ಆ್ಯಪ್ನಗರ

ದಸರಾದಲ್ಲಿ ಗಮನ ಸೆಳೆಯುವ ಅಲಂಕಾರ ಗೊಂಬೆ

ಪಟ್ಟಣದ ಪೇಟೆ ಬಸವೇಶ್ವರ ದೇಗುಲ ಸಮಿತಿಯವರು, ದಸರಾ ಹಬ್ಬದಲ್ಲಿ ಪ್ರತಿದಿನ ಸಂಜೆ ದೇವತೆಗಳ, ನಾಡಿನ ವಚನಕಾರರ ಹಾಗೂ ಋುಷಿಮುನಿಗಳ ಅಲಂಕಾರ ಗೊಂಬೆಗಳನ್ನು ಕಳೆದ ಹಲವು ವರ್ಷಗಳಿಂದ ಕೂಡಿಸುತ್ತ ಬಂದಿರುವುದು ಗಮನ ಸೆಳೆಯುತ್ತಿದೆ.

Vijaya Karnataka 18 Oct 2018, 5:00 am
ಕಂಪ್ಲಿ : ಪಟ್ಟಣದ ಪೇಟೆ ಬಸವೇಶ್ವರ ದೇಗುಲ ಸಮಿತಿಯವರು, ದಸರಾ ಹಬ್ಬದಲ್ಲಿ ಪ್ರತಿದಿನ ಸಂಜೆ ದೇವತೆಗಳ, ನಾಡಿನ ವಚನಕಾರರ ಹಾಗೂ ಋುಷಿಮುನಿಗಳ ಅಲಂಕಾರ ಗೊಂಬೆಗಳನ್ನು ಕಳೆದ ಹಲವು ವರ್ಷಗಳಿಂದ ಕೂಡಿಸುತ್ತ ಬಂದಿರುವುದು ಗಮನ ಸೆಳೆಯುತ್ತಿದೆ.
Vijaya Karnataka Web a decorating doll in dasara
ದಸರಾದಲ್ಲಿ ಗಮನ ಸೆಳೆಯುವ ಅಲಂಕಾರ ಗೊಂಬೆ


ದೇಗುಲ ಆಡಳಿತ ಮಂಡಳಿಯವರು ಕಳೆದ 60 ವರ್ಷಗಳಿಂದಲೂ ದಸರಾ ಪಾಡ್ಯದಿಂದ, ವಿಜಯ ದಶಮಿವರೆಗೂ ದಿನಾಲು ನಾಡಿನ ದಾರ್ಶನಿಕರ, ದೇವತೆಗಳ ಅಲಂಕಾರ ಗೊಂಬೆ ಕೂಡಿಸುತ್ತ ದಸರಾ ಹಬ್ಬ ವಿಶೇಷವಾಗಿ ಆಚರಿಸುತ್ತಿದ್ದಾರೆ. ಇದೀಗ ಇಲ್ಲಿನ ವಿಜಯನಗರ ಕಲಾ ಶೈಲಿ ಕಲಾವಿದ ಚಿತ್ರಗಾರ ಪರಶುರಾಮಪ್ಪ ಮತ್ತು ಮಕ್ಕಳಿಂದ ಅಲಂಕಾರಗೊಂಡ ಗೊಂಬೆಗಳನ್ನು ದೇಗುಲದಲ್ಲಿ ಕೂಡಿಸಲಾಗುತ್ತಿದೆ.

ವಿಶೇಷ: ಕೆಲ ಮನೆಗಳಲ್ಲಿ ಹಬ್ಬದ ದಿನದಲ್ಲಿ ಗೊಂಬೆಗಳನ್ನು ಕೂಡಿಸುವಂತೆ, ಪಟ್ಟಣದಲ್ಲಿಯೇ ದಸರಾ ಹಬ್ಬದಲ್ಲಿ ಶಾಸ್ತ್ರೀಯ ಬದ್ಧವಾಗಿ ಅಲಂಕಾರ ಗೊಂಬೆಗಳನ್ನು ಕೂಡಿಸುವುದು ದೇಗುಲದ ವಿಶೇಷವಾಗಿದೆ. ಇಲ್ಲಿನ ಸತ್ಯನಾರಾಯಣ ದೇಗುಲದಲ್ಲಿ ಮತ್ತು ಕನ್ನಿಕಾ ಪರಮೇಶ್ವರಿ ದೇಗುಲ ಹಾಗೂ ಗ್ರಾಮ ದೇವತೆ ಮಾರೆಮ್ಮ ದೇಗುಲದಲ್ಲಿ ಹಲವು ವರ್ಷಗಳವರೆಗೆ ಅಲಂಕಾರ ಗೊಂಬೆಗಳನ್ನು ಕೂಡಿಸುತ್ತಿದ್ದರು. ಆದರೆ ನಾನಾ ಕಾರಣಗಳಿಂದ ಇದೀಗ ಕೈಬಿಡಲಾಗಿದೆ ಎಂದು ಕಲಾವಿದ ಚಿತ್ರಗಾರ ಪರಶುರಾಮಪ್ಪ ಹೇಳುತ್ತಾರೆ.

ದಸರಾ ಹಬ್ಬದಲ್ಲಿ ಇಲ್ಲಿನ ನಾನಾ ದೇಗುಲಗಳಿಗೆ ವಿದ್ಯುತ್‌ ದೀಪದಿಂದ ಅಲಂಕಾರ ಮಾಡಲಾಗುತ್ತದೆ. ಅಲ್ಲದೇ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. ''ಹಿಂದಿನ ದೇಗುಲ ಸಮಿತಿಯ ಹಿರಿಯರು ನಡೆಸಿಕೊಂಡು ಬಂದ ಕಾರ್ಯಗಳನ್ನು, ಎಲ್ಲರ ಸಹಕಾರದಿಂದ ಇಂದಿಗೂ ಮುಂದುವರಿಸಿಕೊಂಡು ಬಂದಿದ್ದೇವೆ'' ಎಂದು ಪೇಟೆ ಬಸವೇಶ್ವರ ದೇಗುಲ ಸಮಿತಿ ಅಧ್ಯಕ್ಷ ಡಿ.ವೀರಪ್ಪ ಹೇಳುತ್ತಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ