ಆ್ಯಪ್ನಗರ

ಕೇಂದ್ರದ ಕ್ರಮ ಖಂಡಿಸಿ ಬ್ಯಾಂಕ್‌ ನೌಕರರ ಪ್ರತಿಭಟನೆ

11ನೇ ವೇತನ ಪರಿಷ್ಕರಣೆಯಲ್ಲಿ ಬ್ಯಾಂಕ್‌ ಸಿಬ್ಬಂದಿಗೆ ಕೇವಲ ಶೇ.2ರಷ್ಟು ವೇತನ ಹೆಚ್ಚಳ ಮಾಡಿರುವುದನ್ನು ಖಂಡಿಸಿ, ಬ್ಯಾಂಕ್‌ ಯೂನಿಯನ್‌ ರಾಷ್ಟ್ರವ್ಯಾಪ್ತಿ ಕರೆ ನೀಡಿರುವ ಮುಷ್ಕರದ ಹಿನ್ನೆಲೆಯಲ್ಲಿ, ಜಿಲ್ಲೆಯ ಸ್ಟೇಟ್‌ ಬ್ಯಾಂಕ್ಸ್‌ ಸ್ಟಾಪ್‌ ಯೂನಿಯನ್‌ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

Vijaya Karnataka 31 May 2018, 5:00 am
ಬಳ್ಳಾರಿ: 11ನೇ ವೇತನ ಪರಿಷ್ಕರಣೆಯಲ್ಲಿ ಬ್ಯಾಂಕ್‌ ಸಿಬ್ಬಂದಿಗೆ ಕೇವಲ ಶೇ.2ರಷ್ಟು ವೇತನ ಹೆಚ್ಚಳ ಮಾಡಿರುವುದನ್ನು ಖಂಡಿಸಿ, ಬ್ಯಾಂಕ್‌ ಯೂನಿಯನ್‌ ರಾಷ್ಟ್ರವ್ಯಾಪ್ತಿ ಕರೆ ನೀಡಿರುವ ಮುಷ್ಕರದ ಹಿನ್ನೆಲೆಯಲ್ಲಿ, ಜಿಲ್ಲೆಯ ಸ್ಟೇಟ್‌ ಬ್ಯಾಂಕ್ಸ್‌ ಸ್ಟಾಪ್‌ ಯೂನಿಯನ್‌ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
Vijaya Karnataka Web bank employees protest protesting center action
ಕೇಂದ್ರದ ಕ್ರಮ ಖಂಡಿಸಿ ಬ್ಯಾಂಕ್‌ ನೌಕರರ ಪ್ರತಿಭಟನೆ


10ನೇ ವೇತನ ಪರಿಷ್ಕರಣೆಯಲ್ಲಿ ಶೇ.15ರಷ್ಟು ವೇತನ ಹೆಚ್ಚಳ ಮಾಡಲಾಗಿದ್ದು, ಈ ಬಾರಿ ವೇತನ ಹೆಚ್ಚಳದಲ್ಲಿ ನೌಕರರನ್ನು ಕಡೆಗಣಿಸಲಾಗಿದೆ. ಕೇವಲ ಶೇ.2ರಷ್ಟು ಹೆಚ್ಚಳ ಮಾಡಿರುವುದು ಎಷ್ಟು ಸರಿ? ಪ್ರತಿಭಟನಾ ನಿರತ ನೌಕರರು ಆಕ್ರೋಶ ವ್ಯಕ್ತಪಡಿಸಿದರು. ಬ್ಯಾಂಕ್‌ ನೌಕರರು ಸರಕಾರದ ಯೋಜನೆಗಳನ್ನು ಯಶಸ್ವಿಗೊಳಿಸಲು ಶ್ರಮಿಸಿದರೂ, ಕೇಂದ್ರ ಸರಕಾರ ಬ್ಯಾಂಕ್‌ ನೌಕರರ ಬಗ್ಗೆ ಆಸಕ್ತಿವಹಿಸದೇ ನೌಕರರ ಸಂಬಳ ಹೆಚ್ಚಿಸಲು ಹಿಂದೇಟುಹಾಕಿದೆ. ಕೇಂದ್ರ ಸರಕಾರದ ಜನ್‌ಧನ್‌ ಯೋಜನೆ, ಸರಕಾರಿ ವಿಮಾ ಯೋಜನೆ, ಮುದ್ರಾ ಸಾಲ, ನೋಟು ಅಮಾನ್ಯೀಕರಣ, ಆಧಾರ್‌ ಖಾತೆಗಳ ಜೋಡಣೆ ಸೇರಿದಂತೆ ಹತ್ತು ಹಲವು ಯೋಜನೆಗಳ ಸಾಕಾರಕ್ಕೆ ಪ್ರಾಮಾಣಿಕವಾಗಿ ದುಡಿದರೂ ನ್ಯಾಯೋಚಿತವಾಗಿ ವೇತನ ಹೆಚ್ಚಳ ಮಾಡದಿರುವುದು ಸರಿಯಲ್ಲ ಎಂದು ದೂರಿದರು.

ಸಿಪಿಎಸ್‌ಇಗೆ ಶೇ.20ರಷ್ಟು ವೇತನ ಹೆಚ್ಚಳ ಮಾಡಲಾಗಿದೆ, ಇದರಂತೆ ಬ್ಯಾಂಕ್‌ ಸಿಬ್ಬಂದಿಗೆ ಹೆಚ್ಚಳ ಮಾಡಬೇಕು, ವೇತನ ಏರಿಕೆಯಲ್ಲಿ ತಾರತಮ್ಯ ಅನುಸರಿಸಬಾರದು. ವೇತನವನ್ನು ನಮ್ಮ ಬೇಡಿಕೆಯಂತೆ ಹೆಚ್ಚಳ ಮಾಡದಿದ್ದರೆ ಮುಷ್ಕರ ಮುಂದುವರಿಸಲಾಗುವುದು, ಸರಕಾರ ಮತ್ತು ಇಂಡಿಯನ್‌ ಬ್ಯಾಂಕರ್ಸ್‌ ಅಸೋಸಿಯೇಶನ್‌ ನಮ್ಮನ್ನು ಹಾಸ್ಯಾಸ್ಪದವಾಗಿ ಕಾಣುತ್ತಿದೆ, ಇಂತಹ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಬ್ಯಾಂಕ್‌ ಮುಷ್ಕರದಲ್ಲಿ ಸ್ಟೇಟ್‌ ಬ್ಯಾಂಕ್ಸ್‌ ಸ್ಟಾಪ್‌ ಯೂನಿಯನ್‌ ಸಂಚಾಲಕ, ಸಹಾಯಕ ಮುಖ್ಯ ಕಾರ್ಯದರ್ಶಿ ಬಿ.ರಾಮಕೃಷ್ಣ, ವಲಯ ಕಾರ್ಯದರ್ಶಿ ಕೆ. ಸಂಜೀವ್‌ಕುಮಾರ್‌, ಉಪ ಸಂಸ್ಕರಣಾ ಕಾರ್ಯದರ್ಶಿ ವಿ.ದೇವಣ್ಣ ಸೇರಿದಂತೆ ಎಲ್ಲ ಬ್ಯಾಂಕ್‌ ಸಿಬ್ಬಂದಿಯವರು ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ