ಆ್ಯಪ್ನಗರ

‘ಅನುಮತಿ ಪಡೆಯದೇ ಜಾಹಿರಾತು ಪ್ರಸಾರ ಮಾಡುವಂತಿಲ್ಲ’

ಮಾಧ್ಯಮಗಳಲ್ಲಿ ಖಾಸಗಿ ರೂಪದ ಸುದ್ದಿಗಳು ಹಾಗೂ ಅನುಮತಿ ಪಡೆಯದೇ ಸುದ್ದಿ ವಾಹಿನಿಗಳಲ್ಲಿ ಜಾಹೀರಾತು ಪ್ರಸಾರವಾದರೆ ತಕ್ಷ ಣ ಗಮನಕ್ಕೆ ತನ್ನಿ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಎಸ್‌.ಜೆ. ಸೋಮಶೇಖರ ಹೇಳಿದರು.

Vijaya Karnataka 20 Oct 2018, 5:00 am
ಬಳ್ಳಾರಿ : ಮಾಧ್ಯಮಗಳಲ್ಲಿ ಖಾಸಗಿ ರೂಪದ ಸುದ್ದಿಗಳು ಹಾಗೂ ಅನುಮತಿ ಪಡೆಯದೇ ಸುದ್ದಿ ವಾಹಿನಿಗಳಲ್ಲಿ ಜಾಹೀರಾತು ಪ್ರಸಾರವಾದರೆ ತಕ್ಷ ಣ ಗಮನಕ್ಕೆ ತನ್ನಿ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಎಸ್‌.ಜೆ. ಸೋಮಶೇಖರ ಹೇಳಿದರು.
Vijaya Karnataka Web BLR-BLY 19 MANJU 08


ಲೋಕಸಭಾ ಉಪಚುನಾವಣೆ ನಿಮಿತ್ತ ನೇತೃತ್ವದ ತಂಡ ಮಾಧ್ಯಮ ಕಣ್ಗಾವಲು ಮತ್ತು ಮಾಧ್ಯಮ ಪ್ರಮಾಣೀಕರಣ ಸಮಿತಿಗೆ ಹಾಗೂ ನಾನಾ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಬಳ್ಳಾರಿ ಲೋಕಸಭಾ ಉಪ ಚುನಾವಣೆ ಮೇಲೆ ಇಡೀ ದೇಶದ ದೃಷ್ಟಿ ನೆಟ್ಟಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಂತ ಅಂಶಗಳು ಹಾಗೂ ಪೇಯ್ಡ… ನ್ಯೂಸ್‌ ರೂಪದಲ್ಲಿ ಸುದ್ದಿಗಳ ಪ್ರಸಾರವಾಗುವ ಸಾಧ್ಯತೆ ಇದ್ದು, ಪ್ರತಿ ಕ್ಷ ಣವು ಹದ್ದಿನ ಕಣ್ಣಿಟ್ಟು ಕಾಯಬೇಕು ಎಂದರು.

ನಂತರ ದೂರು ನಿರ್ವಹಣಾ ಕೋಶ (ಕಂಟ್ರೋಲ್‌ ಮಾನಿಟರಿಂಗ್‌ ಸೆಲ್‌)ಕ್ಕೆ ತೆರಳಿದ ಅಪರ ಜಿಲ್ಲಾ ಚುನಾವಣಾಧಿಕಾರಿ, ಅಲ್ಲಿನ ಕಾರ್ಯನಿರ್ವಹಣೆ ಪರಿಶೀಲಿಸಿ ಕಂಟ್ರೋಲ್‌ ಮಾನಿಟರಿಂಗ್‌ ಸೆಲ್‌ಗೆ ಚುನಾವಣೆಗೆ ಸಂಬಂಧಿಸಿದ ದೂರುಗಳು ಬಂದ ತಕ್ಷ ಣ ಗಮನಹರಿಸಿ ಅವುಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಸ್ಪಂದಿಸುವ ಕೆಲಸ ಮಾಡಬೇಕು. ಸಭೆ ಸಮಾರಂಭಗಳಿಗೆ ಅನುಮತಿ ಕೋರಿ ಆನ್‌ಲೈನ್‌ನಲ್ಲಿ ಬರುವ ಅರ್ಜಿಗಳನ್ನು ತಕ್ಷ ಣ ವಿಲೇವಾರಿ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಸಿರುಗುಪ್ಪಾ ರಸ್ತೆ ಮಾರ್ಗದ ಬಳಿಯ ಚೆಕ್‌ಪೋಸ್ವ್‌ ಸೇರಿ ನಾನಾ ಚೆಕ್‌ ಪೋಸ್ಟ್‌ಗಳಿಗೆ ತೆರಳಿದ ಅಪರ ಜಿಲ್ಲಾ ಚುನಾವಣಾಧಿಕಾರಿ ಸೋಮಶೇಖರ್‌, ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. ತಪಾಸಣಾ ಮಾಡುವ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಯಾವುದೇ ರೀತಿ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು ಮತ್ತು ಪೊಲೀಸ್‌ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ