ಆ್ಯಪ್ನಗರ

ಜನ ಸ್ನೇಹಿ ಬಳ್ಳಾರಿಯಾಗಿಸುವ ಗುರಿ: ಎಚ್ಡಿಕೆ

ರಿಪಬ್ಲಿಕ್‌ ಆಫ್‌ ಬಳ್ಳಾರಿಯನ್ನು ಜನಸ್ನೇಹಿ ಬಳ್ಳಾರಿ ಮಾಡುವುದು ಜೆಡಿಎಸ್‌ ಗುರಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Vijaya Karnataka Web 13 Apr 2018, 5:00 am
ಬಳ್ಳಾರಿ : ರಿಪಬ್ಲಿಕ್‌ ಆಫ್‌ ಬಳ್ಳಾರಿಯನ್ನು ಜನಸ್ನೇಹಿ ಬಳ್ಳಾರಿ ಮಾಡುವುದು ಜೆಡಿಎಸ್‌ ಗುರಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.
Vijaya Karnataka Web BLR-12BLYPH11


ನಗರದ ಎಸ್‌ಜಿ ಕಾಲೇಜು ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ವಿಕಾಸಪರ್ವ ಸಮಾವೇಶದಲ್ಲಿ ಮಾತನಾಡಿದರು. ಬಳ್ಳಾರಿ ವಿಚಾರದಲ್ಲಿ ನನ್ನದು ತಪ್ಪಾಗಿದೆ. ಎರಡು ಚುನಾವಣೆಯಲ್ಲಿ ಬಳ್ಳಾರಿಯನ್ನು ನಾವು ಗಂಭೀರವಾಗಿ ಸ್ವೀಕರಿಸದೇ ಅಂತರ ಕಾಯ್ದುಕೊಂಡು ತಪ್ಪು ಮಾಡಿದ್ದೇವೆ. ಬಳ್ಳಾರಿಯವರು 2008ರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟು ನೋಡಿದ್ದೀರಿ. ಈ ಬಾರಿ ಜೆಡಿಎಸ್‌ ಪಕ್ಷಕ್ಕೆ ಅಧಿಕಾರ ಕೊಟ್ಟು ನೋಡಿ ಎಂದರು.

ಡ್ಯಾನ್ಸ್‌ ಮಾಡುತ್ತಾ ಬಂದು ಹೋದರು: ಬದಲಾವಣೆ ತರುತ್ತೇವೆ ಎಂದು ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಡ್ಯಾನ್ಸ್‌ ಮಾಡಿಕೊಂಡು ಹೋದರು. ಯಾವ ಬದಲಾವಣೆ ತಂದರೆನ್ನುವುದನ್ನು ಕಾಂಗ್ರೆಸ್‌ನವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಗಣಿ ಲೂಟಿ ಮಾಡಿದರ ಬಗ್ಗೆ ಮಾತನಾಡಲು ಗಂಟೆಗಟ್ಟಲೇ ಬೇಕಾಗುತ್ತದೆ ಎಂದರು. ಮರಳು ಮಾಫಿಯ ಬಳ್ಳಾರಿ ಜಿಲ್ಲೆಯಲ್ಲಷ್ಟೇ ಇಲ್ಲ. ವಿಜಯಪುರ ಜಿಲ್ಲೆಯಲ್ಲಿ ಮಂತ್ರಿಯ ರಕ್ಷಣೆಯಿಂದಾಗಿ ನಡೆಯುತ್ತಿದೆ ಎಂದು ಆರೋಪಿಸಿದರು. ವಿಧಾನ ಪರಿಷತ್‌ ಸದಸ್ಯ ಶರವಣ ಅವರು ಮಾತನಾಡಿ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಇವರನ್ನು ನಂಬಬೇಡಿ ಎಂದರು. ಬಳ್ಳಾರಿ ನಗರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಇಕ್ಬಾಲ್‌ ಅಹಮ್ಮದ್‌ ಹೊತ್ತೂರು ಮಾತನಾಡಿ, ಬಳ್ಳಾರಿ ನಗರದಲ್ಲಿನ ನೀರಿನ ಸಮಸ್ಯೆಯನ್ನೂ ಸಹ ಜನಪ್ರತಿನಿಧಿಗಳು ಪರಿಹರಿಸಿಲ್ಲ ಎಂದು ಹರಿಹಾಯ್ದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಶಿವಪ್ಪ ಮತ್ತು ಈಶಾನ್ಯ ಪದವೀಧರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎನ್‌.ಪ್ರತಾಪ ರೆಡ್ಡಿ, ಜೆಡಿಎಸ್‌ ಮುಖಂಡರಾದ ನಾಡಗೌಡ, ಸೋಮಲಿಂಗನಗೌಡ, ಮೀನಳ್ಳಿ ತಾಯಣ್ಣ, ಬಂಡೇಗೌಡ, ಡಾ.ಅರವಿಂದ ಪಾಟೀಲ್‌, ಲಕ್ಷ್ಮಿಕಾಂತ ರೆಡ್ಡಿ ಸೇರಿದಂತೆ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ