ಆ್ಯಪ್ನಗರ

ಅಮೃತಾಭಿನಂದನೆ: ಅದ್ಧೂರಿ ಮೆರವಣಿಗೆ

ನಾಗರಿಕ ಅಭಿನಂದನಾ ಸಮಿತಿಯಿಂದ ರಂಗಭೂಮಿ ಹಿರಿಯ ಕಲಾವಿದೆ ಸುಭದ್ರಮ್ಮ ಮನ್ಸೂರು ಅಮೃತಾಭಿನಂದನೆ ಕಾರ್ಯಕ್ರಮ ನಿಮಿತ್ತ ಇಲ್ಲಿನ ಗಡಿಗಿ ಚನ್ನಪ್ಪ ವೃತ್ತದ ಬಳಿ ಭಾನುವಾರ ಸುಭದ್ರಮ್ಮ ಮನ್ಸೂರರ ಕುರಿತ ಗ್ರಂಥ ಸಮೇತ ಪಲ್ಲಕ್ಕಿ ಮೆರವಣೆಗೆಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.

Vijaya Karnataka Web 28 May 2018, 1:02 pm
ಬಳ್ಳಾರಿ : ನಾಗರಿಕ ಅಭಿನಂದನಾ ಸಮಿತಿಯಿಂದ ರಂಗಭೂಮಿ ಹಿರಿಯ ಕಲಾವಿದೆ ಸುಭದ್ರಮ್ಮ ಮನ್ಸೂರು ಅಮೃತಾಭಿನಂದನೆ ಕಾರ್ಯಕ್ರಮ ನಿಮಿತ್ತ ಇಲ್ಲಿನ ಗಡಿಗಿ ಚನ್ನಪ್ಪ ವೃತ್ತದ ಬಳಿ ಭಾನುವಾರ ಸುಭದ್ರಮ್ಮ ಮನ್ಸೂರರ ಕುರಿತ ಗ್ರಂಥ ಸಮೇತ ಪಲ್ಲಕ್ಕಿ ಮೆರವಣೆಗೆಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.
Vijaya Karnataka Web amnesia a hugely march
ಅಮೃತಾಭಿನಂದನೆ: ಅದ್ಧೂರಿ ಮೆರವಣಿಗೆ


ಗಡಿಗಿ ಚನ್ನಪ್ಪ ವೃತ್ತದ ಬಳಿಯಿರುವ ರಾಘವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸುವ ಮುಖೇನ ಅಭಿನಂದನಾ ಸಮಿತಿ ಅಧ್ಯಕ್ಷ ಕೆ.ಚನ್ನಪ್ಪ, ಚಾಲನೆ ನೀಡಿದರು.

ವೃತ್ತದಿಂದ ಡಾ.ರಾಜ್‌ ರಸ್ತೆ, ನಗರೂರು ನಾರಾಯಣರಾವ್‌ ಉದ್ಯಾನ, ರಾಘವ ಕಲಾಮಂದಿರವರೆಗೆ ಗ್ರಂಥ ಪಲ್ಲಕ್ಕಿಯ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೆ ವಾದ್ಯ ಗಮನ ಸೆಳೆಯಿತು.

ವೇದಿಕೆ ಕಾರ್ಯಕ್ರಮದಲ್ಲಿ ಮನ್ಸೂರು ಅವರ ರಂಗಗೀತೆಗಳ ಧ್ವನಿ ಸಾಂದ್ರಿಕೆ ಹಾಗೂ ರಂಗಪಯಣದ ಗ್ರಂಥ ಲೋಕಾರ್ಪಣೆ ನಡೆಯಿತು. ಲೇಖಕರಾದ ವಿಜಯಾ, ಗುಡಿಹಳ್ಳಿ ನಾಗರಾಜ ವಿರಚಿತ ಸುಭದ್ರಮ್ಮ ಮನ್ಸೂರು ಅವರ ಪುಸ್ತಕ ಲೋಕಾರ್ಪಣೆಗೊಂಡಿತು. ಹಿರಿಯ ಲೇಖಕಿ ಪ್ರೊ.ಆರ್‌.ಪೂರ್ಣಿಮಾ ಅವರು, 53 ರಂಗಗೀತೆ ಒಳಗೊಂಡ ಧ್ವನಿಸಾಂದ್ರಿಕೆ ಬಿಡುಗಡೆ ಮಾಡಿದರು.

ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ, ಅಭಿನಂದನಾ ಸಮಿತಿ ಗೌರವ ಅಧ್ಯಕ್ಷ ಬಿ.ಸಿದ್ದನಗೌಡ, ರಂಗಭೂಮಿ ಕಲಾವಿದರಾದ ಮಂಜಮ್ಮ ಜೋಗತಿ, ರಮೇಶಗೌಡ ಪಾಟೀಲ, ರಂಗತೋರಣ ಸಂಸ್ಥೆಯ ಮುಖ್ಯಸ್ಥ ಪ್ರಭುದೇವ ಕಪ್ಪಗಲ್ಲು, ಮುಖಂಡರಾದ ಅಡವಿಸ್ವಾಮಿ, ರಮಣಪ್ಪ , ಗುಡಿಹಳ್ಳಿ ನಾಗರಾಜ, ನಾಗರತ್ನ, ವಿರೂಪಾಕ್ಷಿರಾವ್‌, ಪುರುಷೋತ್ತಮ ಹಂದ್ಯಾಳ್‌, ಡಾ.ಮಹಿಪಾಲ, ವೆಂಕಟೇಶ ಉಪ್ಪಾರ, ವೆಂಕಟಯ್ಯ ಅಪ್ಪಗೆರೆ ಸೇರಿದಂತೆ ನೂರಾರು ಕಲಾಸ್ತಕರು ಇದ್ದರು.

ಫೋಟೋ ಫೈಲ್‌ ನಂ.ಬಿಎಲ್‌ವೈ 26 ಜಿಕೆ 9: ಸುಭದ್ರಮ್ಮ ಮನ್ಸೂರು ಅವರ ಅಮೃತಾಭಿನಂದನೆ ಕಾರ್ಯಕ್ರಮ ನಿಮಿತ್ತ ಭಾನುವಾರ ನಗರದಲ್ಲಿ ಗ್ರಂಥ ಪಲ್ಲಕ್ಕಿಯ ಮೆರವಣಿಗೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ