾನಿಯವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಆಧರಿಸಿ ಹೊಸ ಆ್ಯಪ್ ರೂಪಿಸಲಾಗಿದೆ. ಏಕಗವಾಕ್ಷಿ ಮೂಲಕ ಗಣಿಗಾರಿಕೆಗೆ ಸಂಬಂಧಿಸಿದ ಹಲವು ಶಾಸನಬದ್ಧ ಪರವಾನಗಿ ಪಡೆಯಲು ಈ ಆ್ಯಪ್ ಆಶಾಕಿರಣವಾಗಲಿದೆ. ಪರವಾನಗಿ ಪಡೆಯಲು ಸಲ್ಲಿಸಿರುವ ಅರ್ಜಿ ಯಾವ ಹಂತದಲ್ಲಿದೆ? ಎಂದು ತಿಳಿಯಲು ಹಾಗೂ ಪರವಾನಗಿಗೆ ಅಡ್ಡಿಯಾದ ತೊಡಕು ನಿವಾರಣೆಗೂ ಆ್ಯಪ್ ಮಾಹಿತಿ ಒದಗಿಸಲಿದೆ.
........
ಪ್ರಮುಖ ಖನಿಜಗಳ ಗಣಿಗಾರಿಕೆಗೆ ಸಂಬಂಧಿಸಿ ಶಾಸನಬದ್ಧ ಪರವಾನಗಿ ಪಡೆಯಲು ತಡವಾಗುತ್ತಿದೆ ಎಂಬ ಆರೋಪ ದೂರಮಾಡಲು ಹಾಗೂ ಪರವಾನಗಿ ನೀಡುವ ವ್ಯವಸ್ಥೆಯನ್ನು ಒಂದೇ ಕಡೆ ಮಾನಿಟರಿಂಗ್ ಮಾಡಲು ಟಿಎಎಂಆರ್ಎ ಸಹಕಾರಿಯಾಗಲಿದೆ. ದೇಶದ ಒಟ್ಟಾರೆ ಗಣಿಗಾರಿಕೆಯ ಶಾಸನಬದ್ಧ ಪರವಾನಗಿಗೆ ಸಂಬಂಧಿಸಿದ ಮಾಹಿತಿ ಈ ವೆಬ್ನಲ್ಲಿ ಲಭ್ಯವಾಗುತ್ತದೆ. ಈಗಾಗಲೇ ಕೇಂದ್ರ ಸರಕಾರ ಈ ಆ್ಯಪ್ ಬಿಡುಗಡೆ ಮಾಡಿದ್ದು, ರಾಜ್ಯಗಳಲ್ಲಿ ಅನುಷ್ಠಾನ ಬಾಕಿಯಿದೆ.
-ಸಸಿಕಾಂತ್ ಸೆಂಥಿಲ್, ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಂಗಳೂರು