ಆ್ಯಪ್ನಗರ

ಮನೆ ಮೇಲೆ ಎಸಿಬಿ ದಾಳಿ

ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಇಲ್ಲಿನ ಸಿದ್ಧಾರ್ಥ ಕಾಲೊನಿಯಲ್ಲಿರುವ ನೀರಾವರಿ ಇಲಾಖೆಯ ಎಇಇ ಆದೆಪ್ಪ ಅವರ ಮನೆ ಮೇಲೆ ಶುಕ್ರವಾರ ಎಸಿಬಿ ತಂಡದ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದರು.

Vijaya Karnataka 5 May 2018, 5:00 am
ಬಳ್ಳಾರಿ: ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಇಲ್ಲಿನ ಸಿದ್ಧಾರ್ಥ ಕಾಲೊನಿಯಲ್ಲಿರುವ ನೀರಾವರಿ ಇಲಾಖೆಯ ಎಇಇ ಆದೆಪ್ಪ ಅವರ ಮನೆ ಮೇಲೆ ಶುಕ್ರವಾರ ಎಸಿಬಿ ತಂಡದ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದರು.
Vijaya Karnataka Web BLR-BLY04GK2


ಎಸಿಬಿ ಎಸ್ಪಿ ಪ್ರಸನ್ನ ಬಿ.ದೇಸಾಯಿ ನೇತೃತ್ವದ ಈ ತಂಡದಲ್ಲಿ ಡಿವೈಎಸ್ಪಿ ಕೆ.ಅರುಣಕುಮಾರ, ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ.ರವಿಕುಮಾರ, ಅಧಿಕಾರಿ ದಿವಾಕರ ಸೇರಿ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಸಿಬ್ಬಂದಿ ಇದ್ದರು. ಬೆಳಗ್ಗೆ 7.30ರ ಸುಮಾರಿಗೆ ಎಇಇ ಆದೆಪ್ಪ ಅವರ ಮನೆ ಪ್ರವೇಶಿಸಿದ ಅಧಿಕಾರಿಗಳು, ಸಂಜೆಯವರೆಗೂ ತಪಾಸಣೆ ನಡೆಸಿದರು. ಚಿನ್ನಾಭರಣ, ನಗದು ಸೇರಿ ಸ್ಥಿರಾಸ್ತಿ ಮತ್ತು ಚರಾಸ್ತಿ ಕುರಿತ ಮೂಲ ದಾಖಲೆಗಳನ್ನು ಪರಿಶೀಲಿಸಿದರು.

ಆದೆಪ್ಪ ಅವರ ಪುತ್ರಿ, ಮನೆಗೆಲಸದ ಮಹಿಳೆ ಸೇರಿ ಇತರರನ್ನು ಈ ತಂಡ ರಹಸ್ಯವಾಗಿ ವಿಚಾರಣೆ ನಡೆಸಿತು. ಆದೆಪ್ಪ ಅವರು, ರಾಯಚೂರು, ಸಿರುಗುಪ್ಪ ಹಾಗೂ ಬಳ್ಳಾರಿಯಲ್ಲಿ ಎಇಇ ಆಗಿ ಕಾರ್ಯನಿರ್ವಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ