ಆ್ಯಪ್ನಗರ

ಹುಟ್ಟೂರು ಸೇರಲು ನಡೆದೂ ನಡೆದೂ ಕಣ್ಣು ಮುಚ್ಚಿದ ಜೀವಕ್ಕೆ ಕಣ್ಣೀರಿಟ್ಟ ನಾಡು, ಪರಿಹಾರಕ್ಕೆ ಸಿಎಂ ಅಭಯ

ಲಾಕ್‌ಡೌನ್‌ನ ಪರಿಣಾಮದ ಬಗ್ಗೆ, ಸರಕಾರದ ವ್ಯವಸ್ಥೆಯ ಬಗ್ಗೆ ಪ್ರಶ್ನಿಸುವಂತೆ ಮಾಡಿದ್ದ ಸಿಂಧನೂರಿನ ಗಂಗಮ್ಮ ಅವರ ಸಾವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

Vijaya Karnataka Web 8 Apr 2020, 8:45 am
ಬಳ್ಳಾರಿ: ಬೆಂಗಳೂರಿನಿಂದ ರಾಯಚೂರು ಜಿಲ್ಲೆಯ ಸಿಂಧನೂರಿಗೆ ಬರುವಾಗ ಮೂರು ದಿನ ಉಪವಾಸವಿದ್ದು, ನಂತರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಗಂಗಮ್ಮ ಅವರ ಸಾವಿಗೆ ಇಡೀ ನಾಡು ಕಂಬನಿ ಮಿಡಿದಿದೆ. ‘ವಿಜಯ ಕರ್ನಾಟಕ’ ಏ.7ರಂದು ಪ್ರಕಟಿಸಿದ ‘ಲಾಕ್‌ಡೌನ್‌: ಬೆಂಗ್ಳೂರಿಂದ ಸಿಂಧನೂರಿಗೆ ನಡೆದೂ ನಡೆದೂ ಕಣ್ಣುಮುಚ್ಚಿದ 29 ವರ್ಷದ ಗಂಗಮ್ಮ!’ ಎನ್ನುವ ವರದಿಯನ್ನು ಸಾವಿರಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ.
Vijaya Karnataka Web Gangamma Sindhanur


ಮೃತ ಕೂಲಿಕಾರ ಮಹಿಳೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ರಾಜ್ಯದಲ್ಲಿ ಇಂತಹ ಅಮಾನವೀಯ ಘಟನೆಗಳು ಮರುಕಳಿಸಿದಂತೆ ಎಚ್ಚರಿಕೆವಹಿಸಬೇಕು ಎಂದು ನಾಡಿನ ಜನಮಾನಸ ಒತ್ತಾಯಿಸಿದೆ. ಈ ಮಧ್ಯೆ ಮೃತಳ ಮನೆಗೆ ಭೇಟಿ ನೀಡಿದ್ದ ರಾಯಚೂರು ಜಿಲ್ಲಾಧಿಕಾರಿಗಳು ಘಟನೆ ಕುರಿತು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.

‘‘ಆಹಾರವಿಲ್ಲದೇ ಸಿಂಧನೂರಿನ ಕೂಲಿಕಾರ ಮಹಿಳೆ ಗಂಗಮ್ಮ ಮೃತಪಟ್ಟಿರುವ ವಿಷಯ ಕುರಿತು ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸೂಚ್ಯವಾಗಿ ತಿಳಿಸಿರುವೆ. ಈ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ನಮಗೆ ಬೇಕಿಲ್ಲ’’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಬೆಂಗಳೂರಿನಲ್ಲಿ ಹೇಳಿದ್ದಾರೆ.

ಆಸ್ಪತ್ರೆ ಸುಧಾರಣೆ ಸೇರಿ ತುರ್ತು ಆದ್ಯತಾ ಕಾಮಗಾರಿಗಳಿಗಷ್ಟೇ ಆದ್ಯತೆ: ಸಿಎಂ ಬಿಎಸ್‌ವೈ

ಸರಕಾರದ್ದೇ ತಪ್ಪು ಎಂದರು ಎಚ್‌ಡಿಕೆ
ಮತ್ತೊಂದೆಡೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ‘ವಿಜಯ ಕರ್ನಾಟಕ’ದ ವರದಿಯ ಪ್ರತಿ ಜತೆಗೆ ಸುದೀರ್ಘವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ‘‘ಗಂಗಮ್ಮಳ ಸಾವು ನನಗೆ ತೀವ್ರ ನೋವನ್ನು ತಂದಿದೆ. ಆಕೆಯ ಸಾವು ವಲಸೆ ಕಾರ್ಮಿಕರು, ಕೂಲಿಕಾರ್ಮಿಕರ ನರಕದ ಜೀವನವನ್ನು ಅನಾವರಣ ಮಾಡಿದೆ. ಲಾಕ್‌ಡೌನ್‌ನ ಭಯಾನಕತೆಯನ್ನು ಸಾಕ್ಷೀಕರಿಸಿದೆ. ಈ ಪ್ರಕರಣದಲ್ಲಿ ಕೂಲಿನೀಡದ ಗುತ್ತಿಗೆದಾರರೊಬ್ಬರದ್ದೇ ತಪ್ಪಿಲ್ಲ. ಸರಕಾರದ್ದೂ ತಪ್ಪಿದೆ. ಕಾರ್ಮಿಕ ಇಲಾಖೆಯಲ್ಲಿ 8 ಸಾವಿರ ಕೋಟಿ ರೂ. ಅನುದಾನವಿದೆ. ಆದರೆ, ಇಂಥವರಿಗೆ ವಿನಿಯೋಗವಾಗುತ್ತಿಲ್ಲ ವೇಕೆ?’’ ಎಂದು ಪ್ರಶ್ನಿಸಿದ್ದಾರೆ.


ಮಾನವ ಹಕ್ಕು ಆಯೋಗಕ್ಕೆ ದೂರು ಬೆಂಗಳೂರಿನ ಹ್ಯೂಮನ್ ರೈಟ್ಸ್‌ ಡಿಫೆಂಡರ್ಸ್‌ ಫೋರಂ ವತಿಯಿಂದ ಮಹಿಳೆ ಸಾವಿನ ಸಂಬಂಧ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಮಂಗಳವಾರ ದೂರು ಸಲ್ಲಿಸಲಾಗಿದೆ.

ಬಜೆಟ್‌ ಲೆಕ್ಕಾಚಾರ ತಪ್ಪಿಸಿದ ಕೊರೊನಾ: ಆರ್ಥಿಕತೆ ಸವಾಲು, ರಾಜ್ಯದ ಮುಂಗಡಪತ್ರ ಬುಡಮೇಲು

ಮೃತಳ ಕುಟಂಬಕ್ಕೆ ಪರಿಹಾರ: ಸಿಎಂ ಅಭಯ
‘ಮಾರ್ಗ ಮಧ್ಯದಲ್ಲಿ ಗಂಗಮ್ಮ ಅಸುನೀಗಿರುವುದು ಅತ್ಯಂತ ದುರದೃಷ್ಟಕರ ಹಾಗೂ ನೋವಿನ ಸಂಗತಿ. ಈ ಬಗ್ಗೆ ಪರಿಶೀಲಿಸಿ ಮೃತರ ಕುಟುಂಬಕ್ಕೆ ಪರಿಹಾರ ಒದಗಿಸಲು ಸೂಚಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.


‘ವಿಜಯ ಕರ್ನಾಟಕ’ದಲ್ಲಿ ಪ್ರಕಟವಾದ ಗಂಗಮ್ಮ ಸಾವಿನ ಸುದ್ದಿಗೆ ಟ್ವೀಟ್‌ ಮಾಡಿರುವ ಸಿಎಂ, ‘‘ಇದು ಸಂಕಷ್ಟದ ಸಮಯ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 2 ಸಾವಿರ ರೂಪಾಯಿ ನೆರವು ನೀಡಲಾಗಿದೆ. ಇದಲ್ಲದೆ, ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರ ಒದಗಿಸಲು ದಾಸೋಹ ಸಹಾಯ ವಾಣಿ- 155214 ಸ್ಥಾಪಿಸ ಲಾಗಿದೆ. ಕಾರ್ಮಿಕರಿಗೆ ತಾತ್ಕಾಲಿಕವಾಗಿ ಉಳಿದು ಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಯಾರೂ ಹತಾಶರಾಗಬೇಡಿ, ಸರ್ಕಾರದ ಸೂಚನೆಗಳನ್ನು ಪಾಲಿಸಿ. ತೊಂದರೆಗಳಿದ್ದಲ್ಲಿ ಸಹಾಯವಾಣಿ ಸಂಪರ್ಕಿಸಿ,’’ ಎಂದು ಮನವಿ ಮಾಡಿದ್ದಾರೆ.



ಎಲ್ಲೆಡೆ ಜನ್‌ಧನ್‌ ಖಾತೆಗೆ ಬಂದ 500 ರೂ.ಗೆ ಮುಗಿಬಿದ್ದರು, ಸಾಮಾಜಿಕ ಅಂತರ ನುಚ್ಚುನೂರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ