ಕಾನಾಹೊಸಹಳ್ಳಿ (ಬಳ್ಳಾರಿ): ಸಮೀಪದ ಭೀಮಸಮುದ್ರದಲ್ಲಿ ಬುಧವಾರ, ಕರಡಿ ದಾಳಿಯಲ್ಲಿ ರೈತರೊಬ್ಬರು ಗಾಯಗೊಂಡಿದ್ದಾರೆ.
ನಾಗರಾಜ (30) ಗಾಯಗೊಂಡ ರೈತ. ಅವರಿಗೆ ಚಿಕ್ಕಜೋಗಿಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಬಳ್ಳಾರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದನಗಳಿಗೆ ಮೇವು ತರಲೆಂದು ತೋಟಕ್ಕೆ ತೆರಳಿದ್ದ ಅವರ ಮೇಲೆ ಕರಡಿಯೊಂದು ಏಕಾಏಕಿ ದಾಳಿನಡಿಸಿದೆ. ರೈತನ ಚೀರಾಟ ಕೇಳಿದ ಸುತ್ತಲಿನ ಜನ ಧಾವಿಸಿ ಕರಡಿಯನ್ನು ಓಡಿಸಿದ್ದಾರೆ. ದಾಳಿಯಲ್ಲಿ ನಾಗರಾಜ ಅವರ ತಲೆ ಹಾಗೂ ಕಣ್ಣಿನ ಬಾಗದಲ್ಲಿ ತೀವ್ರ ಗಾಯಗಳಾಗಿವೆ.
ನಾಗರಾಜ (30) ಗಾಯಗೊಂಡ ರೈತ. ಅವರಿಗೆ ಚಿಕ್ಕಜೋಗಿಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಬಳ್ಳಾರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ದನಗಳಿಗೆ ಮೇವು ತರಲೆಂದು ತೋಟಕ್ಕೆ ತೆರಳಿದ್ದ ಅವರ ಮೇಲೆ ಕರಡಿಯೊಂದು ಏಕಾಏಕಿ ದಾಳಿನಡಿಸಿದೆ. ರೈತನ ಚೀರಾಟ ಕೇಳಿದ ಸುತ್ತಲಿನ ಜನ ಧಾವಿಸಿ ಕರಡಿಯನ್ನು ಓಡಿಸಿದ್ದಾರೆ. ದಾಳಿಯಲ್ಲಿ ನಾಗರಾಜ ಅವರ ತಲೆ ಹಾಗೂ ಕಣ್ಣಿನ ಬಾಗದಲ್ಲಿ ತೀವ್ರ ಗಾಯಗಳಾಗಿವೆ.