ಆ್ಯಪ್ನಗರ

ಶಿಕ್ಷಕ ದಂಪತಿಯ ಪುತ್ರನಿಗೆ 173ನೇ ರ‌್ಯಾಂಕ್

ತಾಲೂಕಿನ ಚಿಕ್ಕಜೋಗಿಹಳ್ಳಿತಾಂಡಾದ ಶಿಕ್ಷಕ ದಂಪತಿಯ ಪುತ್ರ ಕೆ.ಜಿ.ಪ್ರವೀಣ್‌ಕುಮಾರ್, ಯುಪಿಎಸ್‌ಸಿ ಪರೀಕ್ಷೆಯಲ್ಲಿ 173ನೇ ರ‌್ಯಾಂಕ್ ಪಡೆದು ಗಮನಸೆಳೆದಿದ್ದಾರೆ.

ವಿಕ ಸುದ್ದಿಲೋಕ 2 Jun 2017, 8:30 am
ಕಾನಾಹೊಸಹಳ್ಳಿ/ಕೂಡ್ಲಿಗಿ: ತಾಲೂಕಿನ ಚಿಕ್ಕಜೋಗಿಹಳ್ಳಿತಾಂಡಾದ ಶಿಕ್ಷಕ ದಂಪತಿಯ ಪುತ್ರ ಕೆ.ಜಿ.ಪ್ರವೀಣ್‌ಕುಮಾರ್, ಯುಪಿಎಸ್‌ಸಿ ಪರೀಕ್ಷೆಯಲ್ಲಿ 173ನೇ ರ‌್ಯಾಂಕ್ ಪಡೆದು ಗಮನಸೆಳೆದಿದ್ದಾರೆ.
Vijaya Karnataka Web  173
ಶಿಕ್ಷಕ ದಂಪತಿಯ ಪುತ್ರನಿಗೆ 173ನೇ ರ‌್ಯಾಂಕ್


ಈ ಸಾಧನೆಯನ್ನು ಅವರು ಎರಡನೇ ಪ್ರಯತ್ನದಲ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಶಿಕ್ಷಕ ದಂಪತಿ ಜಗನ್ನಾಥ ಹಾಗೂ ರೇಣುಕಾಬಾಯಿ ಅವರ ಮೂವರು ಮಕ್ಕಳಲ್ಲಿ ಕೆ.ಜಿ.ಪ್ರವೀಣ್‌ಕುಮಾರ್ ಮೂರನೇಯವರು. ತಂದೆ ತಾಯಿ ಇಬ್ಬರೂ ದಾವಣಗೆರೆ ಜಿಲ್ಲೆ ಹರಪನಹಳ್ಳಿಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಸೋದರ ಚಂಡೀಗಢದಲ್ಲಿ ವೈದ್ಯರಾಗಿದ್ದರೆ, ಮತ್ತೊಬ್ಬ ಸೋದರ ತುಮಕೂರಿನ ಕರ್ನಾಟಕ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ತಾಂಡಾದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಶಿಕ್ಷಣ ಆರಂಭಿಸಿದ ಪ್ರವೀಣ್‌ಕುಮಾರ್, ಚಿಕ್ಕಜೋಗಿಹಳ್ಳಿ ನವೋದಯ ಶಾಲೆಯಲ್ಲಿ 6ರಿಂದ 10ನೇ ತರಗತಿ, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ, ಆರ್‌ವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದರು. ಮೈಸೂರಿನ ‘ಎಲ್ ಆ್ಯಂಡ್ ಟಿ’ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಐಎಎಸ್ ಮಾಡಬೇಕೆಂಬ ಕನಸಿಗೆ ಉದ್ಯೋಗ ಅಡ್ಡಿಯಾದಾಗ ಅದಕ್ಕೆ ರಾಜೀನಾಮೆ ನೀಡಿದರು. ಮನೆಯಲ್ಲೇ ಹಗಲಿರಳು ಕಠಿಣ ಅಭ್ಯಾಸ ನಡೆಸಿದರು. ಅದರ ಫಲವಾಗಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 173ನೇ ರ‌್ಯಾಂಕ್ ಪಡೆದಿದ್ದಾರೆ.

..................
ನಮ್ಮ ಮಗ ಐಎಎಸ್ ಪಾಸ್ ಆಗಿದ್ದು ಅಪಾರ ಸಂತೋಷ ತಂದಿದೆ. ಈತ ಚಿಕ್ಕವನಿದ್ದಾಗಿನಿಂದಲೂ ಪ್ರತಿಭಾವಂತ. ಐಎಎಸ್ ಮಾಡಲೇಬೇಕೆಂಬ ಛಲಹೊಂದಿದ್ದ. ಈಗ ಅದು ಈಡೇರಿದೆ.

-ಜಗನ್ನಾಥ, ರೇಣುಕಾಬಾಯಿ, ತಂದೆ ತಾಯಿ, ಚಿಕ್ಕಜೋಗಿಹಳ್ಳಿ ತಾಂಡಾ (ಹರಪನಹಳ್ಳಿ)
...............

ಕೆಎಎಸ್ ಪಾಸಾಗಿ ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದೆ. ಈಗ ಐಎಎಸ್ ಪಾಸುಮಾಡಿದ್ದು ಅತೀವ ಸಂತೋಷ ತಂದಿದೆ. ಇದಕ್ಕೆ ನನ್ನ ತಂದೆ ತಾಯಿ, ಸಹೋದರರ ಸಹಕಾರ ಮರೆಯುವಂತಿಲ್ಲ.

-ಕೆ.ಜೆ.ಪ್ರವೀಣ್‌ಕುಮಾರ್, ಯುಪಿಎಸ್‌ಸಿಯಲ್ಲಿ 173ನೇ ರ‌್ಯಾಂಕ್ ಪಡೆದ ಸಾಧಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ