ಗಂಗಾವತಿ: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ಹಂಪಿ ಕನ್ನಡ ವಿವಿಯಲ್ಲಿ ಬುಧವಾರ ವಿದ್ಯಾರ್ಥಿ ಒಕ್ಕೂಟ ಹಾಗೂ ಅಧ್ಯಾಪಕರು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
‘‘ಪತ್ರಕರ್ತೆ ಗೌರಿ ಲಂಕೇಶ್ ಅವರು ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅವರೊಬ್ಬ ವಿಚಾರವಾದಿಯಾಗಿದ್ದರು. ಅವರನ್ನು ಹತ್ಯೆಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು’’ ಎಂದು ಆಗ್ರಹಿಸಿದರು. ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಎಸ್.ಘಂಟಿ, ಕುಲಸಚಿವ ಡಾ.ಡಿ.ಪಾಂಡುರಂಗಬಾಬು ಅವರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿಪತ್ರ ರವಾನಿಸಲಾಯಿತು. ಅಧ್ಯಾಪಕರಾದ ಡಾ.ರಹಮತ್ ತರೀಕೆರೆ, ಡಾ.ಪಿ.ಮಹಾದೇವಯ್ಯ, ಡಾ.ಚಿನ್ನಸ್ವಾಮಿ ಸೋಸಲೆ, ಡಾ.ಅಮರೇಶ ನುಗಡೋಣಿ, ಡಾ.ಶೈಲಜಾ ಪಾಟೀಲ್ ಇತರರಿದ್ದರು.
ಬಳ್ಳಾರಿ ವರದಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆವರಣದಿಂದ ಪ್ರತಿಭಟನೆ ಆರಂಭಿಸಲಾಯಿತು. ಗಡಿಗಿ ಚನ್ನಪ್ಪ ವತ್ತದ ರಸ್ತೆಯವರೆಗೆ ಪಾದಯಾತ್ರೆ ನಡೆಯಿತು. ಕಟ್ಟಡ ನಿರ್ಮಾಣ ಸಾಮಗ್ರಿ ತಯಾರಕರ ಕೈಗಾರಿಕೆ ಸಹಕಾರ ಸಂಘ, ಆಮ್ ಆದ್ಮಿ ಪಾರ್ಟಿ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಕರ್ನಾಟಕ ಏಕಲವ್ಯ ಪಡೆ, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಎಸ್ಎಫ್ಐ ಸೇರಿ ನಾನಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು. ಲೇಖಕಿ ಎನ್.ಡಿ.ವೆಂಕಮ್ಮ, ಎಂ.ಎಸ್.ಮಂಜುಳಾ, ಗಣಿ ಉದ್ಯಮಿ ಟಪಾಲ್ ಗಣೇಶ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧರಾಮ ಕಲ್ಮಠ, ರೈತ ಹೋರಾಟಗಾರ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಸೇರಿ ಇತರರಿದ್ದರು.
ಕೊಪ್ಪಳ ವರದಿ: ನಾನಾ ಪ್ರಗತಿಪರ ಸಂಘನಟೆಗಳ ನೇತೃತ್ವದಲ್ಲಿ ನಗರದ ಅಶೋಕ ವೃತ್ತ ಹಾಗೂ ಬಸವೇಶ್ವ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಸಿಪಿಐ (ಎಂಎಲ್)ಸಂಘಟನೆ ರಾಜ್ಯ ಮುಖಂಡರಾದ ಕೆ.ಬಿ.ಗೋನಾಳ, ಹನುಮಂತಪ್ಪ ಹೊಳೆಯಾಚೆ, ಇಸ್ಮಾಯಿಲ್ ನಾಲಗುಂದ, ಮೂಕಪ್ಪ ಮೇಸ್ತ್ರಿ, ದೇವೇಂದ್ರಪ್ಪ ದೊಡ್ಡಮನಿ, ವಿದ್ಯಾ ನಾಲವಾಡ, ಮಂಜುನಾಥ ಕಾಸನಕಡ್ಡಿ, ಸುಮಂಗಲಾ ಗಡಾದ್, ಈರಮ್ಮ ಗಡಾದ್, ಹನುಮೇಶ ಕಡ್ಲಿ, ಕೆಂಚನಗೌಡ ಪಾಟಿಲ್ ಇತರರಿದ್ದರು.
ರಾಯಚೂರು ವರದಿ: ನಗರದ ಕನ್ನಡ ಭವನದಿಂದ ಪ್ರಗತಿಪರ ಸಂಘಟನೆಗಳ ಪ್ರಮುಖರು, ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ರವಾನಿಸಿದರು. ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಅಂಬಣ್ಣ ಆರೋಲಿ, ಜೆ.ಬಿ.ರಾಜು, ಸೈಯದ್ ಹಫೀಜುಲ್ಲಾ, ಚನ್ನಬಸವ ಜಾನೇಕಲ್, ಡಾ.ವಿ.ಎ.ಮಾಲಿಪಾಟೀಲ್, ಜಾನ್ ವೆಸ್ಲಿ, ಡಿ.ಎಸ್.ಶರಣಬಸವ, ಪ್ರವೀಣ ರೆಡ್ಡಿ, ಭೀಮನಗೌಡ ಇಟಗಿ, ಮಹೇಶ್ ಚೀಕಲಪರ್ವಿ ಸೇರಿ ಇತರರಿದ್ದರು.
‘‘ಪತ್ರಕರ್ತೆ ಗೌರಿ ಲಂಕೇಶ್ ಅವರು ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅವರೊಬ್ಬ ವಿಚಾರವಾದಿಯಾಗಿದ್ದರು. ಅವರನ್ನು ಹತ್ಯೆಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು’’ ಎಂದು ಆಗ್ರಹಿಸಿದರು. ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾ ಎಸ್.ಘಂಟಿ, ಕುಲಸಚಿವ ಡಾ.ಡಿ.ಪಾಂಡುರಂಗಬಾಬು ಅವರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿಪತ್ರ ರವಾನಿಸಲಾಯಿತು. ಅಧ್ಯಾಪಕರಾದ ಡಾ.ರಹಮತ್ ತರೀಕೆರೆ, ಡಾ.ಪಿ.ಮಹಾದೇವಯ್ಯ, ಡಾ.ಚಿನ್ನಸ್ವಾಮಿ ಸೋಸಲೆ, ಡಾ.ಅಮರೇಶ ನುಗಡೋಣಿ, ಡಾ.ಶೈಲಜಾ ಪಾಟೀಲ್ ಇತರರಿದ್ದರು.
ಬಳ್ಳಾರಿ ವರದಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆವರಣದಿಂದ ಪ್ರತಿಭಟನೆ ಆರಂಭಿಸಲಾಯಿತು. ಗಡಿಗಿ ಚನ್ನಪ್ಪ ವತ್ತದ ರಸ್ತೆಯವರೆಗೆ ಪಾದಯಾತ್ರೆ ನಡೆಯಿತು. ಕಟ್ಟಡ ನಿರ್ಮಾಣ ಸಾಮಗ್ರಿ ತಯಾರಕರ ಕೈಗಾರಿಕೆ ಸಹಕಾರ ಸಂಘ, ಆಮ್ ಆದ್ಮಿ ಪಾರ್ಟಿ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ, ಕರ್ನಾಟಕ ಏಕಲವ್ಯ ಪಡೆ, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಎಸ್ಎಫ್ಐ ಸೇರಿ ನಾನಾ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು. ಲೇಖಕಿ ಎನ್.ಡಿ.ವೆಂಕಮ್ಮ, ಎಂ.ಎಸ್.ಮಂಜುಳಾ, ಗಣಿ ಉದ್ಯಮಿ ಟಪಾಲ್ ಗಣೇಶ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ಧರಾಮ ಕಲ್ಮಠ, ರೈತ ಹೋರಾಟಗಾರ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಸೇರಿ ಇತರರಿದ್ದರು.
ಕೊಪ್ಪಳ ವರದಿ: ನಾನಾ ಪ್ರಗತಿಪರ ಸಂಘನಟೆಗಳ ನೇತೃತ್ವದಲ್ಲಿ ನಗರದ ಅಶೋಕ ವೃತ್ತ ಹಾಗೂ ಬಸವೇಶ್ವ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಸಿಪಿಐ (ಎಂಎಲ್)ಸಂಘಟನೆ ರಾಜ್ಯ ಮುಖಂಡರಾದ ಕೆ.ಬಿ.ಗೋನಾಳ, ಹನುಮಂತಪ್ಪ ಹೊಳೆಯಾಚೆ, ಇಸ್ಮಾಯಿಲ್ ನಾಲಗುಂದ, ಮೂಕಪ್ಪ ಮೇಸ್ತ್ರಿ, ದೇವೇಂದ್ರಪ್ಪ ದೊಡ್ಡಮನಿ, ವಿದ್ಯಾ ನಾಲವಾಡ, ಮಂಜುನಾಥ ಕಾಸನಕಡ್ಡಿ, ಸುಮಂಗಲಾ ಗಡಾದ್, ಈರಮ್ಮ ಗಡಾದ್, ಹನುಮೇಶ ಕಡ್ಲಿ, ಕೆಂಚನಗೌಡ ಪಾಟಿಲ್ ಇತರರಿದ್ದರು.
ರಾಯಚೂರು ವರದಿ: ನಗರದ ಕನ್ನಡ ಭವನದಿಂದ ಪ್ರಗತಿಪರ ಸಂಘಟನೆಗಳ ಪ್ರಮುಖರು, ತೋಳಿಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ರವಾನಿಸಿದರು. ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಅಂಬಣ್ಣ ಆರೋಲಿ, ಜೆ.ಬಿ.ರಾಜು, ಸೈಯದ್ ಹಫೀಜುಲ್ಲಾ, ಚನ್ನಬಸವ ಜಾನೇಕಲ್, ಡಾ.ವಿ.ಎ.ಮಾಲಿಪಾಟೀಲ್, ಜಾನ್ ವೆಸ್ಲಿ, ಡಿ.ಎಸ್.ಶರಣಬಸವ, ಪ್ರವೀಣ ರೆಡ್ಡಿ, ಭೀಮನಗೌಡ ಇಟಗಿ, ಮಹೇಶ್ ಚೀಕಲಪರ್ವಿ ಸೇರಿ ಇತರರಿದ್ದರು.