ಆ್ಯಪ್ನಗರ

ಕೊರೊನಾ ವೈರಸ್‌: ಗಣಿಜಿಲ್ಲೆ ಬಳ್ಳಾರಿಯಲ್ಲಿ 515 ಪಾಸಿಟಿವ್, 9 ಸಾವು!

ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರೊಂದಿಗೆ ಸಾವಿನ ಸಂಖ್ಯೆ ಸಹ ಏರಿಕೆಯಾಗುತ್ತಿದೆ. ಇಂದು ಒಂದೇ ದಿನ 515 ಪಾಸಿಟಿವ್ ದೃಢಪಟ್ಟಿದ್ದು, 9 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

Vijaya Karnataka Web 12 Aug 2020, 5:44 pm
ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರೊಂದಿಗೆ ಸಾವಿನ ಸಂಖ್ಯೆ ಸಹ ಏರಿಕೆಯಾಗುತ್ತಿದೆ. ಇಂದು ಒಂದೇ ದಿನ 515 ಪಾಸಿಟಿವ್ ದೃಢಪಟ್ಟಿದ್ದು, 9 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
Vijaya Karnataka Web covid19


ಬಳ್ಳಾರಿ- 252 , ಸಂಡೂರು- 50, ಸಿರುಗುಪ್ಪ- 32, ಕೂಡ್ಲಿಗಿ- 08, ಹೂವಿನ ಹಡಗಲಿ-37, ಹೊಸಪೇಟೆ- 98, ಎಚ್.ಬಿ. ಹಳ್ಳಿ- 17, ಹರಪನಹಳ್ಳಿ- 20, ಅಂತರ್ ರಾಜ್ಯ 01 ಕೇಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12,066 ಕ್ಕೇರಿದೆ.

130 ಕ್ಕೇರಿದ ಸಾವಿನ ಸಂಖ್ಯೆ. 5298 ಸಕ್ರೀಯ ಪ್ರಕರಣಗಳಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ. ಇಂದು ಒಂದೇ ದಿನ 380 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು ಈವರೆಗೆ ಒಟ್ಟು 6638 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಗಲ್ಲಿಗಲ್ಲಿಗೆ ನುಗ್ಗಿ ಕೆ.ಜಿ. ಹಳ್ಳಿ ಆರೋಪಿಗಳ ಹೆಡೆಮುರಿ ಕಟ್ಟುತ್ತೇವೆ: ಆರ್‌. ಅಶೋಕ್‌ ಶಪಥ

ಒಡೆದ ಚೆಕ್‌ಡ್ಯಾಂ, ದುರಸ್ತಿಗೆ ಆಗ್ರಹ
ಕೂಡ್ಲಿಗಿ: ತಾಲೂಕಿನ ಹುರುಳಿಹಾಳ್‌ ಗ್ರಾ.ಪಂ.ವ್ಯಾಪ್ತಿಯ ವಲಸೆ ಗ್ರಾಮದ ಸಮೀಪ ಹರಿಯುವ ಹಳ್ಳಕ್ಕೆ ಈ ಹಿಂದೆ ಚೆಕ್‌ ಡ್ಯಾಂ ನಿರ್ಮಿಸಲಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆ ಒಡೆದು ಹೋಗಿರುವುದರಿಂದ ಉಪಯೋಗಕ್ಕಿಲ್ಲದಂತಾಗಿದೆ.

ಈ ಬಗ್ಗೆ ವಲಸೆ ಗ್ರಾಮದ ಡಿ.ವಿ.ಮಹೇಶ್ವರಪ್ಪ ಅವರು ಕಳೆದ ವರ್ಷ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿಅರ್ಜಿ ಸಲ್ಲಿಸುವ ಮೂಲಕ ಈ ಚೆಕ್‌ ಡ್ಯಾಂ ದುರಸ್ತಿ ಮಾಡಿಸಿದರೆ, ಅಂತರ್ಜಲ ಹೆಚ್ಚಿ ಉಪಯೋಗವಾಗುತ್ತದೆ ಎಂದು ಮನವಿ ಸಲ್ಲಿಸಿದ್ದರು.

ನಂತರ ಈ ಬಗ್ಗೆ ಪರಿಶೀಲನೆ ನಡೆಸಿದ ಅಧಿಕಾರಿಗಳು ವಲಸೆ ಮತ್ತು ಪಾಪಯ್ಯನಹಟ್ಟಿ ಹತ್ತಿರದ ಚೆಕ್‌ ಡ್ಯಾಂಗಳ ದುರಸ್ತಿಗೆ ತಲಾ 20 ಲಕ್ಷ ರೂ. ಪ್ರಾಧಿಕಾರದಿಂದ ದೊರಕಿಸಿ ಕೊಟ್ಟರೆ ದುರಸ್ತಿ ಮಾಡಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸರಕಾರಕ್ಕೆ ಮನವಿ ಮಾಡಿದ್ದರು. ಹಾಗಾಗಿ ಚೆಕ್‌ ಡ್ಯಾಂಗಳನ್ನು ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ