ಆ್ಯಪ್ನಗರ

‘ಶೀಘ್ರದಲ್ಲಿ 40 ಲಕ್ಷ ರೂ. ವೆಚ್ಚದ 10 ಇ-ಗ್ರಂಥಾಲಯ ಸ್ಥಾಪನೆ’

ತಾಲೂಕಿನ 2 ಗ್ರಾ.ಪಂ.ಗೊಂದರಂತೆ 40 ಲಕ್ಷ ರೂ. ವೆಚ್ಚದಲ್ಲಿ 10 ಇ-ಗ್ರಂಥಾಲಯಗಳನ್ನು ಶೀಘ್ರದಲ್ಲಿ ಸ್ಥಾಪಿಸಿ ಎಸ್‌ಡಿಎ, ಎಫ್‌ಡಿಎ, ಕೆಎಎಸ್‌, ಐಎಎಸ್‌ ಸೇರಿ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಗ್ರಾಮೀಣ ಭಾಗದ ಯುವ ಸಮೂಹಕ್ಕೆ ಸಧ್ಯದಲ್ಲೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಈ.ತುಕಾರಾಮ್‌ ಹೇಳಿದರು.

Vijaya Karnataka 18 Sep 2018, 5:00 am
ಸಂಡೂರು : ತಾಲೂಕಿನ 2 ಗ್ರಾ.ಪಂ.ಗೊಂದರಂತೆ 40 ಲಕ್ಷ ರೂ. ವೆಚ್ಚದಲ್ಲಿ 10 ಇ-ಗ್ರಂಥಾಲಯಗಳನ್ನು ಶೀಘ್ರದಲ್ಲಿ ಸ್ಥಾಪಿಸಿ ಎಸ್‌ಡಿಎ, ಎಫ್‌ಡಿಎ, ಕೆಎಎಸ್‌, ಐಎಎಸ್‌ ಸೇರಿ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಗ್ರಾಮೀಣ ಭಾಗದ ಯುವ ಸಮೂಹಕ್ಕೆ ಸಧ್ಯದಲ್ಲೆ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕ ಈ.ತುಕಾರಾಮ್‌ ಹೇಳಿದರು.
Vijaya Karnataka Web BLR-BLY 17 SDR 2


ಪಟ್ಟಣದ ವಾಸವಿ ಕಲ್ಯಾಣ ಮಂಟಪದ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತ್ಯುತ್ಸವ ಉದ್ಘಾಟಿಸಿ ಸೋಮವಾರ ಮಾತನಾಡಿದರು. ತಾಲೂಕಿನಲ್ಲಿ ಬಿಇ, ಡಿಪೊ್ಲಮಾ, ಐಟಿಐ ಸೇರಿ ತಾಂತ್ರಿಕ ಶಿಕ್ಷ ಣ ಪಡೆದ ಯುವಕರಿದ್ದು ಸಂದರ್ಶನಗಳನ್ನು ಎದುರಿಸುವ ಕೌಶಲ್ಯದ ಕೊರತೆಯಿಂದ ನಿರುದ್ಯೋಗಿಳಾಗಿದ್ದಾರೆ ಎಂಬುದನ್ನು ಗುರುತಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯಲಾಗುವುದು ಎಂದರು. ಪಟ್ಟಣದಲ್ಲಿ ವಸತಿ ರಹಿತರಿಗಾಗಿ 3,100 ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಿವೇಶನದ ಲೇ ಔಟ್‌ ಪೂರ್ಣಗೊಳ್ಳುವ ಹಂತದಲ್ಲಿದ್ದು ದೀಪಾವಳಿ ಹಬ್ಬದಂದು ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು. ಪಟ್ಟಣದ ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಪ್ರಭುಸ್ವಾಮಿಗಳು ಸಾನ್ನಿಧ್ಯವಹಿಸಿ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಡಾ.ತಿಪ್ಪೇರುದ್ರ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಗಡಂಬ್ಲಿ ಚನ್ನಪ್ಪ, ಉಪ ತಹಸೀಲ್ದಾರ್‌ ಕೆ.ಎಂ.ಶಿವಕುಮಾರ್‌, ದೈಹಿಕ ಶಿಕ್ಷ ಣ ಪರಿವೀಕ್ಷ ಕ ಎಸ್‌.ಡಿ.ಸಂತಿ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಕೆ.ಕುಮಾರಸ್ವಾಮಿ, ಮುಖಂಡರಾದ ದಿವಾಕರ್‌ ಆಚಾರ್‌, ರಾಮಚಂದ್ರಪ್ಪ, ತಿಪ್ಪೇಸ್ವಾಮಿ, ಚಂದ್ರಪ್ಪ, ದ್ಯಾಮೇಶ ಆಚಾರ್‌, ಭಾಸ್ಕರ್‌ ಆಚಾರ್‌, ಬಸವರಾಜ ಸೇರಿದಂತೆ ಇತರರಿದ್ದರು.ಶಕುಂತಲಾ ಬಡಿಗೇರ್‌, ಜಗನ್ನಾಥ ಹೊರಪೇಟೆ, ಸುನಿಲ್‌, ಮುತ್ತಣ್ಣ ಬಡಿಗೇರ್‌ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ