ಆ್ಯಪ್ನಗರ

ಸಿಡಿಲುಬಡಿದು 162 ಕುರಿಸಾವು, ಕುರಿಗಾಹಿಗೆ

ತಾಲೂಕಿನ ನಾನಾ ಗ್ರಾಮಗಳಲ್ಲಿ ಶುಕ್ರವಾರ ಸಿಡಿಲು ಬಡಿದು 162 ಕುರಿ, ಒಂದು ಎಮ್ಮೆ ಮತಪಟ್ಟಿದ್ದು, ಕುರಿಗಾಹಿಯೊಬ್ಬ ತೀವ್ರವಾಗಿ ಗಾಯಗೊಂಡಿದ್ದಾರೆ.

Vijaya Karnataka 29 Sep 2018, 12:00 am
ಹಗರಿಬೊಮ್ಮನಹಳ್ಳಿ: ತಾಲೂಕಿನ ನಾನಾ ಗ್ರಾಮಗಳಲ್ಲಿ ಶುಕ್ರವಾರ ಸಿಡಿಲು ಬಡಿದು 162 ಕುರಿ, ಒಂದು ಎಮ್ಮೆ ಮತಪಟ್ಟಿದ್ದು, ಕುರಿಗಾಹಿಯೊಬ್ಬ ತೀವ್ರವಾಗಿ ಗಾಯಗೊಂಡಿದ್ದಾರೆ.
Vijaya Karnataka Web BLR-BLY28HBH2


ಯಡ್ರಮ್ಮನಹಳ್ಳಿ ಗ್ರಾಮದಲ್ಲಿ ಹನುಮಂತಪ್ಪ, ಹರಿಶ್ಚಂದ್ರಪ್ಪ, ಸಾಕಪ್ಪ, ದೊಡ್ಡ ಹನುಮಂತಪ್ಪ, ಶಂಕರಪ್ಪ ಸೇರಿದಂತೆ ಒಟ್ಟು 12 ಕುರಿಸಾಕಣೆದಾರರಿಗೆ ಸೇರಿದ 102 ಕುರಿಗಳು ಸಿಡಿಲಿನ ಹೊಡೆತಕ್ಕೆ ಬಲಿಯಾಗಿವೆ. ಬ್ಯಾಸಿಗೆದೇರಿ ಗ್ರಾಮದ 6 ಕುರಿಸಾಕಣೆದಾರರ 60 ಕುರಿಗಳು ಮತಪಟ್ಟಿವೆ. ತಾಲೂಕಿನ ನಂದಿಪುರ ಗ್ರಾಮದಲ್ಲಿ ಆರ್.ಯಂಕರೆಡ್ಡಿ ಅವರಿಗೆ ಸೇರಿದ ಎಮ್ಮೆಯೊಂದು ಮತಪಟ್ಟಿದೆ. ಯಡ್ರಮ್ಮನಹಳ್ಳಿ ಬಳಿ ಸಿಡಿಲು ಬಡಿದು ಕುರಿಗಾಹಿ ಜಿ.ತಿಂದಪ್ಪ ತೀವ್ರವಾಗಿ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದೆ. ಕೇವಲ 10 ನಿಮಿಷದ ಗುಡುಗು ಮತ್ತು ಸಿಡಿಲಿನ ಅಬ್ಬರಕ್ಕೆ 15ಲಕ್ಷ ರೂ.ಗೂ ಹೆಚ್ಚು ಮೊತ್ತದ ನಷ್ಟ ಅಂದಾಜಿಸಲಾಗಿದೆ.

ಪರಿಹಾರ; ಸ್ಥಳಕ್ಕೆ ಶಾಸಕ ಭೀಮನಾಯ್ಕ ಭೇಟಿ ನೀಡಿ, ಕುರಿಗಾಹಿಗಳಿಗೆ ಸಾಂತ್ವನ ಹೇಳಿದರು. ಕುರಿ ಮತ್ತು ಉಣ್ಣೆ ನಿಗಮ ಮಂಡಳಿಯಿಂದ ಕುರಿ ಸಾಕಣೆದಾರರಿಗೆ ಪರಿಹಾರ ಒದಗಿಸಲಾಗುವುದು ಎಂದರು. ಸಾವಿಗೀಡಾದ ಪ್ರತಿ ಕುರಿಗಳಿಗೆ ತಲಾ ಸಾವಿರ ರೂ.ನಂತೆ ಒಟ್ಟು 1.5 ಲಕ್ಷ ರೂ.ವೈಯಕ್ತಿಕ ಪರಿಹಾರ ನೀಡುವುದಾಗಿ ತಿಳಿಸಿದರು. ಗಾಯಗೊಂಡ ಕುಟುಂಬದವರಿಗೆ 20 ಸಾವಿರ ರೂ.ವೈಯಕ್ತಿಕ ಪರಿಹಾರ ಇದೇ ವೇಳೆ ನೀಡಿದರು. ಸ್ಥಳಕ್ಕೆ ತಹಸೀಲ್ದಾರ್ ವಿಜಯಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ