ಆ್ಯಪ್ನಗರ

ಸಹಿಷ್ಣುತೆ ಸಾರಿದ ಉಜ್ಜಿಯನಿ ಜಗದ್ಗುರು

ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಉಜ್ಜಯಿನಿಯ ಸದ್ದರ್ಮ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು, ಗ್ರಾಮದ ದರ್ಗಾ ಸೇರಿ ಸರ್ವಧರ್ಮ ಶ್ರದ್ಧಾಕೇಂದ್ರಗಳಿಗೆ ಭಾನುವಾರ ಭೇಟಿನೀಡಿ ಸಹಿಷ್ಣುತೆ ಸಂದೇಶ ಸಾರಿದರು.

ವಿಕ ಸುದ್ದಿಲೋಕ 1 May 2017, 8:13 am
ಉಜ್ಜಯಿನಿ (ಕೊಟ್ಟೂರು): ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಉಜ್ಜಯಿನಿಯ ಸದ್ದರ್ಮ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು, ಗ್ರಾಮದ ದರ್ಗಾ ಸೇರಿ ಸರ್ವಧರ್ಮ ಶ್ರದ್ಧಾಕೇಂದ್ರಗಳಿಗೆ ಭಾನುವಾರ ಭೇಟಿನೀಡಿ ಸಹಿಷ್ಣುತೆ ಸಂದೇಶ ಸಾರಿದರು.
Vijaya Karnataka Web
ಸಹಿಷ್ಣುತೆ ಸಾರಿದ ಉಜ್ಜಿಯನಿ ಜಗದ್ಗುರು


ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯ ರಥೋತ್ಸವ ಪ್ರಯುಕ್ತ ದೇವಸ್ಥಾನ ಹಾಗೂ ದರ್ಗಾಗಳಿಗೆ ಭೇಟಿನೀಡಿ ಪೂಜೆ ಸಲ್ಲಿಸುವುದು ಶ್ರೀಪೀಠದ ಪರಂಪರೆಯಾಗಿದೆ. ಈ ವರ್ಷವೂ ಭಾನುವಾರ ನಡೆದ ರಥೋತ್ಸವ ಸಂದರ್ಭದಲ್ಲಿ ಗ್ರಾಮದ ವನಿತಾದೇವಿ ದಲಿತ ಕೇರಿಯ ಮರುಳಸಿದ್ಧೇಶ್ವರ ದೇವಸ್ಥಾನ, ಜಂಟಿಲಿಂಗೇಶ್ವರ, ಕುರುಬರಗೇರಿಯ ಬೀರಲಿಂಗೇಶ್ವರ, ಕೊರವರ ಕೇರಿಯ ಉಚ್ಚಂಗಮ್ಮ, ನೇಕಾರ ಕಾಲೊನಿಯ ಕಾಳೇಶ್ವರ, ಸಿದ್ಧೇಶ್ವರ ಬಡಾವಣೆಯ ಆಂಜನೇಯ ದೇವಸ್ಥಾನ, ವಿಶ್ವಕರ್ಮ ಸಮಾಜದವರ ಕಾಳಿಕಾದೇವಿ ದೇವಸ್ಥಾನಗಳಿಗೆ ತೆರಳಿದ ಜಗದ್ಗುರುಗಳು, ಅಲ್ಲಿನ ಮೂರ್ತಿಗಳಿಗೆ ಪುಷ್ಪವಿರಿಸಿ ಅಕ್ಷತೆ ಅರ್ಪಿಸಿದರು.

ಈ ಎಲ್ಲ ದೇಗುಲಗಳ ಭೇಟಿ ನಂತರ ಜಗದ್ಗುರುಗಳು ಗ್ರಾಮದ ದರ್ಗಾಕ್ಕೂ ಭೇಟಿನೀಡಿದರು. ಅಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ಜಗದ್ಗುರುಗಳನ್ನು ಭಕ್ತಿಯಿಂದ ಸ್ವಾಗತಿಸಿರು. ಅವರೊಂದಿಗೆ ಕೆಲ ಹೊತ್ತು ಪ್ರಸ್ತುತ ವಿಷಯಗಳ ಕುರಿತು ಸಮಾಲೋಚಿಸಿದರು. ಜಗದ್ಗುರುಗಳ ಸರ್ವ ಧರ್ಮ ಸಾರುವ ಸಂದೇಶದ ನಡೆಗೆ ಗ್ರಾಮದ ಜನರು ಸಂತೋಷ ವ್ಯಕ್ತಪಡಿಸಿದ್ದಾರೆ.

ರಾಜ್ಯ ಪೊಲೀಸ್ ನಿವತ್ತ ಮಹಾ ನಿರೀಕ್ಷಕ, ಬಿಜೆಪಿ ಮುಖಂಡ ಶಂಕರ್ ಬಿದರಿ, ಗ್ರಾಮದ ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭಾನುವಾರ ಆಗಮಿಸಿ ಸ್ವಾಮಿಯ ದರ್ಶನ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ