Please enable javascript.ಅಪೌಷ್ಟಿಕತೆ ನಿರ್ಮೂಲನೆಗೆ ಕಾರ್ಯಾಗಾರ - ಅಪೌಷ್ಟಿಕತೆ ನಿರ್ಮೂಲನೆಗೆ ಕಾರ್ಯಾಗಾರ - Vijay Karnataka

ಅಪೌಷ್ಟಿಕತೆ ನಿರ್ಮೂಲನೆಗೆ ಕಾರ್ಯಾಗಾರ

Vijaya Karnataka Web 7 Jun 2014, 7:00 am
Subscribe

ತಾಲೂಕಿನ ತೋರಣಗಲ್ಲುನ ಒಪಿಜೆ ಸಭಾಂಗಣದಲ್ಲಿ ಜೆಎಸ್‌ಡಬ್ಲ್ಯುಫೌಂಡೇಶನ್, ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ ಬಳ್ಳಾರಿ ಇವರ ಸಹಯೋಗದಲ್ಲಿ ಅಂಗನವಾಡಿ, ಸ್ವ ಸಹಾಯ, ಸ್ತ್ರೀ ಶಕ್ತಿ ಗುಂಪು, ಹಾಗೂ ಆಶಾ ಕಾರ್ಯಕರ್ತೆಯರಿಗಾಗಿ, ಅಪೌಷ್ಟಿಕತೆ ನಿರ್ಮೂಲನೆ ಕುರಿತ ತರಬೇತಿ, ಸಂವಹನ ಕಾರ್ಯಾಗಾರ ಗುರುವಾರ ನಡೆಯಿತು.

ಅಪೌಷ್ಟಿಕತೆ ನಿರ್ಮೂಲನೆಗೆ ಕಾರ್ಯಾಗಾರ
ಸಂಡೂರು: ತಾಲೂಕಿನ ತೋರಣಗಲ್ಲುನ ಒಪಿಜೆ ಸಭಾಂಗಣದಲ್ಲಿ ಜೆಎಸ್‌ಡಬ್ಲ್ಯುಫೌಂಡೇಶನ್, ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಇಲಾಖೆ ಬಳ್ಳಾರಿ ಇವರ ಸಹಯೋಗದಲ್ಲಿ ಅಂಗನವಾಡಿ, ಸ್ವ ಸಹಾಯ, ಸ್ತ್ರೀ ಶಕ್ತಿ ಗುಂಪು, ಹಾಗೂ ಆಶಾ ಕಾರ್ಯಕರ್ತೆಯರಿಗಾಗಿ, ಅಪೌಷ್ಟಿಕತೆ ನಿರ್ಮೂಲನೆ ಕುರಿತ ತರಬೇತಿ, ಸಂವಹನ ಕಾರ್ಯಾಗಾರ ಗುರುವಾರ ನಡೆಯಿತು.

ಜಿ.ಪಂ.ಸಿಇಒ ಸಲಾವುದ್ದೀನ್ ಕಾರ್ಯಕ್ರಮ ಉದ್ಘಾಟಿಸಿ, ಅಪೌಷ್ಟಿಕತೆ ನಿರ್ಮೂಲನೆಗಾಗಿ ಸರಕಾರ ನಾನಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲೆಯ 2.5 ಲಕ್ಷ ಮಕ್ಕಳಲ್ಲಿ 2, 570 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರೆನ್ನೆಲ್ಲ ಸದೃಢಗೊಳಿಸಬೇಕಿದೆ. ಇದಕ್ಕಾಗಿ ಜೆಎಸ್‌ಡಬ್ಲ್ಯು ಸಂಸ್ಥೆ ಕೈ ಜೋಡಿದ್ದು, ಅರ್ಹರಿಗೆ ಇದರ ಪ್ರಯೋಜನ ಸಿಗಲಿ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಾಬು ಕಲಾದಗಿ ಮಾತನಾಡಿ, ಅಪೌಷ್ಟಿಕತೆಯು ಒಂದು ಸಾಮಾಜಿಕ ಪಿಡುಗಿನಂತೆ ಕಾಡುತ್ತಿದ್ದು, ಅದರ ನಿರ್ಮೂಲನೆಗೆ ತಾಲೂಕಿನಲ್ಲಿ 78 ಅಂಗನವಾಡಿ ಕೇಂದ್ರಗಳು ಕೆಲಸ ನಿರ್ವಹಿಸುತ್ತಿವೆ ಎಂದರು.

ಜೆಎಎಸ್‌ಡಬ್ಲ್ಯುಪೌಂಡೇಶನ್ ಸಿಇಒ ಡಾ.ಸಿ.ಎಸ್.ಕೇದಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜ್ಞಾನ, ಆರೋಗ್ಯ, ಶುಚಿತ್ವ, ಪರಿಸರ ಕಾಳಜಿ, ನೈರ್ಮಲ್ಯ ಕುರಿತು ತಿಳಿವಳಿಕೆ ಕೊರತೆ ಹೆಚ್ಚಿದೆ. ಜನರಲ್ಲಿ ತಿಳಿವಳಿಕೆ ಹೆಚ್ಚಿ, ಜನಾಂದೋಲನ ರೀತಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಆಗ ಮಾತ್ರ, ಅಪೌಷ್ಟಿಕತೆ ನಿವಾರಣೆ ಸಾಧ್ಯ. ಗರ್ಭಿಣಿಯರಿಗಾಗಿ ಸಂಸ್ಥೆಯಿಂದ ‘ಗರ್ಭಿಣಿಯ ಗೆಳತಿ’ ಹೆಸರಿನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು.

ಜಿಲ್ಲಾ ವೈದ್ಯಾಧಿಕಾರಿ ಡಾ.ಮಾಧವರಾವ್ ಪಾಟೀಲ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿವತ್ತರಾದ ಸಿಡಿಪಿಒ ಮಂಜಿನಾಥ ಸ್ವಾಮಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಫೌಂಡೇಶನ್ ಅದ್ಯಕ್ಷೆ ಸಂಗೀತಾ ಜಿಂದಾಲ್, ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಮಂಜುನಾಥಪ್ರಭು, ಟಿ.ಎಸ್.ಗೌಡ, ರಾಜೀವ ಗಾಂಧಿ ತಾಂತ್ರಿಕ ಶಿಕ್ಷಣ ಸಂಸ್ಥೆಯ ಡಾ. ಶರಣಪ್ರಭು, ಬಾಲು, ಮಹೇಶ, ತಾಲೂಕಿನ ಅಂಗನವಾಡಿ, ಸ್ವ ಸಹಾಯ, ಸ್ತ್ರೀ ಶಕ್ತಿ ಗುಂಪು ಹಾಗೂ ಆಶಾ ಕಾರ್ಯಕರ್ತೆಯರು ಇತರರಿದ್ದರು. ಜೆಎಸ್‌ಡಬ್ಲ್ಯು ಎನರ್ಜಿ ಉಪಾಧ್ಯಕ್ಷ ಸುರೇಶ ಜಗತಾಪ, ಶ್ರೀಕಷ್ಣ ಕುಲಕರ್ಣಿ, ಡಾ.ಶ್ರೀಧರ ರೆಡ್ಡಿ ನಿರ್ವಹಿಸಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ