ಆ್ಯಪ್ನಗರ

ಮಾದಕ ವಸ್ತುಗಳ ವಿರೋಧಿ ದಿನದ ಜಾಗೃತಿ ಜಾಥಾ

ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಹಾಗೂ ಜಿಲ್ಲಾ ಔಷಧ ನಿಯಂತ್ರಣ ಅಧಿಕಾರಿಗಳ ಸಂಘದ ಸಹಯೋಗದಲ್ಲಿ ನಗರದ ಕೌಲ್‌ಬಜಾರ್‌ ಪೊಲೀಸ್‌ ಠಾಣೆ ಎದುರು ಮಂಗಳವಾರ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನದ ನಿಮಿತ್ತ ಜಾಥಾ ನಡೆಸಲಾಯಿತು.

Vijaya Karnataka 27 Jun 2018, 5:00 am
ಬಳ್ಳಾರಿ : ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಹಾಗೂ ಜಿಲ್ಲಾ ಔಷಧ ನಿಯಂತ್ರಣ ಅಧಿಕಾರಿಗಳ ಸಂಘದ ಸಹಯೋಗದಲ್ಲಿ ನಗರದ ಕೌಲ್‌ಬಜಾರ್‌ ಪೊಲೀಸ್‌ ಠಾಣೆ ಎದುರು ಮಂಗಳವಾರ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನದ ನಿಮಿತ್ತ ಜಾಥಾ ನಡೆಸಲಾಯಿತು.
Vijaya Karnataka Web BLR-BLY26GK3


ಕೌಲ್‌ಬಜಾರ್‌ ಪೊಲೀಸ್‌ ಠಾಣೆ ಸಿಪಿಐ ಕೆ.ಪ್ರಸಾದ ಗೋಖಲೆ ಜಾಗೃತಿ ಜಾಥಾದ ಮೆರವಣಿಗೆಗೆ ಹಸಿರು ನಿಶಾನೆ ತೋರಿದರು. ಪೊಲೀಸ್‌ ಠಾಣೆ ರಸ್ತೆಯಿಂದ ರೈಲ್ವೆ ಗೇಟ್‌, ಕೌಲ್‌ಬಜಾರ್‌ ಮುಖ್ಯರಸ್ತೆ, ಟಿ.ಬಿ.ಆಸ್ಪತ್ರೆವರೆಗೆ ಈ ಮೆರವಣಿಗೆ ತಲುಪಿತು. ಸಹಾಯಕ ಔಷಧ ನಿಯಂತ್ರಣಾಧಿಕಾರಿ ಬಿ.ಎನ್‌.ಬಾಬು, ಡ್ರಗ್ಸ್‌ ಇನ್‌ಸ್ಪೆಕ್ಟರ್‌ ಉದಯ ಕಿಶೋರ, ಔಷಧ ವಿಶ್ಲೇಷಕ ಶ್ರೀನಿವಾಸರೆಡ್ಡಿ, ಸಂಘದ ಪದಾಧಿಕಾರಿಗಳಾದ ಶೇಖ್‌ ಅಬ್ದುಲ್‌ ಗಫೂರ್‌, ಖಾಜಾ ಮೋಹಿನುದ್ದೀನ್‌, ಲಕ್ಷ್ಮಿನಾರಾಯಣ, ಸೈಯದ್‌ ಮೋಯಿನುದ್ದೀನ್‌, ಪ್ರಸನ್ನಕುಮಾರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವೇದಿಕೆ ಕಾರ್ಯಕ್ರಮ: ಜಾಗೃತಿ ಜಾಥಾದ ಮೆರವಣಿಗೆ ಬಳಿಕ, ಕೌಲ್‌ಬಜಾರ್‌ ವ್ಯಾಪ್ತಿಯ ಟಿಆರ್‌ಎಸ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾನಸಿಕ ತಜ್ಞ ಡಾ.ಟಿ.ಆರ್‌.ಶ್ರೀನಿವಾಸ ವಿಶೇಷ ಉಪನ್ಯಾಸ ನೀಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ