ಆ್ಯಪ್ನಗರ

ಮಂಜುನಾಥ್‌, ಹೊಸಪೇಟೆ

ಹಂಪಿಯಲ್ಲಿ ಕೇವಲ ಕಲ್ಲುಬಂಡೆಗಳಲ್ಲಿ ಅರಳಿದ ಗುಡಿ ಗುಂಡಾರಗಳಿಲ್ಲ. ಬಿರು ಬಿಸಿಲಿನಲ್ಲಿ ನಿಸರ್ಗ ರಮಣೀಯವಾದ ಗುಲ್‌ಮೊಹರ್‌ ಗಿಡಮರಗಳೂ ಕಂಗೊಳಿಸುತ್ತಿವೆ.

ವಿಕ ಸುದ್ದಿಲೋಕ 8 May 2017, 7:15 pm

ಮಂಜುನಾಥ್‌, ಹೊಸಪೇಟೆ

ಹಂಪಿಯಲ್ಲಿ ಕೇವಲ ಕಲ್ಲುಬಂಡೆಗಳಲ್ಲಿ ಅರಳಿದ ಗುಡಿ ಗುಂಡಾರಗಳಿಲ್ಲ. ಬಿರು ಬಿಸಿಲಿನಲ್ಲಿ ನಿಸರ್ಗ ರಮಣೀಯವಾದ ಗುಲ್‌ಮೊಹರ್‌ ಗಿಡಮರಗಳೂ ಕಂಗೊಳಿಸುತ್ತಿವೆ.

ಎಂತಹ ಬಿಸಿಲಿನಲ್ಲೂ ಹಂಪಿ ತನ್ನ ಸೌಂದರ್ಯವನ್ನು, ಸೋಜಿಗವನ್ನು ಕಾಪಾಡಿಕೊಂಡೇ ಬರುತ್ತಿದೆ. ಇಲ್ಲಿ ಹರಿವ ತೊರೆ, ತೊನೆವ ಬಾಳೆ, ಕಬ್ಬುಗಳ ಜತೆ ಗುಲ್‌ಮೊಹರ್‌ ನಂತಹ ನಾಚಿ ನೀರಾಗುವ, ತರುಣಿಯರಂತೆ ಕಂಗೊಳಿಸುವ ಗಿಡ ಮರಗಳೂ ಇವೆ.

ಇಲ್ಲಿ ಅಧ್ಯಾತ್ಮದ ಔನ್ನತ್ಯ ಸಾರುವ ಸ್ಮಾರಕಗಳು, ಜ್ಞಾನದ ಹಸಿವು ನೀಗುವ ಐತಿಹ್ಯಗಳು, ಕಣ್ಣು ಕೊರೆಸುವ ಪ್ರಕೃತಿ ಸೌಂದರ್ಯ ಸೂಸುವ ಗಿಡ-ಮರಗಳು ಇವೆ.

ಹೊಸಪೇಟೆ, ಕಂಪ್ಲಿ ಮಾರ್ಗವಾಗಿ ಬರುವ ಪ್ರವಾಸಿಗರಿಗೆ ಮೊದಲು ಇಲ್ಲಿ ಸೂಜಿಗಲ್ಲಿನಂತೆ ಆಕರ್ಷಿಸುವುದೇ ಈ ಕೆಂಪನೆಯ ಕೋಮಲೆಯರಾದ ಗುಲ್‌ಮೊಹರ್‌ ಸುಂದರಾಂಗಿಯರು.

ಮುದ ನೀಡುವ ಪ್ರಕೃತಿ: ಇಷ್ಟಕ್ಕೂ ಹಂಪಿ ಪರಿಸರದುದ್ದಕ್ಕೂ ಇಲ್ಲಿ ಕಲೆಯನ್ನು ಹೊರ ಸೂಸುವ ಕಲ್ಲು ಬಂಡೆಗಳಿರುವಂತೆಯೇ ಕಮಲಾಪುರ, ಕಡ್ಡಿರಾಂಪುರ ಮತ್ತು ಸುತ್ತಲಿನ ಗ್ರಾಮಗಳಿಂದ ಬರುವಾಗ ಸೀಮಂತಿನಿಯಂತೆ ಕಂಗೊಳಿಸುವ ಇಲ್ಲಿನ ಪ್ರಕೃತಿ ಕೂಡ ಮನಸ್ಸಿಗೆ ಮುದ ನೀಡುತ್ತದೆ. ಇದನ್ನು ಆಸ್ವಾದಿಸುವ ಮನಸ್ಸು ಮತ್ತು ಭಾವನೆಗಳು ಇರಬೇಕಷ್ಟೇ.

ವೈವಿಧ್ಯಮಯ ಗಿಡಮರ: ಇಲ್ಲಿ ವಿಜಯ ನಗರ ಆಳರಸರು ಬೆಳೆಸಿದ ಅಪರೂಪದ ಗಿಡಮರಗಳೂ ಸೇರಿದಂತೆ ಮಾವು, ಬೇವು, ತೆಂಗು, ಸುಬಾಹುಲು, ಬಸಿರೆ ಸೇರಿದಂತೆ ನಾನಾ ಜಾತಿಯ, ವೈವಿಧ್ಯಮಯ ಗಿಡಮರಗಳಿವೆ.

ಗಿಡಮರಗಳು ಪ್ರವಾಸಿಗರಿಗೆ ತಂಪಾದ ಗಾಳಿ ಬೀಸುವ, ಸೊಂಪಾದ ನೆರಳು ನೀಡುವ ಮೂಲಕ ಆಹ್ಲಾದತೆಯನ್ನು ನೀಡುತ್ತಿವೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಯುನೆಸ್ಕೊ ವಿಶ್ವ ಪರಂಪರಾ ಪಟ್ಟಿಗೆ ಸೇರಿದ್ದ ಈ ಹಂಪಿಯನ್ನು ಇನ್ನಷ್ಟು ಸುಂದರೀಕರಣಗೊಳಿಸಲು ಅಪರೂಪದ ಸಸ್ಯಜನ್ಯಗಳ ಪರಿಚಯ ಮಾಡಿಕೊಡಬೇಕಿದೆ ಎನ್ನುವುದು ಪ್ರವಾಸಿಗರ ಅಭಿಪ್ರಾಯವಾಗಿದೆ.

----

Vijaya Karnataka Web
ಮಂಜುನಾಥ್‌, ಹೊಸಪೇಟೆ


ಭಾರತಕ್ಕೆ ಮತ್ತು ಭಾರತದ ಘನತೆಗೆ ಶತಮಾನಗಳಿಂದಲೂ ಕಿರೀಟಪ್ರಾಯವಾದ ಹಂಪಿ ಪರಿಸರದಲ್ಲಿ ಇನ್ನಷ್ಟು ಗಿಡ-ಮರಗಳನ್ನು ನೆಡಬೇಕಿದೆ. ಈ ದಿಸೆಯಲ್ಲಿ ಪುರಾತನ ಪ್ರಾಚ್ಯವಸ್ತು ಇಲಾಖೆ, ಪ್ರವಾಸೋದ್ಯಮ ಇಲಾಖೆಗಳು ಯೋಜನೆ ರೂಪಿಸಿ ಹಂಪಿಯ ಪ್ರಕೃತಿ ಪರಿಸರವನ್ನು ಉಳಿಸಬೇಕಿದೆ. -ಮುತ್ತುರಾಜ್‌, ಪ್ರವಾಸಿಗ.

-

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ