ಆ್ಯಪ್ನಗರ

ಪಾಕ್ ವಿಭಜನೆಗೆ ಅಂಬೇಡ್ಕರ್‌ ಒಪ್ಪಿಗೆ ಸೂಚಿಸಿದ್ದರು: ಮಂಗಳೂರು ವಿವಿ ಪ್ರಾಧ್ಯಾಪಕ

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಪಾಕಿಸ್ತಾನ ವಿಭಜನೆಗೆ ಒಪ್ಪಿಗೆ ಸೂಚಿಸಿದ್ದರು ಎಂದು ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಎಂ.ಲೋಕೇಶ್‌ ಹೇಳಿದರು.

Vijaya Karnataka 14 Jul 2019, 9:51 am
ಹೊಸಪೇಟೆ (ಬಳ್ಳಾರಿ): 'ಪಾಕಿಸ್ತಾನದ ಚಿಂತನೆಗಳು' ಎಂಬ ತಮ್ಮ ಪುಸ್ತಕದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಪಾಕಿಸ್ತಾನ ವಿಭಜನೆಗೆ ಒಪ್ಪಿಗೆ ಸೂಚಿಸಿದ್ದರು ಎಂದು ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಎಂ.ಲೋಕೇಶ್‌ ಹೇಳಿದರು.
Vijaya Karnataka Web ambedkar


ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಚರಿತ್ರೆ ವಿಭಾಗ ಮತ್ತು ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ ದತ್ತಿನಿಧಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 'ಭಾರತದ ವಿಭಜನೆ: ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಚಿಂತನೆಯ ನೆಲೆಯಲ್ಲಿ' ಎಂಬ ವಿಶೇಷ ದತ್ತಿ ಉಪನ್ಯಾಸದಲ್ಲಿ ಅವರು ಮಾತನಾಡಿದರು. ''ಪಾಕಿಸ್ತಾನ ಸೃಷ್ಟಿಯಿಂದ ಭಾರತ ಆರ್ಥಿಕ, ರಾಜಕೀಯ ಹಾಗೂ ರಕ್ಷ ಣಾತ್ಮಕವಾಗಿ ಗಟ್ಟಿಗೊಳ್ಳುವುದೇ ಹೊರತು ತೊಂದರೆಯಾಗುವುದಿಲ್ಲ. ಒಂದು ವೇಳೆ ಭಾರತ ವಿಭಜನೆಯಾಗದಿದ್ದರೆ ಕೋಮುದ್ವೇಷ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ವಿಷಯವನ್ನು ಅಂಬೇಡ್ಕರ್‌ ಅವರು ವಾಸ್ತವಿಕ ನೆಲೆಗಟ್ಟಿನಲ್ಲಿ ಪ್ರಸ್ತುತಪಡಿಸಿದ್ದರು'' ಎಂದು ಪುಸ್ತಕದ ಸಾಲುಗಳನ್ನು ಉದಾಹರಿಸಿದರು.

ಕುಲಪತಿ ಡಾ.ಸ.ಚಿ.ರಮೇಶ ಅಧ್ಯಕ್ಷ ತೆ ವಹಿಸಿ ಮಾತನಾಡಿ, ''ಪಾಕಿಸ್ತಾನದ ವಿಭಜನೆಯು ರಾಜಕೀಯ ವಿಷಯವೇ ಹೊರತು, ಅದರಲ್ಲಿ ಪಾಪ ಮತ್ತು ನೈತಿಕ ಅಂಶ ಬರುವುದೇ ಇಲ್ಲ. ಪ್ರತ್ಯೇಕತೆ ಎಂಬುದು ಅಂಬೇಡ್ಕರ್‌ ಅವರ ನಿಲುವಾಗಿತ್ತು'' ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ, ಚರಿತ್ರೆ ವಿಭಾಗದ ಮುಖ್ಯಸ್ಥರಾದ ಡಾ.ಎನ್‌.ಚಿನ್ನಸ್ವಾಮಿ ಸೋಸಲೆ ಹಾಗೂ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ