ಆ್ಯಪ್ನಗರ

ಕರಡಿ ದಾಳಿ: ರೈತನಿಗೆ ತೀವ್ರ ಗಾಯ

ಸಮೀಪದ ಓಬಳಶೆಟ್ಟಿಹಳ್ಳಿ ಗ್ರಾಮದಲ್ಲಿ ಬುಧವಾರ, ಜಮೀನಿಗೆ ತೆರಳುತ್ತಿದ್ದ ರೈತರೊಬ್ಬರು, ಕರಡಿ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದಾರೆ.

Vijaya Karnataka 28 Jun 2018, 12:00 am
ಕಾನಾಹೊಸಹಳ್ಳಿ (ಬಳ್ಳಾರಿ): ಸಮೀಪದ ಓಬಳಶೆಟ್ಟಿಹಳ್ಳಿ ಗ್ರಾಮದಲ್ಲಿ ಬುಧವಾರ, ಜಮೀನಿಗೆ ತೆರಳುತ್ತಿದ್ದ ರೈತರೊಬ್ಬರು, ಕರಡಿ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದಾರೆ.
Vijaya Karnataka Web BLR-BLY 27 KHL PHOTO 1


ಓಬಳಶೆಟ್ಟಿಹಳ್ಳಿಯ ದುರುಗಪ್ಪ ಗಾಯಗೊಂಡ ರೈತರು. ಚಿಕ್ಕಜೋಗಿಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣರಕ್ಷಣೆಗೆ ಚೀರಾಟ ನಡೆಸಿದ್ದರಿಂದ ನರೆಹೊರೆಯ ಜಮೀನುಗಳ ರೈತರು ಸ್ಥಳಕ್ಕೆ ಧಾವಿಸಿ ಕರಡಿಯನ್ನು ಓಡಿಸಿದರು. ಗುಡೇಕೋಟೆ ಕರಡಿಧಾಮದ ಆರ್‌ಎಫ್‌ಒ ಮಂಜುನಾಥ್ ಸೇರಿ ಇತರರು ಸ್ಥಳಕ್ಕೆ ಭೇಟಿನೀಡಿದ್ದರು. ಒಟ್ಟು ಎರಡು ಕರಡಿಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅರಣ್ಯಇಲಾಖೆಯ ಮಹೇಶ್, ಹೊನ್ನೂರಸ್ವಾಮಿ, ವೆಂಕಟೇಶ್‌ನಾಯ್ಕ್, ಗುರುಬಸವರಾಜ, ವೆಂಕಟೇಶ್, ರವಿಕಿರಣ, ಪ್ರಶಾಂತಯಾದವ್ ಸೇರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ