ಆ್ಯಪ್ನಗರ

ಮಳೆಗಾಗಿ ತೊನ್ನಿನ ಶವ ತೆಗೆದು ಸುಟ್ಟರು

ಮಳೆ ಬಾರದೇ ಕಂಗೆಟ್ಟಿರುವ ರೈತರು ವರುಣನ ಕೃಪೆಗಾಗಿ ಪಟ್ಟಣದ ರುದ್ರಭೂಮಿಯಲ್ಲಿ ಭಾನುವಾರ ತೊನ್ನಿನ ಶವ ಹೊರ ತೆಗೆದು ಸುಟ್ಟರು.

Vijaya Karnataka 14 Aug 2018, 12:00 am
ಕೊಟ್ಟೂರು: ಮಳೆ ಬಾರದೇ ಕಂಗೆಟ್ಟಿರುವ ರೈತರು ವರುಣನ ಕೃಪೆಗಾಗಿ ಪಟ್ಟಣದ ರುದ್ರಭೂಮಿಯಲ್ಲಿ ಭಾನುವಾರ ತೊನ್ನಿನ ಶವ ಹೊರ ತೆಗೆದು ಸುಟ್ಟರು.
Vijaya Karnataka Web BLR-BLY13KTR3


ತೊನ್ನಿನ ಶವ ಹೂತಿಟ್ಟಾಗ ಅದು ಕೊಳೆಯದೇ ಬಾಯಿ ತೆಗೆದುಕೊಂಡು ಉಳಿಯುವುದರಿಂದ ಮಳೆಯಾಗಲ್ಲ ಎನ್ನುವ ನಂಬಿಕೆ ಹಿನ್ನೆಲೆಯಲ್ಲಿ ರೈತರು ತೊನ್ನಿನ ಶವ ಹುಡುಕಿ ಹೊರತೆಗೆದು ಸುಟ್ಟರು. ಆರಂಭದಲ್ಲಿ ನಿರೀಕ್ಷೆ ಮೂಡಿಸಿದ್ದ ಮುಂಗಾರು ಈಗಾಗಲೇ ಸಂಪೂರ್ಣ ಕೈ ಕೊಟ್ಟಿದೆ. ಮಳೆಯಿಲ್ಲದೇ ಬೆಳೆ ಬಾಡುತ್ತಿವೆ. ಆರಂಭದಲ್ಲಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ಹಲವು ರೀತಿಯ ಧಾರ್ಮಿಕ ಆಚರಣೆ ಕೈಗೊಂಡಿದ್ದರು. ಆದರೂ, ಮಳೆಯಾಗಿಲ್ಲ. ಬಿತ್ತನೆಯಾದ ಬೆಳೆ ಬಾಡುತ್ತಿರುವುದನ್ನು ನೋಡಿ ಬೇಸತ್ತ ರೈತರು, ತೊನ್ನಿನ ಶವ ಕೊಳೆಯದೇ ಮಳೆ ಮುನಿಸು ಉಂಟಾಗಿದೆಯೆಂಬ ಮಾತು ಕೇಳಿ ಶವ ಸುಡುವ ಆಚರಣೆಗೆ ಮುಂದಾದರು. ರೈತರಾದ ಬಂದಾತರ ವೀರಣ್ಣ, ಮರಬದ ಗುರುಪಾದಪ್ಪ, ಲೋಕಪ್ಪ, ದೇವಪ್ಪ, ಕೊಟ್ರಪ್ಪ, ರಾಜಾಗೌಡ ಸೇರಿದಂತೆ ಅನೇಕರು ವೀರಶೈವ ರುದ್ರಭೂಮಿಯಲ್ಲಿ ತೊನ್ನಿನ ಶವಕ್ಕಾಗಿ ಕುಣಿ ಅಗೆದರು. ಒಂದು ಶವ ಸಿಗುತ್ತಿದ್ದಂತೆ ಅದನ್ನು ಹೊರತೆಗೆದು ಸುಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ