ಆ್ಯಪ್ನಗರ

ಐಬಿಯಲ್ಲಿ ‘ಬಾವುಲಿ’ಭೀತಿ

ನೆರೆಯ ಕೇರಳದಿಂದ ರಾಜ್ಯಕ್ಕೂ ನಿಫಾ ಸೋಂಕು ಹರಡುವ ಭೀತಿ ನಗರದಲ್ಲೂ ಶುರುವಾಗಿದೆ. ಇಲ್ಲಿನ ಪ್ರವಾಸಿಮಂದಿರದಲ್ಲಿ ಹೆಚ್ಚಿರುವ ಬಾವಲಿಗಳ ಹಾವಳಿ ಕಾಯಿಲೆ ತರುವ ಆತಂಕ ಮೂಡಿದೆ.

Vijaya Karnataka 25 May 2018, 5:00 am
ಸಿರುಗುಪ್ಪ : ನೆರೆಯ ಕೇರಳದಿಂದ ರಾಜ್ಯಕ್ಕೂ ನಿಫಾ ಸೋಂಕು ಹರಡುವ ಭೀತಿ ನಗರದಲ್ಲೂ ಶುರುವಾಗಿದೆ. ಇಲ್ಲಿನ ಪ್ರವಾಸಿಮಂದಿರದಲ್ಲಿ ಹೆಚ್ಚಿರುವ ಬಾವಲಿಗಳ ಹಾವಳಿ ಕಾಯಿಲೆ ತರುವ ಆತಂಕ ಮೂಡಿದೆ.
Vijaya Karnataka Web BLR-BLY23SGP8


ನಗರದ ಹೃದಯ ಭಾಗವಾಗಿರುವ ಬಸ್‌ನಿಲ್ದಾಣ ಮುಂಭಾಗದ ಸರಕಾರಿ ಆತಿಥಿಗೃಹ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾವಲಿ ಕಂಡುಬಂದಿವೆ. ಬಾವಲಿಗಳು ಕಚ್ಚಿದ ಹಣ್ಣನ್ನು ತಿನ್ನುವುದರಿಂದ, ಅವು ವಿಸರ್ಜಿಸುವ ಮಲ, ಮೂತ್ರದಿಂದಾಗಿ ಸೋಂಕು ಹರಡುತ್ತದೆಂದು ಈಗಾಗಲೇ ಶಂಕಿಸಲಾಗಿದೆ. ಹಂದಿಗಳು ಇರುವ ಪ್ರದೇಶದಲ್ಲಿ ಕಾಯಿಲೆ ಕಂಡು ಬರುತ್ತದೆ ಎಂದು ವ್ಯಾಪಕ ಪ್ರಚಾರ ಮಾಡಲಾಗಿದೆ. ಸಹಜವಾಗಿಯೇ ಈ ಎರಡು ಕಾರಣಕ್ಕೆ ಜನ ನಿಫಾ ಭೀತಿ ಎದುರಿಸುತ್ತಿದ್ದಾರೆ. ಕಾಯಿಲೆಗೆ ಸೂಕ್ತ ಔಷಧ ಇಲ್ಲವೆಂಬ ಮಾಹಿತಿ ಹಬ್ಬಿದೆ.

ಬಾವಲಿ: ನಗರದ ಲೋಕೋಪಯೋಗಿ ಇಲಾಖೆ ಅಧೀನದಲ್ಲಿನ ಐಬಿಯಲ್ಲಿ ಹೆಚ್ಚಿನ ಮರಗಳಿವೆ. ಇದೇ ಗಿಡಗಳಲ್ಲಿ ಬಾವಲಿಗಳು ವಾಸವಾಗಿವೆ. ಪ್ರವಾಸಿ ಮಂದಿರ ಜನವಸತಿ ಪ್ರದೇಶದಲ್ಲಿರುವುದರಿಂದ ಬಾವಲಿ ಓಡಿಸಬೇಕು. ಕೂಡಲೇ ತಾಲೂಕು ವೈಧ್ಯಾಧಿಕಾರಿಗಳು ಬಾವಲಿಗಳ ಮಲದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದು ಇಲ್ಲಿನವರು ಒತ್ತಾಯಿಸಿದ್ದಾರೆ. ಈ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ.ಸುರೇಶ ಗೌಡ ಮಾತನಾಡಿ, ಸ್ಥಳೀಯವಾಗಿರುವ ಬಾವಲಿಗಳಿಂದ ತೊಂದರೆಯಿಲ್ಲ. ಆದರೆ, ಬಾವಲಿಗಳು ತಿನ್ನುವ ಹಣ್ಣುಗಳನ್ನು ಬಳಕೆ ಮಾಡದಿರುವುದು, ಹಂದಿಗಳಿಂದ ಅಂತರ ಕಾಯ್ದುಕೊಳ್ಳುವುದು ಮುಂಜಾಗ್ರತೆಯಾಗುತ್ತದೆ ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ