ಆ್ಯಪ್ನಗರ

ಸಂಡೂರು: ಕೊರೊನಾ ಗೆಲ್ಲಲು ಆತ್ಮ ಸ್ಥೈರ್ಯವೇ ಮದ್ದು ಎಂದ 95ರ ವೃದ್ಧೆ ತಾಳೂರು ಎಲೆ ಬಸಮ್ಮ

ಚಿಕಿತ್ಸೆ ಸಂದರ್ಭದಲ್ಲಿ ಊಟ, ಉಪಾಹಾರ, ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ಕೊಡುತ್ತಿದ್ದರು. ಶೌಚಾಲಯಕ್ಕೆ ಕರೆದುಕೊಂಡು ಹೋಗಲು ಅಲ್ಲಿನ ದಾದಿಯರು ಹಿಂಜರಿಯಲಿಲ್ಲ. ವೈದ್ಯರು, ದಾದಿಯರ ಅಕ್ಕರೆಯ ಮಾತುಗಳಿಂದ ಆತ್ಮ ಸ್ಥೆರ್ಯ ಹೆಚ್ಚಾಯಿತು

Vijaya Karnataka Web 30 Jul 2020, 10:09 pm
ಸಂಡೂರು: ''ಕೊರೊನಾ ಸೋಂಕಿನಿಂದ ಬೇಗನೇ ಗುಣಮುಖರಾಗಲು ಚಿಕಿತ್ಸೆ ಜತೆಗೆ ಆತ್ಮಸ್ಥೈರ್ಯವೇ ಮದ್ದು'' ಎಂಬುದು ತಾಲೂಕಿನ ತೋರಣಗಲ್ಲುಗ್ರಾಮದ ತಾಳೂರು ಎಲೆ ಬಸಮ್ಮ (95) ಅವರ ದೃಢವಾದ ನಂಬಿಕೆ. ಕೊರೊನಾ ವಿರುದ್ಧ ಸೆಣಸಿದ ಅವರು ನಿರಾಯಾಸವಾಗಿ ಗೆದ್ದು ಮನೆ ಸೇರಿದ್ದಾರೆ.
Vijaya Karnataka Web ಕೊರೊನಾ
ಕೊರೊನಾ


ಈ ವೃದ್ಧೆಯ ಮಗ, ಚೈತನ್ಯ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೂಲಿಮನಿ ತಿಪ್ಪೇಸ್ವಾಮಿ (52), ತೋರಣಗಲ್ಲಿನ ಕ್ವಾರಂಟೈನ್‌ ಕೇಂದ್ರಗಳಿಗೆ ಹಾಲು, ಆಹಾರ ಪೂರೈಸುತ್ತಿದ್ದರು. 15 ದಿನಗಳ ಹಿಂದೆ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಪ್ರಾಥಮಿಕ ಸಂಪರ್ಕ ಹೊಂದಿದ್ದ ಕಾರಣಕ್ಕೆ ಅವರ ತಾಯಿ ಬಸಮ್ಮ ಹಾಗೂ ಮಗ ಚಾಣಕ್ಯ (22) ಅವರಿಗೂ ಕೊರೊನಾ ಧೃಢಟ್ಟಿತ್ತು.

ವೃದ್ಧೆಗೆ ಮಧುಮೇಹ ಹಾಗೂ ಬಿಪಿ ಇದ್ದರೂ ನಿಯಂತ್ರಣದಲ್ಲಿತ್ತು. ಅಷ್ಟಾಗಿ ನಡೆಯಲು ಬಾರದ ಅವರ ಎರಡೂ ಕಣ್ಣುಗಳು ಕಾಣಿಸುತ್ತಿರಲಿಲ್ಲ. ಜಿಂದಾಲ್‌ ಸಂಜೀವಿನಿ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಅವರು, ಸದ್ಯ ಹೋಂ ಕ್ವಾರಂಟೈನ್‌ನಲ್ಲಿ ಇದ್ದಾರೆ.

''ಚಿಕಿತ್ಸೆ ಸಂದರ್ಭದಲ್ಲಿ ಊಟ, ಉಪಾಹಾರ, ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ಕೊಡುತ್ತಿದ್ದರು. ಶೌಚಾಲಯಕ್ಕೆ ಕರೆದುಕೊಂಡು ಹೋಗಲು ಅಲ್ಲಿನ ದಾದಿಯರು ಹಿಂಜರಿಯಲಿಲ್ಲ. ವೈದ್ಯರು, ದಾದಿಯರ ಅಕ್ಕರೆಯ ಮಾತುಗಳಿಂದ ಆತ್ಮ ಸ್ಥೆರ್ಯ ಹೆಚ್ಚಾಯಿತು'' ಎನ್ನುತ್ತಾರೆ ಬಸಮ್ಮ.

ಆಸ್ಪತ್ರೆಯಿಂದ ಹೊರಡುವ ಮುಂಚೆ ತಮ್ಮ ಅಕ್ಕಪಕ್ಕದ ಹಾಸಿಗೆಯಲ್ಲಿನ ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ. ಮಗ ತಿಪ್ಪೇಸ್ವಾಮಿ, ಮೊಮ್ಮಗ ಚಾಣಕ್ಯ ಅವರೂ ಇದೀಗ ಆರೋಗ್ಯವಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ