ಆ್ಯಪ್ನಗರ

ಸಿಡಿಲಿಗೆ ಬಾಲಕರಿಬ್ಬರು ಬಲಿ

ತಾಲೂಕಿನ ಬಂಡ್ರಿ ಗೊಲ್ಲರಹಟ್ಟಿಯಲ್ಲಿ ಗುರುವಾರ ಸಿಡಿಲು ಬಡಿದು ಒಂದೇ ಕುಂಟುಂಬದ ಬಾಲಕರಿಬ್ಬರು ಸ್ಥಳದಲ್ಲೇ ಮತಪಟ್ಟಿದ್ದು, ಮತ್ತೊಬ್ಬ ಬಾಲಕಿ ಗಾಯಗೊಂಡಿದ್ದಾಳೆ.

ವಿಕ ಸುದ್ದಿಲೋಕ 11 May 2017, 8:00 pm
ಸಂಡೂರು (ಬಳ್ಳಾರಿ): ತಾಲೂಕಿನ ಬಂಡ್ರಿ ಗೊಲ್ಲರಹಟ್ಟಿಯಲ್ಲಿ ಗುರುವಾರ ಸಿಡಿಲು ಬಡಿದು ಒಂದೇ ಕುಂಟುಂಬದ ಬಾಲಕರಿಬ್ಬರು ಸ್ಥಳದಲ್ಲೇ ಮತಪಟ್ಟಿದ್ದು, ಮತ್ತೊಬ್ಬ ಬಾಲಕಿ ಗಾಯಗೊಂಡಿದ್ದಾಳೆ.
Vijaya Karnataka Web
ಸಿಡಿಲಿಗೆ ಬಾಲಕರಿಬ್ಬರು ಬಲಿ


ಪುಟ್ಟರಾಜ (7) ಹಾಗೂ ಆಕಾಶ (9)ಮೃತರು. ಘಟನೆಯಲ್ಲಿ ತೀವ್ರ ಅಸ್ವಸ್ಥಗೊಂಡ ಬಾಲಕಿ ಯಶೋಧಾಗೆ ಬಂಡ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಸಮೀಪದ ಕೂಡ್ಲಿಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂವರೂ ಸುಂಕಜ್ಜನವರ ತಿಮ್ಮಣ್ಣ ಹಾಗೂ ಶಾಂತಮ್ಮ ಅವರ ಮಕ್ಕಳಾಗಿದ್ದಾರೆ. ತಮ್ಮ ಕಣದಲ್ಲಿದ್ದ ಎತ್ತುಗಳಿಗೆ ಮೇವು ಹಾಕಿ ನೀರುಣಿಸಲು ಅವರು ಹೊಲಕ್ಕೆ ತೆರಳಿದ್ದರು. ಮೇವು ಹಾಕಿ ಕೊಟ್ಟಿಗೆಯಿಂದ ಹೊರಬರುತ್ತಿದ್ದಂತೆ ಅವರಿಗೆ ಸಿಡಿಲು ಬಡಿದಿದೆ.

ಸ್ಥಳಕ್ಕೆ ಭೇಟಿನೀಡಿದ ತಹಸೀಲ್ದಾರ್ ಯು.ನಾಗರಾಜ ಪ್ರತಿಕ್ರಿಯಿಸಿ, ‘‘ಮತ ಬಾಲಕರ ಶವ ಪರೀಕ್ಷಾ ವರದಿ, ಠಾಣೆಯ ಪ್ರಥಮ ಮಾಹಿತಿ ವರದಿಯ ದಾಖಲೆ ಪಡೆಯಲಾಗುವುದು. ಸರಕಾರ ನಿಗದಿಪಡಿಸಿದ ಪರಿಹಾರ ಮೊತ್ತವನ್ನು ಮಂಜೂರು ಮಾಡಲಾಗುವುದು. ಕೂಡ್ಲಿಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಯಶೋಧಾಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ’’ ಎಂದರು. ಈ ಸಂದರ್ಭದಲ್ಲಿ ತಾ.ಪಂ.ಇಒ ಅನ್ನದಾನಯ್ಯಸ್ವಾಮಿ, ಪೊಲೀಸ್ ಸಿಬ್ಬಂದಿ, ಗ್ರಾಮದ ಮುಖಂಡರು ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ