Please enable javascript.ವಿದ್ಯಾರ್ಥಿಗಳಿಗೆ ಭಾಷಾಭಿಮಾನ ಅಗತ್ಯ - ವಿದ್ಯಾರ್ಥಿಗಳಿಗೆ ಭಾಷಾಭಿಮಾನ ಅಗತ್ಯ - Vijay Karnataka

ವಿದ್ಯಾರ್ಥಿಗಳಿಗೆ ಭಾಷಾಭಿಮಾನ ಅಗತ್ಯ

ವಿಕ ಸುದ್ದಿಲೋಕ 22 Nov 2014, 6:08 am
Subscribe

ಇಂದಿನ ವಿದ್ಯಾರ್ಥಿಗಳು ಮತ್ತು ಯುವ ಜನರಿಗೆ ಮಾತ ಭಾಷಾಭಿಮಾನದ ಅಗತ್ಯವಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಐಗೋಳ ಚಿದಾನಂದ ಹೇಳಿದರು. ಪಟ್ಟಣದ ಕಾರ್ಮೆಲ್ ಜ್ಯೋತಿ ಎನ್‌ಜಿಓದಲ್ಲಿ ಕಸಾಪ ಶತಮಾನೋತ್ಸವ ನಿಮಿತ್ತ ತಾಲೂಕು ಕಸಾಪ ಏರ್ಪಡಿಸಿದ್ದ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ 10ನೇ ತರಗತಿ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಕನ್ನಡ ಕುವರ ಮತ್ತು ಕುವರಿ ಪ್ರಶಸ್ತಿ ಪ್ರದಾನ ಮಾಡಿ ಶುಕ್ರವಾರ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಭಾಷಾಭಿಮಾನ ಅಗತ್ಯ
ಹೂವಿನಹಡಗಲಿ; ಇಂದಿನ ವಿದ್ಯಾರ್ಥಿಗಳು ಮತ್ತು ಯುವ ಜನರಿಗೆ ಮಾತ ಭಾಷಾಭಿಮಾನದ ಅಗತ್ಯವಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಐಗೋಳ ಚಿದಾನಂದ ಹೇಳಿದರು.

ಪಟ್ಟಣದ ಕಾರ್ಮೆಲ್ ಜ್ಯೋತಿ ಎನ್‌ಜಿಓದಲ್ಲಿ ಕಸಾಪ ಶತಮಾನೋತ್ಸವ ನಿಮಿತ್ತ ತಾಲೂಕು ಕಸಾಪ ಏರ್ಪಡಿಸಿದ್ದ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ 10ನೇ ತರಗತಿ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಕನ್ನಡ ಕುವರ ಮತ್ತು ಕುವರಿ ಪ್ರಶಸ್ತಿ ಪ್ರದಾನ ಮಾಡಿ ಶುಕ್ರವಾರ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಆಂಗ್ಲ ಭಾಷೆ ವ್ಯಾಮೋಹ ಹೆಚ್ಚಾಗುತ್ತಿದೆ. ಉನ್ನತ ವ್ಯಾಸಂಗಕ್ಕೆ ಕೇವಲ ಆಂಗ್ಲ ಭಾಷೆ ಸಾಲದು.ಜತೆಗೆ ಮಾತ ಭಾಷೆಯ ಅಗತ್ಯವಿದೆ. ಕನ್ನಡ ಶ್ರೀಮಂತವಾಗಿ ರುವುದರಿಂದ ಅತಿಹೆಚ್ಚು ಜ್ಞಾನಪೀಠ ಪ್ರಶಸ್ತಿ ಸಿಕ್ಕಿವೆ ಎಂದರು.

ಬಿಇಒ ಕೊಟ್ರೇಶ್ ಮಾತನಾಡಿ, ಭಾಷೆಯಲ್ಲಿ ಪ್ರಭುತ್ವ ಹೊಂದಿದಾಗ ಮಾತ್ರ ಸಾಧನೆ ಸಾಧ್ಯ ಎಂದರು. ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಯ್ಯನಗೌಡರ ಕೊಟ್ರಗೌಡ ಮಾತನಾಡಿ, ಪ್ರತಿಭೆಗಳನ್ನು ಗುರುತಿಸುತ್ತಿರುವ ಕಸಾಪಕ್ಕೆ ಹೆಚ್ಚು ಉತ್ತೇಜನ ಸಿಗಬೇಕಿದೆ ಎಂದರು. ಪುರಸಭೆ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ ಮಾತನಾಡಿದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ