ಆ್ಯಪ್ನಗರ

ಪೊಲೀಸರ ಅತಿಥಿಯಾದ ನಕಲಿ ಟ್ರಾಫಿಕ್ ಇನ್‌ಸ್ಪೆಕ್ಟರ್

ನಕಲಿ ದಾಖಲೆಗಳನ್ನು ತೋರಿಸಿ ತಾನು ಅಸಿಸ್ಟಂಟ್ ಟ್ರಾಫಿಕ್ ಇನ್‌ಸ್ಪೆಕ್ಟರ್ (ಎಟಿಐ)ಎಂದು ಇಲ್ಲಿನ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗದ ಸಿಬ್ಬಂದಿಗೆ ಯಾಮಾರಿಸಿದ್ದ ಯುವಕ, ಶುಕ್ರವಾರ, ಪೊಲೀಸರ ಅತಿಥಿಯಾಗಿದ್ದಾನೆ.

ವಿಕ ಸುದ್ದಿಲೋಕ 10 Jun 2017, 8:09 am
ಬಳ್ಳಾರಿ: ನಕಲಿ ದಾಖಲೆಗಳನ್ನು ತೋರಿಸಿ ತಾನು ಅಸಿಸ್ಟಂಟ್ ಟ್ರಾಫಿಕ್ ಇನ್‌ಸ್ಪೆಕ್ಟರ್ (ಎಟಿಐ)ಎಂದು ಇಲ್ಲಿನ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗದ ಸಿಬ್ಬಂದಿಗೆ ಯಾಮಾರಿಸಿದ್ದ ಯುವಕ, ಶುಕ್ರವಾರ, ಪೊಲೀಸರ ಅತಿಥಿಯಾಗಿದ್ದಾನೆ.
Vijaya Karnataka Web
ಪೊಲೀಸರ ಅತಿಥಿಯಾದ ನಕಲಿ ಟ್ರಾಫಿಕ್ ಇನ್‌ಸ್ಪೆಕ್ಟರ್


ಕೊಪ್ಪಳ ಜಿಲ್ಲೆ ಗಂಗಾವತಿಯ ಯುವಕ ಹುಲುಗಪ್ಪ (25)ಇಂತಹ ಅವಾಂತರ ಸೃಷ್ಟಿಸಿ ಸಿಕ್ಕಿ ಬಿದ್ದಿದ್ದಾನೆ. ಕೆಎಸ್‌ಆರ್‌ಟಿಸಿಯು 2016, ಜು.6ರಂದು ಎಟಿಐ ನೇಮಕಾತಿಗೆ ನೋಟಿಫಿಕೇಷನ್ ಹೊರಡಿಸಿದ್ದು, ಅದರಲ್ಲಿ ತನಗೆ ಎಟಿಐ ಆಗಿ ನೇಮಕಾತಿಯಾಗಿದೆ ಎಂದು ಕಲಬುರಗಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರ ಆದೇಶದ ಮಾದರಿಯ ಜೆರಾಕ್ಸ್ ಪ್ರತಿ ತೋರಿಸಿದ್ದ. ವಿಭಾಗೀಯ ನಿಯಂತ್ರಣಾಧಿಕಾರಿಗಳ ಪರಿಶೀಲನೆ, ವಿಚಾರಣೆ ನಂತರ ಈತ ನಕಲಿ ಎಂಬುದು ಬೆಳಕಿಗೆ ಬಂದಿದೆ.

ನಡೆದಿದ್ದು ಏನು?: ನಕಲಿ ದಾಖಲೆಗಳೊಂದಿಗೆ ಇಲ್ಲಿನ ಸಾರಿಗೆ ಕಚೇರಿಗೆ ಗುರುವಾರ ಆಗಮಿಸಿದ್ದ ಈ ಯುವಕ, ವಿಭಾಗೀಯ ನಿಯಂತ್ರಣಾಧಿಕಾರಿಗಳನ್ನು ಭೇಟಿಯಾಗದೇ ಕೆಳ ಹಂತದ ಸಿಬ್ಬಂದಿಯನ್ನು ಪರಿಚಯ ಮಾಡಿಕೊಂಡಿದ್ದ. ಕುಡತಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟ್ರಾಫಿಕ್ ಇನ್‌ಸ್ಪೆಕ್ಟರ್‌ಗೆ ಕರೆಮಾಡಿ ತಾನು ಹೊಸದಾಗಿ ಬಂದಿರುವ ಎಟಿಐ ಎಂದು ಹೇಳಿಕೊಂಡು ಅವರ ವಾಹನದಲ್ಲಿ ಅಲ್ಲಲ್ಲಿ ಸುತ್ತಾಡಿದ್ದಾನೆ. ಕೇಂದ್ರೀಯ ಕಚೇರಿಯ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಬಳ್ಳಾರಿಯಲ್ಲಿ ಸ್ಥಳನಿಯೋಜನೆಮಾಡಿ ಕಳುಹಿಸಿರುವ ಆದೇಶ ಹೋಲುವ ಪ್ರತಿ ಈ ಯುವಕನ ಬಳಿ ಇತ್ತು ಎನ್ನಲಾಗಿದೆ. ಮಾಹಿತಿ ತಿಳಿದ ವಿಭಾಗೀಯ ನಿಯಂತ್ರಣಾಧಿಕಾರಿ, ಕಲಬುರಗಿಯ ಕೇಂದ್ರೀಯ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಈ ಯುವಕನ ಬಳಿಯಿರುವ ದಾಖಲೆ ಹಾಗೂ ಪತ್ರಗಳು ನಕಲಿ ಎಂಬುದು ತಿಳಿದುಬಂದಿದೆ.

‘‘ಈ ಯುವಕನ ವಿರುದ್ಧ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯುವಕನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ’’ ಎಂದು ಸಾರಿಗೆ ಸಂಸ್ಥೆ ವಿಭಾಗೀಯ ಡಿಟಿಎಸ್ ಸೈಯದ್ ಗೌಸ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ