ಆ್ಯಪ್ನಗರ

ಹಂದಿ ದಾಳಿ: ಬಾಲಕಿಗೆ ಗಾಯ

ತಾಲೂಕಿನ ಕಮಲಾಪುರದ ಹಿರೇಕೆರಿಯಲ್ಲಿ ಹಂದಿಯೊಂದು ನಡೆಸಿದ ದಾಳಿಯಲ್ಲಿ ಬಹಿರ್ದೆಸೆಗೆಂದು ತೆರಳಿದ್ದ ಮೂರು ವರ್ಷದ ಬಾಲಕಿ ಗಾಯಗೊಂಡಿದ್ದಾಳೆ.

ವಿಕ ಸುದ್ದಿಲೋಕ 28 Mar 2017, 8:27 am
ಹೊಸಪೇಟೆ: ತಾಲೂಕಿನ ಕಮಲಾಪುರದ ಹಿರೇಕೆರಿಯಲ್ಲಿ ಹಂದಿಯೊಂದು ನಡೆಸಿದ ದಾಳಿಯಲ್ಲಿ ಬಹಿರ್ದೆಸೆಗೆಂದು ತೆರಳಿದ್ದ ಮೂರು ವರ್ಷದ ಬಾಲಕಿ ಗಾಯಗೊಂಡಿದ್ದಾಳೆ.
Vijaya Karnataka Web
ಹಂದಿ ದಾಳಿ: ಬಾಲಕಿಗೆ ಗಾಯ


ಭಾಗ್ಯ ಗಾಯಗೊಂಡ ಬಾಲಕಿ. ನಗರದ ಉಪವಿಭಾಗ ಮಟ್ಟದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾಳೆ. ಮೂಲತಃ ಕೂಡ್ಲಿಗಿ ತಾಲೂಕಿನ ಹರಕಬಾವಿ ಗ್ರಾಮದ ರವಿ ಮತ್ತು ಶಿವಮ್ಮ ದಂಪತಿಯ ಪುತ್ರಿಯಾಗಿರುವ ಭಾಗ್ಯ, ಯುಗಾದಿ ಹಬ್ಬಕ್ಕೆಂದು ಕಮಲಾಪುರದ ಅಜ್ಜಿಯ ಮನೆಗೆ ಬಂದಿದ್ದಾಳೆ. ಸಿದ್ಧೇಶ್ವರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಕ್ಕದ ತಿಪ್ಪೆಯ ಬಳಿ ಬಾಲಕಿ ಬಹಿರ್ದೆಸೆಗೆಂದು ತೆರಳಿದ್ದಳು. ಮರಿಗಳನ್ನು ಹಾಕಿರುವ ಹಂದಿಯೊಂದು ಬಾಲಕಿಯ ಮೇಲೆ ಏಕಾಏಕಿ ದಾಳಿಮಾಡಿ ಗಾಯಗೊಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ